ರಜೆಯ ಮಜ

ಶಾಲೆಗಿಂದು ರಜೆಯೋ ಏನೋ
ಎಳೆಯರೆದೆಯ ಹರುಷವೇನು
ಹನುಮನಂತೆ ಹಾರುವನೊಬ್ಬ
ಹುಟ್ಟುಡುಗೆಯ ಬಾಲನೊಬ್ಬ

ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ
ಅವನು ಇವನು ಎಲ್ಲ ಸೇರಿ
ಒಂದೆ ಜಲ, ಒಂದೆ ಗಾಳಿ
ಒಂದೇ ನೆಲದ ಅಂಗಳದಿ ಆಡಿ

ತಿಳಿನೀರಲಿ ಹಾರಿ ಜಿಗಿದು
ಕಣ್ಣ ಕೆಂಪಗಾಗಿಸಿ, ಮುಳುಗಿ ಈಜಿ
ಮತ್ಸ್ಯನಾ ಮನೆಯಲ್ಲಿ
ಒಂದು ಗಳಿಗೆ ಕಳೆಯೆ ಅಲ್ಲಿ

ಉತ್ಸಾಹದ ಉತ್ತೇಜನ
ಪಡೆವರೆಲ್ಲ ಮಕ್ಕಳು
ಚೈತನ್ಯದ ಕುಡಿಗಳು
ಅರಳುತಿರುವ ಹೂಗಳು

ಮೈಯ ಕೊಳೆಯ ತೊಳೆದ ಜಲವು
ಮನದ ಕೊಳೆಯ ತೊಳೆಯದಿರದು
ಉಕ್ಕಿ ಉಕ್ಕಿ ಹರಿವ ಜಲದಿ
ಉತ್ಸಾಹವ ಹೆಕ್ಕಿ ತೆಗೆವ ಬುಗ್ಗೆಗಳು

ಮುಂದೆ ಎಂದಾದರೂ ಇವೇ
ಈಜು ಮರಿಗಳು
ಚಿನ್ನವನ್ನೇ ಗೆಲ್ಲುವರು
ದೇಶಕೆ ಕೀರ್ತಿ ತರುವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ
Next post ಸಂಡಿಗೆ ಕಡಿಯುವ ಹಾಡು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys