ಏರಿತು ಗಗನಕೆ ನಮ ಧ್ವಜ!

ಏರಿತು ಗಗನಕೆ ನಮ್ಮ ಧ್ವಜ!
ಭಾರತ ಭಾಗ್ಯ ರವಿಯ ತೇಜ !


ಮರವೆಯಿಂದ ಜನಮನ ಜಾಗರಿಸಿ,
ಪರದಾಸ್ಯದ ಜಾಲದ ಭಯ ಹರಿಸಿ,
ಹುರುಳ ಹುರುಪನೀ ಬಾಳಲಿ ಬೆರಸಿ,
ಏರಿತು ಗಗನಕೆ ನಮ್ಮ ಧ್ವಜ-
ಭಾರತ ಶಕ್ತಿಯ ವೀರಭುಜ !


‘ಎಲ್ಲಿದೆ ಬಂಧನ ಬಲದಾಕ್ರಮಣ ?
ಎಲ್ಲಿದೆ ಶಾಸನರಾಹುಗ್ರಹಣ ?
ಎಲ್ಲವ ನಿಲ್ಲಿಸಿ ಬಿಡುವೆನೀ ಕ್ಷಣ!’
ಸಾರುವುದೀತೆರ ನಮ್ಮ ಧ್ವಜ-
ಭಾರತ ಪೌರುಷ ಸುರಭೂಜ!


ದೇಶ-ದೇಶಗಳ ಜನತೆಗೆ ಅನ್ನ,
ಪಾಶವ ಹಿಂಸೆಯ ತಡೆಯುವ ತ್ರಾಣ,
ತೋಷದಿ ಬಾಳುವ ಸಮತೆಯ ಜ್ಞಾನ
ಬೀರಲು ಏರಿದೆ ನಮ್ಮ ಧ್ವಜ-
ಭಾರತ ರಾಷ್ಟ್ರೋದಯ ತೇಜ!
* * *
ಏರಿತು ಗಗನಕೆ ನಮ್ಮ ಧ್ವಜ-
ಭಾರತ ಭಾಗ್ಯರವಿಯ ತೇಜ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೊಣ್ಣೂರಿನ ಸೊಬಗು
Next post ನಮಸ್ತೇ!

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys