Home / ಲೇಖನ / ಇತರೆ / ಮ್ಯಾನ್ ಬುಕರ್

ಮ್ಯಾನ್ ಬುಕರ್

೨೦೧೫ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಉತ್ತಮ ಕಾದಂಬರಿಗೆ ಈ ನಗದು ಸಾಹಿತ್ಯ ಪುರಸ್ಕಾರ ಲಭಿಸುವುದು.

ಈ ನಗದು ಪ್ರಶಸ್ತಿಯನ್ನು ಮೊತ್ತಮೊದಲ ಬಾರಿಗೆ ೧೯೬೯ರಿಂದಲೂ ಕೊಡಮಾಡುತ್ತಾ ಬಂದಿದೆಯೆಂದು ಲಂಡನ್‌ನಿಂದ ವರದಿಯಾಗಿರುವುದು.

ಭವ್ಯ ಭಾರತದ ಲೇಖಕಿ ಅನುರಾಧಾರಾಯ್‌ ಸೇರಿದಂತೆ ಒಟ್ಟು ೧೩ ಮಂದಿ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿಯಲ್ಲಿ ಈಗಾಗಲೇ ಸ್ಥಾನಮಾನ ಪಡೆದಿರುವರು! ಈ ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಸೇರ್‍ಪಡೆಗೊಳ್ಳುವುದೂ ಒಂದು ಹೆಮ್ಮೆಯ ಸಾಧನೆಯೆಂದೇ ಪರಿಗಣಿಸಲ್ಪಡುವರು.

ಅನುರಾಧಾ ರಾಯ್ ಅವರ- “ಸ್ಲೀ ಪಿಂಗ್ ಅನ್ ಜುಪಿಟರ್” ಕೃತಿ ಈ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿದ್ದಾರೆ!

ಈ ಪ್ರಶಸ್ತಿ ಪಟ್ಟಿಯಲ್ಲಿನ ೧೩ ಕೃತಿಗಳಲ್ಲಿ ಬ್ರಿಟನ್ ಲೇಖಕ ಟೊಮ್ ಮ್ಯಾಕ್‌ಕರ್‍ತಿ ಅವರ ‘ಸವೈ ಐಸ್ಲಾಂಡ್, ಆಂಡ್ರೂ ಒ ಹಗನ್ ಅವರ- ದಿ ಇಲ್ಯುಮಿನೇಷನ್, ಭಾರತ ಮೂಲದ ಲೇಖಕ ಸಂಜೀವ್‌ಸಹೊತ ಅವರ ‘ದಿ ಇಯರ್ ಆಫ್ ದಿ ರನ್‌ ವೇಸ್’ ಒಳಗೊಂಡಿವೆ.

ಐವರು ಸದಸ್ಯರನ್ನೊಳಗೊಂಡ ತೀರ್‍ಪುಗಾರರು ಈಗಾಗಲೇ ಒಟ್ಟು ೧೫೬ ಕೃತಿಗಳಲ್ಲಿ ೧೩ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದರಲ್ಲಿ ಆಯ್ದ ಆರು ಕೃತಿಗಳ ಅಂತಿಮ ಪಟ್ಟಿಯನ್ನು ೨೦೧೫ರ ಸೆಪ್ಟೆಂಬರ್‌ನಲ್ಲಿ ಪ್ರಕಟಿಸುವರು.

೨೦೧೫ರ ಅಕ್ಟೋಬರ್ ೧೩ರಂದು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮವಾಗಿ ಘೋಷಿಸುವರು.

ಇದು ೨೦೧೫ರ ಮ್ಯಾನ್‌ಬುಕರ್ ಪ್ರಶಸ್ತಿಯ ರೂಪರೇಷೆಯಾಗಿದ್ದು ಭವ್ಯ ಭಾರತದ ಅನುರಾಧಾ ರಾಯ್ ಅವರಿಗೆ ಈ ಸಾರಿಯ ಪ್ರಶಸ್ತಿಯು ಲಭಿಸಲೆಂದು ನಾವು ನೀವು ಶುಭ ಕೋರೋಣವಲ್ಲವೇ?

ನನ್ನ ಮುದ್ದು ಪುಟಾಣಿಗಳೆ… ನೀವೆಲ್ಲ ಇಂದಿನಿಂದಲೇ ಮನಸ್ಸು ಮಾಡಿ! ನಾನೂ ಇಂಗ್ಲೀಷ್ ಸಾಹಿತ್ಯ ಅಭ್ಯಾಸ ಮಾಡಿ ಇಂಗ್ಲೀಷ್‌ನಲ್ಲಿ ಸಾಧನೆ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತೇನೆಂಬ ಗುರಿ, ಹಠ, ಸಾಧನೆ ಹೊಂದುವಿರಲ್ಲವೇ?
*****

Tagged:

Leave a Reply

Your email address will not be published. Required fields are marked *

ಲೋಕದ ಲಕ್ಷೋಪಲಕ್ಷ ಕೋಟಿ ಜನಸಂಖ್ಯೆಯಲ್ಲಿ ಕೆಲವರ ಮುಖಗಳು ಒಂದೇ ತರ ಇರಬಹುದು. ಒಬ್ಬರ ಮುಖ ಒಬ್ಬರದನ್ನು ಹೋಲುವ ಹಲವಾರು ಜನರಿದ್ದಾರೆ. ಒಬ್ಬರ ಮುಖ ಇನ್ನೊಬ್ಬರ ಮುಖದ ಅಚ್ಚು ಮುದ್ದೆಯಂತೆ ಕಾಣುವ ಜೋಡಿಗಳು ಹಲವು. ಅವರಲ್ಲಿ ಯಾರು ಯಾರೆಂಬುವುದು ಗುರುತಿಸುವುದು ಕಷ್ಟ. ಆದರೆ ಇಷ್ಟು ಜನ...

ದಳವಾಯಿ ದೇವರಾಜಯ್ಯನು ಸತ್ಯಮಂಗಲಕ್ಕೆ ಹೊರಟು ಹೋದಮೇಲೆ ರಾಜಧಾನಿಯಲ್ಲಿ ಸರ್ವಶಕ್ತನಾಗಿದ್ದ ಕರಾಚೂರಿ ಯಾತನಿಗೆ ನಿಶ್ಚಿಂತೆಯಾಗಿರಲಿಲ್ಲ. ಅದೇ ಸಮಯಕ್ಕೆ ಮರಾಟೆ ಯವರು ರಾಜಧಾನಿಯ ಬಳಿ ಪ್ರತ್ಯಕ್ಷರಾಗಿ ಹಣಕ್ಕೆ ತೊಂದರೆ ಪಡಿಸಿದರು; ಹಣವಿಲ್ಲವೆಂದು ನಂಜರಾಜಯ್ಯನು ಹೇಳಿದರೂ ಮರಾಟೆಯವರು ಹ...

ನೀವು ದೊಡ್ಡ ಪಟ್ಟಣವೊಂದರ ಬಹು ಜನ ನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಿರಿ. ನಿಮಗರಿವಿಲ್ಲದಂತೆ ಸಂಚರಿಸುವ ವಾಹನಗಳ ಬಹು ಚಾಲಾಕಿತನದಲ್ಲಿಯೇ ನಿಮ್ಮ ಸುಪ್ತಮನಸ್ಸಿನ ಪ್ರೇರಣೆಗೆ ಒಳಗಾದಂತೆ ಅದರ ನಿರ್ದೇಶನದಂತೆ ಸುರಕ್ಷಿತವಾಗಿ ರಸ್ತೆಯನ್ನು ದಾಟಿ ಸಮಾಧಾನದ ನಿಟ್ಟ...

ಅವಸಾನಕಾಲದಲ್ಲಿ ಸರ್ವಾಧಿಕಾರಿ ನಂಜರಾಜಯ್ಯನು ಪಶ್ಚಾತ್ತಾಪಪಡುತ್ತ ರಾಜರಿಗೆ “ನನ್ನ ತರುವಾಯ ನನ್ನ ಪದವಿಗೆ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜಯ್ಯನನ್ನು ನಿಯಮಿಸಿದರೆ ಅನರ್ಥಗಳು ಸಂಭವಿಸುತ್ತವೆ” ಎಂದು ಎಚ್ಚರಿಕೆ ಕೊಟ್ಟನಷ್ಟೆ. ರಾಜರಿಗೆ ಹೆಚ್ಚು ಅಧಿಕಾರವಿಲ್ಲದೆ ದೇ...

ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವಂತವಾಗಿ ಕರಗಿ ಹೋಗಿವೆ. ಅವನು ತನ್ನನ...

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ...