Home / ಕವನ / ಕವಿತೆ / ಸಂಡಿಗೆ ಕಡಿಯುವ ಹಾಡು

ಸಂಡಿಗೆ ಕಡಿಯುವ ಹಾಡು

ಶಂಡೀಗಿ ಕಡೆದಾರಲ್ಲ; ದೊಡ್ಡ ಶರಣ್ಯಾರು ನೆರದಾರಲ್ಲ|
ಒಡ್ಡಿ ಬಾಜೆಂತ್ರೀಲಿ ಪುರವಂತನಾಡಸ್ತ ಐಸೀರಿಲೊಂಟ್ಹಾರಲ್ಲ ||೧||

ಹಡದೀಯ ಹಾಸ್ಯಾರಲ್ಲ| ಮ್ಯಾಲ ಮದುಮಕ್ಕಳ ನಡಿಸ್ಯಾರಲ್ಲ|
ಖನ್ನಿ ಪಾರ್‍ವತಿದೇವಿಗಿ ಎಣ್ಣಿ ಪತ್ತಽಲುಡಿಸಿ ಸೋಬಾನ ಪಾಡ್ಯಾರಲ್ಲ ||೨||

ಗಡಗಡ ಗದ್ದವುರುಸ್ತ| ನಮ ಶಿವಗ ಬಿದರೀನ ಮಳೆ ಆದಾವ|
ಬರುವ ಅಬ್ಬರಣಿ ತೆಳಗ ಸರುವರಿಗಿ ಗಿರಿರಾಜಾ ಸರುವೆಲ್ಲ ನನಗೆಂದಾನ ||೩||

ಗಡಗಡ ಗದ್ದವುರಸ್ತ| ನಮ ಶಿವಗ ಬಿದರೀನ ಮಳಿ ಆದಾವ|
ಆಡೀದ ವಾಕ್ಯಕ ಮದವಿ ಸಮರಮದಿಂದ ಬೀಡೀಕಿ ಮನಿ ಕೊಟ್ಟಾರ ||೪||
*****

ಐರಾಣಿಯನ್ನು ತಂದ ಮೇಲೆ ಮುತ್ತೈದೆಯರು, ಒಂದು ಮಡಿಬಟ್ಟೆಯ ಮೇಲೆ ನಂದಿಯ ಮೂರ್ತಿಯೊಂದನ್ನು ಇಟ್ಟು, ಕಡಲೆಯ ಹಿಟ್ಟನ ಮುದ್ದೆಯನ್ನು ಕೈಯಲ್ಲಿ ಹಿಡಿದು, ದುಂಡುದುಂಡು ಗುಳಿಗೆಗಳನ್ನು ಮಾಡಿ ಆ ಮೂರ್ತಿಯ ಮೇಲೆ ಮಳೆಗರೆದಂತೆ ಎಸೆಯುವರು. ಆ ಕಾರಣದಿಂದಲೇ ಈ ದಿನದ ವಿಧಾನಕ್ಕೆ “ನಂದಮಾಕ (ನಂದಿಮುಖ)”ದ ದಿವಸನೆನ್ನುವರು. ಈ ಸಂಬಂಧದ ಹಾಡು ಇದು.

ಶಬ್ದಪ್ರಯೋಗಗಳು:- ಒಡ್ಡಿ=ಒಡ್ಡು ಳ್ಳ (ಐಸಿರಿಯ). ಪುರವಂತ ನಾಡು=ದೇವರ ಮುಂದೆ ವೀರಕುಣಿತವನ್ನು ಕುಣಿಯುವುದು. ಹಡದಿ=ಮಡಿ ಬಟ್ಟೆ. ಖನ್ನಿ=ಕನ್ಯೆ. ಅಬ್ಬರಣಿ=ಆರ್ಭಟ. ಬಿದುರಿನ ಮಳೆ=ಬಿರುಮಳೆ. ಸಮರಮ=ಸಂಭ್ರಮ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...