Home / ಕವನ / ಕವಿತೆ / ಗೆಲುವು

ಗೆಲುವು


ನೋಡು ಗೆಳೆಯ ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ
ಬಿತ್ತಿರುವುದ ಬೆಳೆಯಲೆಂದು
ಗಾಳಿಮಳೆಯು ಜೀಕುತಿದೆ.
ಅದಕಂತೆಯೆ ಎದೆಯುದ್ದಕೆ
ಹೊಲದ ನಿಲುವು ತೂಗುತಿದೆ
ಕಾರ್‍ಗಾಲದ ಹೊಸ ಹೊಂಚಿದು;
ಕಾಲಪುರುಷನೊಳಸಂಚಿದು :
ಬಾನಂಗಳಕೇಳ್ವುದೆನಲು
ಮುಗಿಲೆ ನೆಲಕೆ ಬಾಗುತಿದೆ !
ನೋಡು, ಗೆಳೆಯ ! ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ.


ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.
ಬಂತೆ ಕ್ರಾಂತಿಯೆಂದು ಹಿಗ್ಗಿ
ಲೋಕವೆಲ್ಲ ಕೇಳುತಿದೆ.
ನಲಿದು ಸತ್ಯ ಪಥವ ತೋರಿ
ಋಷಿವೃಂದವು ಬಾಳುತಿದೆ
ಸ್ವಾತಂತ್ರ್ಯದ ಸವಿಯುಸಿರಿದು
ಸಮತೆ ಹೊತ್ತ ಹೊಂಬಸಿರಿದು.
ಜಗವು- ಬರುವುದನ್ನು ನೆನೆದು
ಬಂದಿಹುದನು ತಾಳುತಿದೆ !
ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.


ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !
ಅಳಿಗಾಲವೆ ಇದು ಕೊನೆಯೆ ?
ಮುಂದುವರಿಸು ಹಾಡನು !
ಇಂದಿಗಿಲ್ಲಿ ಕಟ್ಟಿ ಬಿಡುವ
ನಾಡ ಕಟ್ಟು ಪಾಡನು !
ಇಂದಿನ ನುಡಿ ಗುಡುಗು ಸಿಡಿಲು
ಅದಕದೋ ! ಅವಿದ್ಯೆ ಮಡಿಲು.
ನಾಡೆದೆ ಮಂಥಿಸುತ್ತ ತರುವ
ಚಂದ್ರನಂಥ ಕೋಡನು !
ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !


ನೋಡು ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
ನಾಡಿನೊಲವ ನಾಡ ಗೆಲುವ
ಕೊರಲತುಂಬ ಸಾರುತಿವೆ.
ಉಜ್ಜೀವನದುಡ್ಯಾಣದಿ
ತಮ್ಮನೆ ತಾವ್ ಮೀರುತಿವೆ :
ಇರಲಿದೆಮ್ಮ ಜೀವನ
ಆಗಲಿಂತು ವಾವನ
ನೋಡು! ದಿವ್ಯ ಭವ್ಯ ಶಕ್ತಿ
ಕಾಳನೊಡನೆ ಹೋರುತಿವೆ!
ಮತ್ತೆ ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...