ನಿರಂತರ

ಶತಶತಮಾನಗಳಿಂದ
ಧಗಧಗನೆ ಹೊತ್ತಿ
ಉರಿಯುತ್ತಲೇ ಇದೆ
ಈ ಅಗ್ನಿಕುಂಡ.

ಬೇಯುತ್ತಲೇ ಇದೆ
ತಪ್ಪಲೆಯೊಳಗೆ
ಅನ್ನವಾಗದ ಅಕ್ಕಿ!
ಮತ್ತೆ ಮತ್ತೆ
ಸೌದೆಯೊಟ್ಟಿ
ಉರಿ ಹೆಚ್ಚಿಸುವ ಕಾಯಕ.

ತಪ್ಪಲೆಗೆ ನೀರು ಸುರಿದು
ತಳ ಸೀಯದಂತೆ
ಕಾಯುವ ಕರ್ಮ
ನಡೆದೇ ಇದೆ ನಿರಂತರ.

ಆದರೂ
ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ.
ಎದುರಿಗೆ ಕುಳಿತ
ಮಂದಿಗೆ
ಬ್ರಹ್ಮಾಂಡ ಹಸಿವು

ಒಳ – ಹೊರಗೆಲ್ಲಾ
ಚುರುಗುಡುವ ಕಾವು ಅನ್ನವಾಗದ
ಅಕ್ಕಿಯನ್ನೇ ಮುಕ್ಕಿಬಿಡುವ
ಉಮೇದು!

ಅನ್ನವಾಗುವವರೆಗೂ
ತಪ್ಪಲೆ ಮುಟ್ಟಲಾಗದ
ಶಾಪ ಇವರಿಗೆ
ಕಾಯಲಾರೆವೆಂದರೆ ಹೇಗೆ?

ತಪ್ಪಲೆಯ ನೀರು
ಕೊತಕೊತನೆ ಕುದಿವ ರಭಸಕ್ಕೆ
ಹೊರ ಹಾರಿದ
ಒಂದೋ ಎರಡೋ
ಅಕ್ಕಿ ಕಾಳಿಗೇ ಇಲ್ಲಿ

ಹೊಡೆದಾಟ ಬಡಿದಾಟ
ಮೈಕೈ ಮುರಿದಾಟ
ಅಕ್ಕಿಕಾಳು
ಸಿಕ್ಕಿದವರು
ಪಚನವಾಗದಿದ್ದರೂ ಜಗಿದ
ರುಚಿಯ ಕುರಿತು
ದಕ್ಕಿದಂತೆ
ತರ್ಕ – ವಿತರ್ಕ
ವರ್ಣನೆ – ಆರೋಪ

ತಪ್ಪಲೆಯ ಅಕ್ಕಿಯಿಡೀ
ಅನ್ನವಾಗಿಬಿಟ್ಟರೇ?
ಗತಿಯೇನು?

ಅದಕ್ಕೇ
ಅತ್ತ ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ
ಇತ್ತ ಹಸಿವೂ ಹಿಂಗುವುದಿಲ್ಲ
ಕುತೂಹಲವೂ ತಣಿಯುವುದಿಲ್ಲ
ಕಾಯುವುದೂ ತೀರುವುದಿಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದರ್ಪಣ
Next post ನೀರೆ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys