ಹಾರಿಬಂತೊಂದು ಹಕ್ಕಿ

ಹಾರಿಬಂತೋಂದು ಹಕ್ಕಿ
ಸಂಜೆಯಲಿ ಮೈದಪ್ಪಿ ಒಳಗೆ
ಹಾರಿಬಂತೊಂದು ಹಕ್ಕಿ.

ಹೊರ ಹೋಗಲರಿಯದೆ
ತನ್ನವರ ಕಾಣದೆ
ಬಂದ ಬಗಯರಿಯದೆ
ಅತ್ತಿತ್ತ ನೋಡುತಿದೆ
ಭಯದಿಂದ ನಡುಗುತಿದೆ.

ಇವರಾರೊ ಹೊಸಬರು
ತನ್ನನಿವರರಿಯರು
ಮೊದಲಿವರು ಕಾಣರು
ಬಂಧನದಿ ಬದುಕುವರು
ತನ್ನ ಸೆರೆಗೊಯ್ಯುವರು.

ಎಂದೊ ಬಂದಂತಿಹುದು
ನೆನಪಾಗಲೊಲ್ಲದು
ಎಂದೊ ಕಂಡಂತಿಹುದು
ಕುರುಪಾಗಲೊಲ್ಲದು
ಎಂದೊ ಇದ್ದಂತಿಹುದು.

ಪಂಜರದೊಳಿರಿಸಿದರು
ಮಾತುಗಳ ಕಲಿಸಿದರು
ಹಿಂದಿನದ ಮರೆಸಿದರು
ಇವರೆ ನನ್ನವರೆಂಬ-
ಕಕ್ಕುಲಿತೆ ತೋರಿದರು.

ಇಂತು ದಿನ ಕಳೆಯುತಿರೆ
ತನ್ನಂಥ ಹಕ್ಕಿಗಳು
ಬಂದಿರದೆ ಸಾರುತಿರೆ
ಏನಿದೇತೆರನೆಂಬ
ಗೊಂದಲವು ಮೂಡುತಿರೆ-

ಒಳಗೊಳಗೆ ದನಿಯೊಂದು
ಹೇಳುತಿದೆ ನೋಡೆಂದು
ಎಲ್ಲಿಂದಲೋ ಬಂದು
ಇಂದಿಲ್ಲಿ ನೀ ನಿಂದು
ಕಳೆದಾಯ್ತು ದಿನಮೆಂದು.

ಅನಾದಿ ಪುರುಷನ ಕಿಡಿ
ಈ ರೂಪ ತಾಳಿಹುದು
ದೇವನಾಡಿದ ನುಡಿ
ಈ ಕಾರ್ಯವೆಸಗಿಹುದು
ನಡೆ ಮುಂದೆ ಇಡುತಲಡಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಂಡವರ ರಾಜಸೂಯ ಯಾಗ
Next post ಆಚರಣೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys