ಗೆಲುವು


ನೋಡು ಗೆಳೆಯ ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ
ಬಿತ್ತಿರುವುದ ಬೆಳೆಯಲೆಂದು
ಗಾಳಿಮಳೆಯು ಜೀಕುತಿದೆ.
ಅದಕಂತೆಯೆ ಎದೆಯುದ್ದಕೆ
ಹೊಲದ ನಿಲುವು ತೂಗುತಿದೆ
ಕಾರ್‍ಗಾಲದ ಹೊಸ ಹೊಂಚಿದು;
ಕಾಲಪುರುಷನೊಳಸಂಚಿದು :
ಬಾನಂಗಳಕೇಳ್ವುದೆನಲು
ಮುಗಿಲೆ ನೆಲಕೆ ಬಾಗುತಿದೆ !
ನೋಡು, ಗೆಳೆಯ ! ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ.


ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.
ಬಂತೆ ಕ್ರಾಂತಿಯೆಂದು ಹಿಗ್ಗಿ
ಲೋಕವೆಲ್ಲ ಕೇಳುತಿದೆ.
ನಲಿದು ಸತ್ಯ ಪಥವ ತೋರಿ
ಋಷಿವೃಂದವು ಬಾಳುತಿದೆ
ಸ್ವಾತಂತ್ರ್ಯದ ಸವಿಯುಸಿರಿದು
ಸಮತೆ ಹೊತ್ತ ಹೊಂಬಸಿರಿದು.
ಜಗವು- ಬರುವುದನ್ನು ನೆನೆದು
ಬಂದಿಹುದನು ತಾಳುತಿದೆ !
ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.


ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !
ಅಳಿಗಾಲವೆ ಇದು ಕೊನೆಯೆ ?
ಮುಂದುವರಿಸು ಹಾಡನು !
ಇಂದಿಗಿಲ್ಲಿ ಕಟ್ಟಿ ಬಿಡುವ
ನಾಡ ಕಟ್ಟು ಪಾಡನು !
ಇಂದಿನ ನುಡಿ ಗುಡುಗು ಸಿಡಿಲು
ಅದಕದೋ ! ಅವಿದ್ಯೆ ಮಡಿಲು.
ನಾಡೆದೆ ಮಂಥಿಸುತ್ತ ತರುವ
ಚಂದ್ರನಂಥ ಕೋಡನು !
ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !


ನೋಡು ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
ನಾಡಿನೊಲವ ನಾಡ ಗೆಲುವ
ಕೊರಲತುಂಬ ಸಾರುತಿವೆ.
ಉಜ್ಜೀವನದುಡ್ಯಾಣದಿ
ತಮ್ಮನೆ ತಾವ್ ಮೀರುತಿವೆ :
ಇರಲಿದೆಮ್ಮ ಜೀವನ
ಆಗಲಿಂತು ವಾವನ
ನೋಡು! ದಿವ್ಯ ಭವ್ಯ ಶಕ್ತಿ
ಕಾಳನೊಡನೆ ಹೋರುತಿವೆ!
ಮತ್ತೆ ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದೊ, ಶ್ರಾವಣ ಬಂದಿದೆ!
Next post ಕತೆಗಾಗಿ ಜತೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…