Home / ಕವನ / ಕವಿತೆ / ನಿರಂತರ

ನಿರಂತರ

ಶತಶತಮಾನಗಳಿಂದ
ಧಗಧಗನೆ ಹೊತ್ತಿ
ಉರಿಯುತ್ತಲೇ ಇದೆ
ಈ ಅಗ್ನಿಕುಂಡ.

ಬೇಯುತ್ತಲೇ ಇದೆ
ತಪ್ಪಲೆಯೊಳಗೆ
ಅನ್ನವಾಗದ ಅಕ್ಕಿ!
ಮತ್ತೆ ಮತ್ತೆ
ಸೌದೆಯೊಟ್ಟಿ
ಉರಿ ಹೆಚ್ಚಿಸುವ ಕಾಯಕ.

ತಪ್ಪಲೆಗೆ ನೀರು ಸುರಿದು
ತಳ ಸೀಯದಂತೆ
ಕಾಯುವ ಕರ್ಮ
ನಡೆದೇ ಇದೆ ನಿರಂತರ.

ಆದರೂ
ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ.
ಎದುರಿಗೆ ಕುಳಿತ
ಮಂದಿಗೆ
ಬ್ರಹ್ಮಾಂಡ ಹಸಿವು

ಒಳ – ಹೊರಗೆಲ್ಲಾ
ಚುರುಗುಡುವ ಕಾವು ಅನ್ನವಾಗದ
ಅಕ್ಕಿಯನ್ನೇ ಮುಕ್ಕಿಬಿಡುವ
ಉಮೇದು!

ಅನ್ನವಾಗುವವರೆಗೂ
ತಪ್ಪಲೆ ಮುಟ್ಟಲಾಗದ
ಶಾಪ ಇವರಿಗೆ
ಕಾಯಲಾರೆವೆಂದರೆ ಹೇಗೆ?

ತಪ್ಪಲೆಯ ನೀರು
ಕೊತಕೊತನೆ ಕುದಿವ ರಭಸಕ್ಕೆ
ಹೊರ ಹಾರಿದ
ಒಂದೋ ಎರಡೋ
ಅಕ್ಕಿ ಕಾಳಿಗೇ ಇಲ್ಲಿ

ಹೊಡೆದಾಟ ಬಡಿದಾಟ
ಮೈಕೈ ಮುರಿದಾಟ
ಅಕ್ಕಿಕಾಳು
ಸಿಕ್ಕಿದವರು
ಪಚನವಾಗದಿದ್ದರೂ ಜಗಿದ
ರುಚಿಯ ಕುರಿತು
ದಕ್ಕಿದಂತೆ
ತರ್ಕ – ವಿತರ್ಕ
ವರ್ಣನೆ – ಆರೋಪ

ತಪ್ಪಲೆಯ ಅಕ್ಕಿಯಿಡೀ
ಅನ್ನವಾಗಿಬಿಟ್ಟರೇ?
ಗತಿಯೇನು?

ಅದಕ್ಕೇ
ಅತ್ತ ಅಕ್ಕಿ ಬೇಯುವುದಿಲ್ಲ
ಅನ್ನವಾಗುವುದಿಲ್ಲ
ಇತ್ತ ಹಸಿವೂ ಹಿಂಗುವುದಿಲ್ಲ
ಕುತೂಹಲವೂ ತಣಿಯುವುದಿಲ್ಲ
ಕಾಯುವುದೂ ತೀರುವುದಿಲ್ಲ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...