ರಜೆಯ ಮಜ

ಶಾಲೆಗಿಂದು ರಜೆಯೋ ಏನೋ
ಎಳೆಯರೆದೆಯ ಹರುಷವೇನು
ಹನುಮನಂತೆ ಹಾರುವನೊಬ್ಬ
ಹುಟ್ಟುಡುಗೆಯ ಬಾಲನೊಬ್ಬ

ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ
ಅವನು ಇವನು ಎಲ್ಲ ಸೇರಿ
ಒಂದೆ ಜಲ, ಒಂದೆ ಗಾಳಿ
ಒಂದೇ ನೆಲದ ಅಂಗಳದಿ ಆಡಿ

ತಿಳಿನೀರಲಿ ಹಾರಿ ಜಿಗಿದು
ಕಣ್ಣ ಕೆಂಪಗಾಗಿಸಿ, ಮುಳುಗಿ ಈಜಿ
ಮತ್ಸ್ಯನಾ ಮನೆಯಲ್ಲಿ
ಒಂದು ಗಳಿಗೆ ಕಳೆಯೆ ಅಲ್ಲಿ

ಉತ್ಸಾಹದ ಉತ್ತೇಜನ
ಪಡೆವರೆಲ್ಲ ಮಕ್ಕಳು
ಚೈತನ್ಯದ ಕುಡಿಗಳು
ಅರಳುತಿರುವ ಹೂಗಳು

ಮೈಯ ಕೊಳೆಯ ತೊಳೆದ ಜಲವು
ಮನದ ಕೊಳೆಯ ತೊಳೆಯದಿರದು
ಉಕ್ಕಿ ಉಕ್ಕಿ ಹರಿವ ಜಲದಿ
ಉತ್ಸಾಹವ ಹೆಕ್ಕಿ ತೆಗೆವ ಬುಗ್ಗೆಗಳು

ಮುಂದೆ ಎಂದಾದರೂ ಇವೇ
ಈಜು ಮರಿಗಳು
ಚಿನ್ನವನ್ನೇ ಗೆಲ್ಲುವರು
ದೇಶಕೆ ಕೀರ್ತಿ ತರುವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ
Next post ಸಂಡಿಗೆ ಕಡಿಯುವ ಹಾಡು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…