ತೊಣ್ಣೂರಿನ ಸೊಬಗು

ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು
ತೋಣ್ಣೂರು ಗ್ರಾಮದಲ್ಲಿ
ಹಸಿರು ಸೀರೆಯ ಮೇಲೆ ಹಳದಿಯರಮಣಿ
ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ
ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ
ಕರೆಯುತಿದೆ ನೋಡ ಬನ್ನಿ

ಸುಂದರ ವನಪುಷ್ಪರಾಶಿಗಳ ನಡುವೆ
ಮಣಿ ಮುತ್ತುಗಳೆ ಅಲೆ ಅಲೆಗಳಾಗಿ
ಶಾಂತತೆಯಲಿ ಜೋಗುಳ ಹಾಡುತ್ತ ತಾಯಿ
ಮೋತಿ ತಲಾಬ್ ಹಸನ್ಮುಖಿಯಾಗಿಹಳು

ನಂಬಿ ನಾರಾಯಣ ವೇಣುಗೋಪಾಲರು
ಕೊಳಲನೂದುತ ಕರೆಯನಿತ್ತಿಹರು
ಉಗ್ರನಾರಾಸಿಂಹನ ನಮಿಸಿ
ಹೊಯ್ಸಳ ಸಾಮ್ರಾಜ್ಯವ ವರ್‍ಣಿಸಿದರು
ರಾಮಾನುಜಚಾರ್‍ಯರು ಕವಿ ಪುಂಗವರು
ಲಲಿತಕಲೆಗಳ ಬೀಡಿದು

ಸುವರ್‍ಣಯುಗದ ಕಲ್ಪ ತರುಲತೆಗಳು
ವಿಷ್ಣುವರ್ಧನ ಶಾಂತಲೆಯ ನಯನಗಳು
ಹೊಯ್ಸಳನ ಆತ್ಮವ ನೋಡಬನ್ನಿ
ಜಗದಿ ನೆಲೆಸಿದ ಮಾನವರೇ ಆಲಿಸಿ
ಕನ್ನಡಾಂಬೆ ಮಡಿಲತಾಣವು
ಚರಿತ್ರೆಯ ಪುಟ ಪುಟಗಳಲ್ಲಿ
ಪುಟವಿಟ್ಟ ಚಿನ್ನದಂತೆ ಕೇಳಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೆಂಡ
Next post ಏರಿತು ಗಗನಕೆ ನಮ ಧ್ವಜ!

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…