ಸಂಕ್ರಾಂತಿ

ಸಂಕ್ರಾಂತಿ
ಸೂರ್ಯ ಬದಲಿಸುವ ಪಯಣದ ದಿಕ್ಕು
ಆ ದಿಕ್ಕು
ನಾನಾಗುವುದೆಂದು?
ಸಂಕ್ರಾಂತಿ
ಎಲ್ಲೆಲ್ಲೂ ಹೊಮ್ಮಿಸುವ ಈ ಭೂಮಿ
ಅದಕ್ಕೆ
ಅರ್ಥ ತಾರದೇಕೆ?
ಭುವಿಗಿಳಿದ ಸಂಕ್ರಾಂತಿ
ನನ್ನೆದೆಗಿಳಿಯಲಿಲ್ಲ
ಎದೆಗಿಳಿದರೂ ಅಲ್ಲಿ
ಸಮೃದ್ಧಿ ತರಲಿಲ್ಲ
ಸಮೃದ್ಧಿಯ ಮೇಲೆ
ಮೊದಲಿಂದಲೂ ಇದೆ ಪೇಟೆಂಟ್ಸ
ಹಾಗಾಗಿ ಸಂಕ್ರಾಂತಿ ನನ್ನದೇನು?
ನೀವು ಕೇಳಬಹುದು
ನನ್ನೊಡನೆ ನೀವು ನಕ್ಕಿಲ್ಲವೇ? ಎಂದು
ನಕ್ಕಿದ್ದೇನೆ –
ಇನ್ನೊಬ್ಬರ ಸಂತಸದಲಿ ನಗುವ ಅಭ್ಯಾಸ
ಕರಗತವಾಗಿದೆ ನನಗೆ
ಬೆಳಿಗ್ಗೆಯಿಂದಲೂ ನನಗೆ ಬರುತ್ತಿವೆ ಹಾರೈಕೆಗಳು
‘ಎಳ್ಳು ತಿಂದು ಒಳ್ಳೆ ಮಾತಾಡು’
ನಿಮ್ಮ ಐಷಾರಾಮದ ಬಂಡಿಯ ನೊಗ ಹೊತ್ತ ನಾನು
ಮೊದಲಿಂದಲೂ ಮಾಡಿದ್ದು ಅದೇ ಅಲ್ಲವೇನು?
ಈಗಲೂ ಅದನ್ನೇ ಮಾಡಬೇಕೆಂದು ನೀವು
ಬಯಸುತ್ತೀರೇನು!
ಸಂಭ್ರಮವ ನಿಮ್ಮೊಡನೆ ಹಂಚಿಕೊಂಡರೆ ಸಂಕಟ
ಸಿಗುವುದೇನು? ನನ್ನ ಪಾಲು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೌರಿ ಮೆಸ್ಸು
Next post ಕವಿತೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys