ಕುರುಹು

ಕುರುಹು

ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ
ದೇವರಿಲ್ಲದ ದೇಗುಲಕ್ಕೆ ಮಂತ್ರ ಅಭಿಷೇಕವುಂಟೆ
ಅರಿವು ನಷ್ಟವಾಗಿ
ಕುರುವಿನ ಹಾವಚೆಯ ನಾನರಿಯೆನೆಂದನಂಬಿಗ ಚವುಡಯ್ಯ

ಮಾತನಾಡುವುದು ಗಿಣಿ ಮಾತ್ರ, ಪಂಜರವಲ್ಲ. ಅಭಿಷೇಕ ದೇವರಿಗೇ ಹೊರತು ದೇಗುಲಕ್ಕಲ್ಲ. ಪಂಜರ, ದೇಗುಲ ಇವು ಕೇವಲ ಕುರುಹುಗಳು. ಅರಿವಿಲ್ಲದ ಕುರುಹು ಕೇವಲ ಹಾವಸೆ, ಅಥವಾ ಪಾಚಿ, ಅದರ ಹಂಗು ಬೇಡ ಅನ್ನುತ್ತಾನೆ ಅಂಬಿಗ ಚವುಡಯ್ಯ.

ಇದೇ ಮಾತನ್ನು ಮುಂದುವರೆಸಿದರೆ ಕವಿತೆ ಮುಖ್ಯವಾಗಬೇಕಲ್ಲದೆ ಕವಿಯಲ್ಲ, ಕಾರ್ಯ ಮುಖ್ಯವಾಗಬೇಕಲ್ಲದೆ ಕರ್ತೃವಲ್ಲ, ಅಡುಗೆ ಮುಖ್ಯವಾಗಬೇಕಲ್ಲದೆ ಅಡುಗೆಯವರಲ್ಲ, ತಜ್ಞತೆ ಮುಖ್ಯವಾಗಬೇಕಲ್ಲದೆ ತಜ್ಞರು ಅಲ್ಲ ಎಂದು ಎಷ್ಟು ಬೇಕಾದರೂ ಹೇಳಬಹುದು.

ಹಾಗೆ ಎರಡನ್ನೂ ಬಿಡಿಸಿ ಬಿಡಿಸಿ ನೋಡಲು ಆಗುವುದೇ? ಕವಿತೆಯನ್ನು ನಿಂದಿಸಿದರೆ ಕವಿ ನೋಯುವುದಿಲ್ಲವೇ? ಮಾಡಿದ ಕೆಲಸ ಅಸಮರ್ಪಕ ಎಂದರೆ ಮಾಡಿದವರಿಗೆ ಬೇಸರವಾಗದೇ? ತಜ್ಞತೆಯನ್ನು ಪ್ರಶ್ನಿಸಿದರೆ ತಜ್ಞರು ಕೆರಳರೇ? ಬಿಡಿಸಿ ನೋಡುವ, ಒಟ್ಟಾಗಿ ಅರಿವ ಹದ ತಿಳಿಯಬೇಕೆನ್ನುವುದೇ ವಚನಗಳ ಮುಖ್ಯ ಉದ್ದೇಶಗಳಲ್ಲಿ ಒಂದು. ಕಷ್ಟ, ಆದರೆ ಅಸಾಧ್ಯವೇ? ವ್ಯಕ್ತಿಯನ್ನು ಟೀಕಿಸದೆ ವ್ಯಕ್ತಿಯ ಕಾರ್ಯವನ್ನು ಮಾತ್ರ ಟೀಕಿಸುವ ಪ್ರೀತಿ ಸಾಧ್ಯವಾದರೆ ಎಷ್ಟು ಚೆನ್ನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮಿಯ ಗಂಡು
Next post ಉಮರನ ಒಸಗೆ – ೪

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…