ತೊಣ್ಣೂರಿನ ಸೊಬಗು

ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು
ತೋಣ್ಣೂರು ಗ್ರಾಮದಲ್ಲಿ
ಹಸಿರು ಸೀರೆಯ ಮೇಲೆ ಹಳದಿಯರಮಣಿ
ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ
ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ
ಕರೆಯುತಿದೆ ನೋಡ ಬನ್ನಿ

ಸುಂದರ ವನಪುಷ್ಪರಾಶಿಗಳ ನಡುವೆ
ಮಣಿ ಮುತ್ತುಗಳೆ ಅಲೆ ಅಲೆಗಳಾಗಿ
ಶಾಂತತೆಯಲಿ ಜೋಗುಳ ಹಾಡುತ್ತ ತಾಯಿ
ಮೋತಿ ತಲಾಬ್ ಹಸನ್ಮುಖಿಯಾಗಿಹಳು

ನಂಬಿ ನಾರಾಯಣ ವೇಣುಗೋಪಾಲರು
ಕೊಳಲನೂದುತ ಕರೆಯನಿತ್ತಿಹರು
ಉಗ್ರನಾರಾಸಿಂಹನ ನಮಿಸಿ
ಹೊಯ್ಸಳ ಸಾಮ್ರಾಜ್ಯವ ವರ್‍ಣಿಸಿದರು
ರಾಮಾನುಜಚಾರ್‍ಯರು ಕವಿ ಪುಂಗವರು
ಲಲಿತಕಲೆಗಳ ಬೀಡಿದು

ಸುವರ್‍ಣಯುಗದ ಕಲ್ಪ ತರುಲತೆಗಳು
ವಿಷ್ಣುವರ್ಧನ ಶಾಂತಲೆಯ ನಯನಗಳು
ಹೊಯ್ಸಳನ ಆತ್ಮವ ನೋಡಬನ್ನಿ
ಜಗದಿ ನೆಲೆಸಿದ ಮಾನವರೇ ಆಲಿಸಿ
ಕನ್ನಡಾಂಬೆ ಮಡಿಲತಾಣವು
ಚರಿತ್ರೆಯ ಪುಟ ಪುಟಗಳಲ್ಲಿ
ಪುಟವಿಟ್ಟ ಚಿನ್ನದಂತೆ ಕೇಳಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೆಂಡ
Next post ಏರಿತು ಗಗನಕೆ ನಮ ಧ್ವಜ!

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…