ರಜೆಯ ಮಜ

ಶಾಲೆಗಿಂದು ರಜೆಯೋ ಏನೋ
ಎಳೆಯರೆದೆಯ ಹರುಷವೇನು
ಹನುಮನಂತೆ ಹಾರುವನೊಬ್ಬ
ಹುಟ್ಟುಡುಗೆಯ ಬಾಲನೊಬ್ಬ

ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ
ಅವನು ಇವನು ಎಲ್ಲ ಸೇರಿ
ಒಂದೆ ಜಲ, ಒಂದೆ ಗಾಳಿ
ಒಂದೇ ನೆಲದ ಅಂಗಳದಿ ಆಡಿ

ತಿಳಿನೀರಲಿ ಹಾರಿ ಜಿಗಿದು
ಕಣ್ಣ ಕೆಂಪಗಾಗಿಸಿ, ಮುಳುಗಿ ಈಜಿ
ಮತ್ಸ್ಯನಾ ಮನೆಯಲ್ಲಿ
ಒಂದು ಗಳಿಗೆ ಕಳೆಯೆ ಅಲ್ಲಿ

ಉತ್ಸಾಹದ ಉತ್ತೇಜನ
ಪಡೆವರೆಲ್ಲ ಮಕ್ಕಳು
ಚೈತನ್ಯದ ಕುಡಿಗಳು
ಅರಳುತಿರುವ ಹೂಗಳು

ಮೈಯ ಕೊಳೆಯ ತೊಳೆದ ಜಲವು
ಮನದ ಕೊಳೆಯ ತೊಳೆಯದಿರದು
ಉಕ್ಕಿ ಉಕ್ಕಿ ಹರಿವ ಜಲದಿ
ಉತ್ಸಾಹವ ಹೆಕ್ಕಿ ತೆಗೆವ ಬುಗ್ಗೆಗಳು

ಮುಂದೆ ಎಂದಾದರೂ ಇವೇ
ಈಜು ಮರಿಗಳು
ಚಿನ್ನವನ್ನೇ ಗೆಲ್ಲುವರು
ದೇಶಕೆ ಕೀರ್ತಿ ತರುವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ
Next post ಸಂಡಿಗೆ ಕಡಿಯುವ ಹಾಡು

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…