ನವೆಂಬರ್ ಕನ್ನಡ

ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ
ನವೆಂಬರ್ ಒಂದರಲ್ಲಿ
ಆದರೂ ‘ಕನ್ನಡ ಉಳಿಸಿ’ ಮಾತು
ಇಡೀ ವರ್ಷದಲ್ಲಿ
ಅಲ್ಲೂ ಕನ್ನಡ ಇಲ್ಲೂ ಕನ್ನಡ
ಎಲ್ಲೆಲ್ಲು ಕನ್ನಡವೋ ಕನ್ನಡ
ತಿಂಗಳಾಯಿತೆಂದರೇ…
ನಿರಭಿಮಾನ ಬಗ್ಗಡವೋ ಬಗ್ಗಡ!
ಅಲ್ಲಿ ನೋಡು ಕನ್ನಡ ಇಲ್ಲಿ ನೋಡು ಕನ್ನಡ
ಮೇಲೆ ನೋಡು ಕನ್ನಡ ಕೆಳಗೆ ನೋಡು ಕನ್ನಡ
ಭುವನೇಶ್ವರಿ ವೀರಭಟರ ಬಾಯಿ ತುಂಬ ಕನ್ನಡ
ಅಂಬೇಡ್ಕರ್ ವೀದಿಯಲಿ ನಾಯಕ ಮೆರವಣಿಗೆಯಲ್ಲಿ
ಕಲ್ಲು ಕಲ್ಲು ನಡುಗುವಂತೆ ಕೇಳಿ ಬಂತು ಕನ್ಡನ
ಕನ್ನಡಕ್ಕೆ ಶಾಪ ಏನೋ
ಕಣ್ಣು ಕಿವಿ ಮುಚ್ಚಿತ್ತು ವಿಧಾನಸೌಧ ಕಟ್ಟಡ!
ಕನ್ನಡ… ಕನ್ನಡ… ಆಕಾಶವ ತಬ್ಬಿತು
ಗಾಳಿಯನ್ನು ತುಂಬಿತು ಎಲ್ಲೆಲ್ಲೂ ಚೆಲ್ಲುವರಿದು
ಬಾಯ್ಮಾತಿಗೂ ಇಳಿಯಿತು
ಹೃದಯಕೇಕೋ ಇಳಿಯಲಿಲ್ಲ
ಅಂತರಂಗವಾಗಲಿಲ್ಲ
ಬಹಿರಂಗದ ಕನ್ನಡ ನಾವ್ ಕೊಂದ ಕನ್ನಡ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೀತಲ
Next post ಜೀವನದೀ ಮಧುಮಾಸಂ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…