Home / ಕವನ / ಕವಿತೆ / ಕತ್ತಲೆಗೊಂದು ಮಾತು

ಕತ್ತಲೆಗೊಂದು ಮಾತು

ಬಿಸಿಲುರಿಯ ಸೂರ್ಯನಿಗೆ
ಬೆಳ್ಳನೆಯ ಬೆಳಕಿಗೆ
ನೀನು ‘ಗುಡ್-ನೈಟ್’ ಎಂದಿದ್ದು
ನನಗೆ ಕೇಳಿರಲಿಲ್ಲ
ಪ್ರತಿ ಹಗಲಿಗೊಂದು ಇರುಳು
ನಂತರ ನರಳಿ ಮರಳುವ ಹಗಲು
ಹೀಗೊಂದು ಕತೆ ಉಂಟೆಂದು
ನನಗೆ ತಿಳಿದಿರಲಿಲ್ಲ

ಆಕಾಶದಿಂದ ಇಳೆಗೆ
ಆಗಿ೦ದ ಈಗ
ಬೀಜದಿಂದ ಬೆಳೆಗೆ
ಬೆಳೆಯುತ್ತ ಕತ್ತಲೆ
ನಾಡು ಕವಿಯುವ ನೋಟ
ಕಂಡಿರಲಿಲ್ಲ
ಕಂಡರೂ ಈ ರೀತಿ
ಇಷ್ಟೊಂದು ಅನುಭವ
ಉಂಡಿರಲಿಲ್ಲ

ಹಗಲಿಗೆ ಸೂರ್ಯನೊಬ್ಬನೆ ಸಾಕೆ?
ಕತ್ತಲೆಗೆ ಚಂದ್ರ, ಕೋಟಿ ತಾರೆಗಳೆಲ್ಲ ಬೇಕೆ ?
ಯಾಕೆ ?
ಯಾಕೆಂದು ತಿಳಿಯುವುದಿಲ್ಲ
ಹಗಲಿಗೆ ಇರುಳಿನ ಸೂಜಿ
ಚುಚ್ಚಿ ಬದುಕಿನ ಬಟ್ಟೆ
ಹೊಲಿಯುವ ಭೂಪತಿಯನ್ನು
ನಾನು ಕಂಡಿಲ್ಲ
ಹೆಸರು ಕೇಳಿಲ್ಲ

ಇದರರ್ಥ, ನೀ ಬೇಡ ಎಂದಲ್ಲ
ನೀ ಬರದಿದ್ದರೆ ದಿನವಾಗುವುದಿಲ್ಲ
ಸಿಹಿ ನಿದ್ರೆಗಳು ಮಧುರ ಸ್ವಪ್ನಗಳು
ಮತ್ತೂ ರುಚಿ ರಾತ್ರಿಗಳು
ನಿನ್ನ ಮರೆಸುವುದಿಲ್ಲ

ಹಗಲಿನಿಂದ ರಾತ್ರಿ
ರಾತ್ರಿಯಿಂದ ಬೆಳಕು
ದಿನದಿಂದ ವಾರ
ನಾವು ಬೆಳಕಿನಿಂದ ಕತ್ತಲೆಗೆ
ಸರಿಯುವ ಬತ್ತಲೆ ಸತ್ಯ
ನನಗೆ ತಿಳಿಯದಿಲ್ಲ
ಒಂದು ಬೆಳಕು ನಿನ್ನಲ್ಲಿ
ಕರಗುವ ಮೊದಲು
ಅಥವಾ ಕಡೆಗೆ
ನಾನೂ ನಿನ್ನಲ್ಲೇ ಕರಗುವ ದಿವಸ
ದೂರವಿಲ್ಲ
ಅದು ಸತ್ಯ
ನಾನು ಸಾಕ್ಷಿ ಮಾತ್ರ
*****

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...