Home / ಕವನ / ಕವಿತೆ / ನೀರೆ

ನೀರೆ

ಒಳಗೆಲ್ಲ ನಿನ್ನ ನೆನಕೆ ಹರಿದಾಡುತ್ತಿದೆ
ನಿನ್ನಿಂದಲೆ ಇವಳುಸಿರಾಟ ದಿನದಿನದ ರಸದೂಟ
ನೀನಿಲ್ಲದಿರೆ ಇವಳೊಂದು ಬರಡು ಬರಿಯೆಲುಬುಗೂಡು
ನೀನು ಅವತರಿಸಿ ಬಂದಾಗ ಇವಳು ಮೀಯುವುದೊಂದು ಚೆಂದ
ನೀರ ಜಾಲರಿಬಟ್ಟೆ ಮೈಗಂಟಿ
ಮಲೆ ಮಡಿಲ ಉಬ್ಬು ತಗ್ಗುಗಳಿಗೊಂದು ಮೋಡಿ ರೂಪ
ಅಲ್ಲಿ ವರದೆ ಇಲ್ಲಿ ಶಾರದೆ ಅಲ್ಲಿ ಗಂಗೆ ಇಲ್ಲಿ ತುಂಗೆ
ಮುಂತಾಗಿ ಎಲ್ಲೆಲ್ಲೂ ಬಳುಕಿ ತುಳುಕಿ
ನಗೆನೂರೆಯುಕ್ಕಿ ಒಯ್ಯಾರ ಚಿಮ್ಮುವ
ನಿನ್ನ ಲಾಸ್ಯಗತಿ ಕಣ್ಣಿಗೊಂದು ಹಬ್ಬ

ಹಣ್ಣು ಕಾಯಿಗಳ ಹುಳಿಸಿಹಿ ರಸವಾಗಿ
ಕಣ್ಣು ಕಣ್ಣುಗಳಲ್ಲಿ ರಾಗಾಲಾಪಗಳ ಭಾವರಸವಾಗಿ
ಎದೆ‌ಎದೆಗಳ ಬಾಚಿ ತಬ್ಬುವ ಸರಸವಾಹಿನಿಯಾಗಿ
ಅಂತಃಕರಣದಂತರ ಗಂಗೆ ನೀನೊಲವಿನ ಸೆಲೆಯಾಗಿ
ಅನ್ನದ ಬೇರಿಗನ್ನವಾಗುವೆ
ಮಾಂಸಲ ದಂಡೆಗಳ ತುಂಬಿ ಹರಿವ ರಕ್ತ ಶಕ್ತಿಯಾಗುವೆ
ಅಂಗ ಅಂಗಗಳಲನಂಗನಂತೆ ವಿಧ ವಿಧ ರೂಪ ಕೊಡುವೆ

ಮಲಿನವೆಲ್ಲವ ತೊಳೆದು ತಳಕಾಣಿಸಿ ತಿಳಿಗೊಳಿಸಿ
ಮನದ ಕನ್ನಡಿಯಲಾಗಸವ ಬಿಂಬಿಸಿ ತಿದ್ದಿ ತೀಡಿ ಮುಂಗುರುಳ
ಚಂದ್ರ ಸೂರ್ಯ ತಿಲಕವಸೊಪ್ಪವಿಡುವೆ
ಶಿವನ ಜಡೆಯಿಂದಿಳಿದು ಸಾಗರದೊಡೆಯನ ಸೇರಿ
ಲಿಂಗಾಂಗ ಸಮರಸವನುಂಡು ನಲಿವ ನೀರೆ
ಎಲ್ಲೆಡೆ ಸಂವೃದ್ಧಿಯ ತಾರೆ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್