Home / ಕವನ / ಕವಿತೆ / ನೀರೆ

ನೀರೆ

ಒಳಗೆಲ್ಲ ನಿನ್ನ ನೆನಕೆ ಹರಿದಾಡುತ್ತಿದೆ
ನಿನ್ನಿಂದಲೆ ಇವಳುಸಿರಾಟ ದಿನದಿನದ ರಸದೂಟ
ನೀನಿಲ್ಲದಿರೆ ಇವಳೊಂದು ಬರಡು ಬರಿಯೆಲುಬುಗೂಡು
ನೀನು ಅವತರಿಸಿ ಬಂದಾಗ ಇವಳು ಮೀಯುವುದೊಂದು ಚೆಂದ
ನೀರ ಜಾಲರಿಬಟ್ಟೆ ಮೈಗಂಟಿ
ಮಲೆ ಮಡಿಲ ಉಬ್ಬು ತಗ್ಗುಗಳಿಗೊಂದು ಮೋಡಿ ರೂಪ
ಅಲ್ಲಿ ವರದೆ ಇಲ್ಲಿ ಶಾರದೆ ಅಲ್ಲಿ ಗಂಗೆ ಇಲ್ಲಿ ತುಂಗೆ
ಮುಂತಾಗಿ ಎಲ್ಲೆಲ್ಲೂ ಬಳುಕಿ ತುಳುಕಿ
ನಗೆನೂರೆಯುಕ್ಕಿ ಒಯ್ಯಾರ ಚಿಮ್ಮುವ
ನಿನ್ನ ಲಾಸ್ಯಗತಿ ಕಣ್ಣಿಗೊಂದು ಹಬ್ಬ

ಹಣ್ಣು ಕಾಯಿಗಳ ಹುಳಿಸಿಹಿ ರಸವಾಗಿ
ಕಣ್ಣು ಕಣ್ಣುಗಳಲ್ಲಿ ರಾಗಾಲಾಪಗಳ ಭಾವರಸವಾಗಿ
ಎದೆ‌ಎದೆಗಳ ಬಾಚಿ ತಬ್ಬುವ ಸರಸವಾಹಿನಿಯಾಗಿ
ಅಂತಃಕರಣದಂತರ ಗಂಗೆ ನೀನೊಲವಿನ ಸೆಲೆಯಾಗಿ
ಅನ್ನದ ಬೇರಿಗನ್ನವಾಗುವೆ
ಮಾಂಸಲ ದಂಡೆಗಳ ತುಂಬಿ ಹರಿವ ರಕ್ತ ಶಕ್ತಿಯಾಗುವೆ
ಅಂಗ ಅಂಗಗಳಲನಂಗನಂತೆ ವಿಧ ವಿಧ ರೂಪ ಕೊಡುವೆ

ಮಲಿನವೆಲ್ಲವ ತೊಳೆದು ತಳಕಾಣಿಸಿ ತಿಳಿಗೊಳಿಸಿ
ಮನದ ಕನ್ನಡಿಯಲಾಗಸವ ಬಿಂಬಿಸಿ ತಿದ್ದಿ ತೀಡಿ ಮುಂಗುರುಳ
ಚಂದ್ರ ಸೂರ್ಯ ತಿಲಕವಸೊಪ್ಪವಿಡುವೆ
ಶಿವನ ಜಡೆಯಿಂದಿಳಿದು ಸಾಗರದೊಡೆಯನ ಸೇರಿ
ಲಿಂಗಾಂಗ ಸಮರಸವನುಂಡು ನಲಿವ ನೀರೆ
ಎಲ್ಲೆಡೆ ಸಂವೃದ್ಧಿಯ ತಾರೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...