Home / ಕವನ / ಕವಿತೆ / ಜೀವನದೀ ಮಧುಮಾಸಂ

ಜೀವನದೀ ಮಧುಮಾಸಂ

ಜೀವನದೀ ಮಧುಮಾಸಂ
ಬತ್ತುತ ಬಂತು,
ಮನಸಿನ ಮಧುರವಿಕಾಸಂ
ನನೆಯೊಳೆ ಸಂತು;
ಮುಸುರಿದ ಮಕರಂದಪಾನ
ಮೊದವದೆದೆಯ ಭ್ರಮರಗಾನ
ಮೆಚ್ಚರಲೆಂತು? ೭

ಮನೆಗೆಯ್ದಕ್ಕರೆಯ ಪಿಕಂ
ಪಾರಿದುದೆಲ್ಲಿ?
ಗೂಡುಗೊಂಡ ಹಿಂಡು ಶುಕಂ
ಕಾಣಿಸವಿಲ್ಲಿ!
ಅಳಲ ಕಣಜವಿನ್ನು ಸಾಗೆ,
ಹಗಲುದ್ದಕೆ ಮರುಗೆ ಗೂಗೆ,
ಚೀರ್ವುದು ಹಲ್ಲಿ ೧೪

ನಡುಚೈತ್ರದಿ ಮಸಗೆ ಗ್ರೀಷ್ಮ,
ಬೇಯದೆ ಮನಸು?
ಮಗಚದೆ ಮೃಗಜಲದೊಳೂಷ್ಮ
ಕಡಸಿದ ಕನಸು?
೧ಪಾತೆಯೆಲರ ೨ಪಾತಿಯಿಲ್ಲ,
ತರಗೆಲೆಗಳ ೩ಬಟ್ಟೆಯೊಲ್ಲ
ಡೇವುದೊ ನೆನಸು? ೨೧

ತೆರೆಯಿಲ್ಲದ ಕಡಲೊಳಿಲ್ಲಿ
ದಾವ ದಾವರಂ?
ಮರಳಿಲ್ಲದ ಮರುವೊಳಲ್ಲಿ೪
ಕಾವ ಕಾವರಂ!
ಮುಗಿಲಲಿ ರವಿಶಶಿಯ ಕೀಸೆ
ಸಿಡಿವ ಕಿಡಿಯೊ ಕೆಲಮೆ ಸೂಸೆ
ಸೀವ ಸೀವರಂ? ೨೮

ಬೇಗೆ ಮಸುಕಲಿಂತು ಶಾನೆ
ದೂರವೆ ವೃಷ್ಟಿ?
ತಂಬನಿಗಿಂಬಾಗೆ ತಾನೆ
ಮೊಳೆಯದೆ ಸೃಷ್ಟಿ ?
ಹಸುರು ಹಗಲು ಹೊರಳೆ, ಹೊಂಚು
ಹಾಕದೆ ನೂರಾರು ಮಿಂಚು
ಹುಳಗಳ ದೃಷ್ಟಿ? ೩೫

ಒಮ್ಮೆ ಮುಗಿಯಲದೆ ವಸಂತ
ವಿನ್ನಹುದಳವ?
ಒಮ್ಮೆ ಮುಗಿದ ತನುವನಂತ
ರಂ ನಮಗೊಳವೆ?
ಸುಗ್ಗಿ ಮುಗಿದೆ ಮಳೆಯಲ್ಲವೆ?
ತನು ಮುಗಿದಡೆ ಕೆಳೆಯಿಲ್ಲವೆ?-
ಕೆಳೆಗೇನಳಿನೆ? ೪೨
****
೧ ಪಾತರಗಿತ್ತಿ
೨ ಪಾತಿ=ದೋಣಿ
೩ ದಾರಿ
೪ ಅಲ್ಲಿ=ಆಕಾಶದಲ್ಲಿ

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್