ತೊಣ್ಣೂರಿನ ಸೊಬಗು

ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು
ತೋಣ್ಣೂರು ಗ್ರಾಮದಲ್ಲಿ
ಹಸಿರು ಸೀರೆಯ ಮೇಲೆ ಹಳದಿಯರಮಣಿ
ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ
ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ
ಕರೆಯುತಿದೆ ನೋಡ ಬನ್ನಿ

ಸುಂದರ ವನಪುಷ್ಪರಾಶಿಗಳ ನಡುವೆ
ಮಣಿ ಮುತ್ತುಗಳೆ ಅಲೆ ಅಲೆಗಳಾಗಿ
ಶಾಂತತೆಯಲಿ ಜೋಗುಳ ಹಾಡುತ್ತ ತಾಯಿ
ಮೋತಿ ತಲಾಬ್ ಹಸನ್ಮುಖಿಯಾಗಿಹಳು

ನಂಬಿ ನಾರಾಯಣ ವೇಣುಗೋಪಾಲರು
ಕೊಳಲನೂದುತ ಕರೆಯನಿತ್ತಿಹರು
ಉಗ್ರನಾರಾಸಿಂಹನ ನಮಿಸಿ
ಹೊಯ್ಸಳ ಸಾಮ್ರಾಜ್ಯವ ವರ್‍ಣಿಸಿದರು
ರಾಮಾನುಜಚಾರ್‍ಯರು ಕವಿ ಪುಂಗವರು
ಲಲಿತಕಲೆಗಳ ಬೀಡಿದು

ಸುವರ್‍ಣಯುಗದ ಕಲ್ಪ ತರುಲತೆಗಳು
ವಿಷ್ಣುವರ್ಧನ ಶಾಂತಲೆಯ ನಯನಗಳು
ಹೊಯ್ಸಳನ ಆತ್ಮವ ನೋಡಬನ್ನಿ
ಜಗದಿ ನೆಲೆಸಿದ ಮಾನವರೇ ಆಲಿಸಿ
ಕನ್ನಡಾಂಬೆ ಮಡಿಲತಾಣವು
ಚರಿತ್ರೆಯ ಪುಟ ಪುಟಗಳಲ್ಲಿ
ಪುಟವಿಟ್ಟ ಚಿನ್ನದಂತೆ ಕೇಳಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೆಂಡ
Next post ಏರಿತು ಗಗನಕೆ ನಮ ಧ್ವಜ!

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys