Home / ಕವನ / ಕವಿತೆ / ನೀರೆ

ನೀರೆ

ಒಳಗೆಲ್ಲ ನಿನ್ನ ನೆನಕೆ ಹರಿದಾಡುತ್ತಿದೆ
ನಿನ್ನಿಂದಲೆ ಇವಳುಸಿರಾಟ ದಿನದಿನದ ರಸದೂಟ
ನೀನಿಲ್ಲದಿರೆ ಇವಳೊಂದು ಬರಡು ಬರಿಯೆಲುಬುಗೂಡು
ನೀನು ಅವತರಿಸಿ ಬಂದಾಗ ಇವಳು ಮೀಯುವುದೊಂದು ಚೆಂದ
ನೀರ ಜಾಲರಿಬಟ್ಟೆ ಮೈಗಂಟಿ
ಮಲೆ ಮಡಿಲ ಉಬ್ಬು ತಗ್ಗುಗಳಿಗೊಂದು ಮೋಡಿ ರೂಪ
ಅಲ್ಲಿ ವರದೆ ಇಲ್ಲಿ ಶಾರದೆ ಅಲ್ಲಿ ಗಂಗೆ ಇಲ್ಲಿ ತುಂಗೆ
ಮುಂತಾಗಿ ಎಲ್ಲೆಲ್ಲೂ ಬಳುಕಿ ತುಳುಕಿ
ನಗೆನೂರೆಯುಕ್ಕಿ ಒಯ್ಯಾರ ಚಿಮ್ಮುವ
ನಿನ್ನ ಲಾಸ್ಯಗತಿ ಕಣ್ಣಿಗೊಂದು ಹಬ್ಬ

ಹಣ್ಣು ಕಾಯಿಗಳ ಹುಳಿಸಿಹಿ ರಸವಾಗಿ
ಕಣ್ಣು ಕಣ್ಣುಗಳಲ್ಲಿ ರಾಗಾಲಾಪಗಳ ಭಾವರಸವಾಗಿ
ಎದೆ‌ಎದೆಗಳ ಬಾಚಿ ತಬ್ಬುವ ಸರಸವಾಹಿನಿಯಾಗಿ
ಅಂತಃಕರಣದಂತರ ಗಂಗೆ ನೀನೊಲವಿನ ಸೆಲೆಯಾಗಿ
ಅನ್ನದ ಬೇರಿಗನ್ನವಾಗುವೆ
ಮಾಂಸಲ ದಂಡೆಗಳ ತುಂಬಿ ಹರಿವ ರಕ್ತ ಶಕ್ತಿಯಾಗುವೆ
ಅಂಗ ಅಂಗಗಳಲನಂಗನಂತೆ ವಿಧ ವಿಧ ರೂಪ ಕೊಡುವೆ

ಮಲಿನವೆಲ್ಲವ ತೊಳೆದು ತಳಕಾಣಿಸಿ ತಿಳಿಗೊಳಿಸಿ
ಮನದ ಕನ್ನಡಿಯಲಾಗಸವ ಬಿಂಬಿಸಿ ತಿದ್ದಿ ತೀಡಿ ಮುಂಗುರುಳ
ಚಂದ್ರ ಸೂರ್ಯ ತಿಲಕವಸೊಪ್ಪವಿಡುವೆ
ಶಿವನ ಜಡೆಯಿಂದಿಳಿದು ಸಾಗರದೊಡೆಯನ ಸೇರಿ
ಲಿಂಗಾಂಗ ಸಮರಸವನುಂಡು ನಲಿವ ನೀರೆ
ಎಲ್ಲೆಡೆ ಸಂವೃದ್ಧಿಯ ತಾರೆ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...