Home / ಲೇಖನ / ಇತರೆ / ಮ್ಯಾನ್ ಬುಕರ್

ಮ್ಯಾನ್ ಬುಕರ್

೨೦೧೫ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಉತ್ತಮ ಕಾದಂಬರಿಗೆ ಈ ನಗದು ಸಾಹಿತ್ಯ ಪುರಸ್ಕಾರ ಲಭಿಸುವುದು.

ಈ ನಗದು ಪ್ರಶಸ್ತಿಯನ್ನು ಮೊತ್ತಮೊದಲ ಬಾರಿಗೆ ೧೯೬೯ರಿಂದಲೂ ಕೊಡಮಾಡುತ್ತಾ ಬಂದಿದೆಯೆಂದು ಲಂಡನ್‌ನಿಂದ ವರದಿಯಾಗಿರುವುದು.

ಭವ್ಯ ಭಾರತದ ಲೇಖಕಿ ಅನುರಾಧಾರಾಯ್‌ ಸೇರಿದಂತೆ ಒಟ್ಟು ೧೩ ಮಂದಿ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿಯಲ್ಲಿ ಈಗಾಗಲೇ ಸ್ಥಾನಮಾನ ಪಡೆದಿರುವರು! ಈ ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಸೇರ್‍ಪಡೆಗೊಳ್ಳುವುದೂ ಒಂದು ಹೆಮ್ಮೆಯ ಸಾಧನೆಯೆಂದೇ ಪರಿಗಣಿಸಲ್ಪಡುವರು.

ಅನುರಾಧಾ ರಾಯ್ ಅವರ- “ಸ್ಲೀ ಪಿಂಗ್ ಅನ್ ಜುಪಿಟರ್” ಕೃತಿ ಈ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿದ್ದಾರೆ!

ಈ ಪ್ರಶಸ್ತಿ ಪಟ್ಟಿಯಲ್ಲಿನ ೧೩ ಕೃತಿಗಳಲ್ಲಿ ಬ್ರಿಟನ್ ಲೇಖಕ ಟೊಮ್ ಮ್ಯಾಕ್‌ಕರ್‍ತಿ ಅವರ ‘ಸವೈ ಐಸ್ಲಾಂಡ್, ಆಂಡ್ರೂ ಒ ಹಗನ್ ಅವರ- ದಿ ಇಲ್ಯುಮಿನೇಷನ್, ಭಾರತ ಮೂಲದ ಲೇಖಕ ಸಂಜೀವ್‌ಸಹೊತ ಅವರ ‘ದಿ ಇಯರ್ ಆಫ್ ದಿ ರನ್‌ ವೇಸ್’ ಒಳಗೊಂಡಿವೆ.

ಐವರು ಸದಸ್ಯರನ್ನೊಳಗೊಂಡ ತೀರ್‍ಪುಗಾರರು ಈಗಾಗಲೇ ಒಟ್ಟು ೧೫೬ ಕೃತಿಗಳಲ್ಲಿ ೧೩ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದರಲ್ಲಿ ಆಯ್ದ ಆರು ಕೃತಿಗಳ ಅಂತಿಮ ಪಟ್ಟಿಯನ್ನು ೨೦೧೫ರ ಸೆಪ್ಟೆಂಬರ್‌ನಲ್ಲಿ ಪ್ರಕಟಿಸುವರು.

೨೦೧೫ರ ಅಕ್ಟೋಬರ್ ೧೩ರಂದು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮವಾಗಿ ಘೋಷಿಸುವರು.

ಇದು ೨೦೧೫ರ ಮ್ಯಾನ್‌ಬುಕರ್ ಪ್ರಶಸ್ತಿಯ ರೂಪರೇಷೆಯಾಗಿದ್ದು ಭವ್ಯ ಭಾರತದ ಅನುರಾಧಾ ರಾಯ್ ಅವರಿಗೆ ಈ ಸಾರಿಯ ಪ್ರಶಸ್ತಿಯು ಲಭಿಸಲೆಂದು ನಾವು ನೀವು ಶುಭ ಕೋರೋಣವಲ್ಲವೇ?

ನನ್ನ ಮುದ್ದು ಪುಟಾಣಿಗಳೆ… ನೀವೆಲ್ಲ ಇಂದಿನಿಂದಲೇ ಮನಸ್ಸು ಮಾಡಿ! ನಾನೂ ಇಂಗ್ಲೀಷ್ ಸಾಹಿತ್ಯ ಅಭ್ಯಾಸ ಮಾಡಿ ಇಂಗ್ಲೀಷ್‌ನಲ್ಲಿ ಸಾಧನೆ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತೇನೆಂಬ ಗುರಿ, ಹಠ, ಸಾಧನೆ ಹೊಂದುವಿರಲ್ಲವೇ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...