ಮ್ಯಾನ್ ಬುಕರ್

ಮ್ಯಾನ್ ಬುಕರ್

೨೦೧೫ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಉತ್ತಮ ಕಾದಂಬರಿಗೆ ಈ ನಗದು ಸಾಹಿತ್ಯ ಪುರಸ್ಕಾರ ಲಭಿಸುವುದು.

ಈ ನಗದು ಪ್ರಶಸ್ತಿಯನ್ನು ಮೊತ್ತಮೊದಲ ಬಾರಿಗೆ ೧೯೬೯ರಿಂದಲೂ ಕೊಡಮಾಡುತ್ತಾ ಬಂದಿದೆಯೆಂದು ಲಂಡನ್‌ನಿಂದ ವರದಿಯಾಗಿರುವುದು.

ಭವ್ಯ ಭಾರತದ ಲೇಖಕಿ ಅನುರಾಧಾರಾಯ್‌ ಸೇರಿದಂತೆ ಒಟ್ಟು ೧೩ ಮಂದಿ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿಯಲ್ಲಿ ಈಗಾಗಲೇ ಸ್ಥಾನಮಾನ ಪಡೆದಿರುವರು! ಈ ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಸೇರ್‍ಪಡೆಗೊಳ್ಳುವುದೂ ಒಂದು ಹೆಮ್ಮೆಯ ಸಾಧನೆಯೆಂದೇ ಪರಿಗಣಿಸಲ್ಪಡುವರು.

ಅನುರಾಧಾ ರಾಯ್ ಅವರ- “ಸ್ಲೀ ಪಿಂಗ್ ಅನ್ ಜುಪಿಟರ್” ಕೃತಿ ಈ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿದ್ದಾರೆ!

ಈ ಪ್ರಶಸ್ತಿ ಪಟ್ಟಿಯಲ್ಲಿನ ೧೩ ಕೃತಿಗಳಲ್ಲಿ ಬ್ರಿಟನ್ ಲೇಖಕ ಟೊಮ್ ಮ್ಯಾಕ್‌ಕರ್‍ತಿ ಅವರ ‘ಸವೈ ಐಸ್ಲಾಂಡ್, ಆಂಡ್ರೂ ಒ ಹಗನ್ ಅವರ- ದಿ ಇಲ್ಯುಮಿನೇಷನ್, ಭಾರತ ಮೂಲದ ಲೇಖಕ ಸಂಜೀವ್‌ಸಹೊತ ಅವರ ‘ದಿ ಇಯರ್ ಆಫ್ ದಿ ರನ್‌ ವೇಸ್’ ಒಳಗೊಂಡಿವೆ.

ಐವರು ಸದಸ್ಯರನ್ನೊಳಗೊಂಡ ತೀರ್‍ಪುಗಾರರು ಈಗಾಗಲೇ ಒಟ್ಟು ೧೫೬ ಕೃತಿಗಳಲ್ಲಿ ೧೩ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದರಲ್ಲಿ ಆಯ್ದ ಆರು ಕೃತಿಗಳ ಅಂತಿಮ ಪಟ್ಟಿಯನ್ನು ೨೦೧೫ರ ಸೆಪ್ಟೆಂಬರ್‌ನಲ್ಲಿ ಪ್ರಕಟಿಸುವರು.

೨೦೧೫ರ ಅಕ್ಟೋಬರ್ ೧೩ರಂದು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮವಾಗಿ ಘೋಷಿಸುವರು.

ಇದು ೨೦೧೫ರ ಮ್ಯಾನ್‌ಬುಕರ್ ಪ್ರಶಸ್ತಿಯ ರೂಪರೇಷೆಯಾಗಿದ್ದು ಭವ್ಯ ಭಾರತದ ಅನುರಾಧಾ ರಾಯ್ ಅವರಿಗೆ ಈ ಸಾರಿಯ ಪ್ರಶಸ್ತಿಯು ಲಭಿಸಲೆಂದು ನಾವು ನೀವು ಶುಭ ಕೋರೋಣವಲ್ಲವೇ?

ನನ್ನ ಮುದ್ದು ಪುಟಾಣಿಗಳೆ… ನೀವೆಲ್ಲ ಇಂದಿನಿಂದಲೇ ಮನಸ್ಸು ಮಾಡಿ! ನಾನೂ ಇಂಗ್ಲೀಷ್ ಸಾಹಿತ್ಯ ಅಭ್ಯಾಸ ಮಾಡಿ ಇಂಗ್ಲೀಷ್‌ನಲ್ಲಿ ಸಾಧನೆ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತೇನೆಂಬ ಗುರಿ, ಹಠ, ಸಾಧನೆ ಹೊಂದುವಿರಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನದೀ ಮಧುಮಾಸಂ
Next post ಅನ್ವೇಷಣೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…