ಹೂಡಬೇಡ ಬಾಣ

ಹೂಡಬೇಡ ಬಾಣ
ಕಣ್ಣ ಅಂಚಿನಲ್ಲಿ
ಕಾಡಬೇಡ ಹೀಗೆ
ಮೋಹ ಪಾಶದಲ್ಲಿ
ಗೊತ್ತು ಪ್ರೀತಿ ಕಡಲು
ಅದರ ಚರಿತೆ ಬಹಳ
ನಾನೋ ಅಸಮರ್ಥ
ತಿಳಿಯಲದರ ಆಳ
ನಿನ್ನ ಪ್ರೀತಿ ಕೆಂಪು
ಅದಕೆ ನಾನು ದೂರ
ತಿಳಿಯಬೇಡ ತಪ್ಪು
ಬೇಡ ಹೃದಯ ಭಾರ
ನಿನ್ನ ಕುರಿತ ಮಾತು
ಆಗುತಿಹುದು ಕವಿತೆ
ಇಷ್ಟೆ ಸಾಕು ನಲ್ಲೆ
ಬೇಡ ನಾಳೆ ಚರಿತೆ
ಪ್ರೀತಿಗಿಲ್ಲ ಎಲ್ಲೆ
ಅದನು ನಾನು ಬಲ್ಲೆ
ಬದುಕು ಮಾತ್ರ ಬೇರೆ
ಅಲ್ಲವೆ ಹೇಳು ನಲ್ಲೆ?
ನಾನು ನಿನಗೆ ಋಣಿ
ನಿನ್ನ ಪ್ರೀತಿಗಾಗಿ
ಸೋಲು ಆಯ್ತು ನನಗೆ
ಅದರ ನೀತಿಗಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಂಡು
Next post ಭಾರತ ಭಾಗ್ಯ ವಿಧಾತಾ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…