ಕುರುಹು

ಕುರುಹು

ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ
ದೇವರಿಲ್ಲದ ದೇಗುಲಕ್ಕೆ ಮಂತ್ರ ಅಭಿಷೇಕವುಂಟೆ
ಅರಿವು ನಷ್ಟವಾಗಿ
ಕುರುವಿನ ಹಾವಚೆಯ ನಾನರಿಯೆನೆಂದನಂಬಿಗ ಚವುಡಯ್ಯ

ಮಾತನಾಡುವುದು ಗಿಣಿ ಮಾತ್ರ, ಪಂಜರವಲ್ಲ. ಅಭಿಷೇಕ ದೇವರಿಗೇ ಹೊರತು ದೇಗುಲಕ್ಕಲ್ಲ. ಪಂಜರ, ದೇಗುಲ ಇವು ಕೇವಲ ಕುರುಹುಗಳು. ಅರಿವಿಲ್ಲದ ಕುರುಹು ಕೇವಲ ಹಾವಸೆ, ಅಥವಾ ಪಾಚಿ, ಅದರ ಹಂಗು ಬೇಡ ಅನ್ನುತ್ತಾನೆ ಅಂಬಿಗ ಚವುಡಯ್ಯ.

ಇದೇ ಮಾತನ್ನು ಮುಂದುವರೆಸಿದರೆ ಕವಿತೆ ಮುಖ್ಯವಾಗಬೇಕಲ್ಲದೆ ಕವಿಯಲ್ಲ, ಕಾರ್ಯ ಮುಖ್ಯವಾಗಬೇಕಲ್ಲದೆ ಕರ್ತೃವಲ್ಲ, ಅಡುಗೆ ಮುಖ್ಯವಾಗಬೇಕಲ್ಲದೆ ಅಡುಗೆಯವರಲ್ಲ, ತಜ್ಞತೆ ಮುಖ್ಯವಾಗಬೇಕಲ್ಲದೆ ತಜ್ಞರು ಅಲ್ಲ ಎಂದು ಎಷ್ಟು ಬೇಕಾದರೂ ಹೇಳಬಹುದು.

ಹಾಗೆ ಎರಡನ್ನೂ ಬಿಡಿಸಿ ಬಿಡಿಸಿ ನೋಡಲು ಆಗುವುದೇ? ಕವಿತೆಯನ್ನು ನಿಂದಿಸಿದರೆ ಕವಿ ನೋಯುವುದಿಲ್ಲವೇ? ಮಾಡಿದ ಕೆಲಸ ಅಸಮರ್ಪಕ ಎಂದರೆ ಮಾಡಿದವರಿಗೆ ಬೇಸರವಾಗದೇ? ತಜ್ಞತೆಯನ್ನು ಪ್ರಶ್ನಿಸಿದರೆ ತಜ್ಞರು ಕೆರಳರೇ? ಬಿಡಿಸಿ ನೋಡುವ, ಒಟ್ಟಾಗಿ ಅರಿವ ಹದ ತಿಳಿಯಬೇಕೆನ್ನುವುದೇ ವಚನಗಳ ಮುಖ್ಯ ಉದ್ದೇಶಗಳಲ್ಲಿ ಒಂದು. ಕಷ್ಟ, ಆದರೆ ಅಸಾಧ್ಯವೇ? ವ್ಯಕ್ತಿಯನ್ನು ಟೀಕಿಸದೆ ವ್ಯಕ್ತಿಯ ಕಾರ್ಯವನ್ನು ಮಾತ್ರ ಟೀಕಿಸುವ ಪ್ರೀತಿ ಸಾಧ್ಯವಾದರೆ ಎಷ್ಟು ಚೆನ್ನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮಿಯ ಗಂಡು
Next post ಉಮರನ ಒಸಗೆ – ೪

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…