Home / ಕವನ / ತತ್ವಪದ / ಆಚರಣೆ

ಆಚರಣೆ

ರಾಮ ರಾಮ ಎಂದು ಧ್ಯಾನಿಸಿದೆ
ನಿ ಎನ್ನ ಹೃದಯದಲಿ ಉದಯಿಸಿದೆ
ನಿನ್ನ ಕೃಪೆಗಾಗಿ ನಾ ಕಾತರಿಸಿದೆ
ನಾ ಬಡವನು ಕೃಪೆ ಇರಲಿ ತಂದೆ

ಎತ್ತೆತ್ತ ನೋಡಲು ನಿನ್ನ ರೂಪ
ಎದೆಯ ಮೂಲೆಯಲ್ಲೂ ನಿನ್ನ ನೆನಪ
ನಿನ್ನಾಶೀರ್‍ವಾದ ವಿರದೆ ತಬ್ಬಲಿ ನಾನು
ನೀನುಕರವಿಡಿದ ಮೇಲೆ ಬೀಳುವುದೇನು!

ನನ್ನ ಹೃದಯದಲ್ಲಿಲ್ಲ ಆಸೆ ಕಿಚ್ಚು
ಮತ್ತೆ ಮನದಲಿಲ್ಲ ಲೌಕಿಕ ಹುಚ್ಚು
ರಾಮ ಹಗಲಿರುಳೆಲ್ಲ ನಿನ್ನ ಧ್ಯಾನ
ನಿನ್ನ ಜಪದಲ್ಲಿದೆ ನನ್ನ ಮಾನ

ನಾ ಜನುಮಗಳ ಚಕ್ರಿಸಿ ಬಂದ ನರನಾಗಿ
ಈ ಜನ್ಮಚಿಕ್ಕು ಬಿಡಿಸಲು ನೀನದೆ ವರವಾಗಿ
ರಾಮ ಎಂಬ ಎರಡಕ್ಕರದಲ್ಲಿ
ಪಾಪಗಳ ಪರಿಹಾರ ಸಂಶಯವೆಲ್ಲಿ

ಕಾಯಾ ವಾಚಾ ಮನಸಾ ಪಾಲಿಸುವೆ
ಶುದ್ಧ ಭಕ್ತಿಯನ್ನು ನೀಡಿ ಓಲೈಸು
ಬಹ್ಮಚರ್‍ಯ ಅಹಿಂಸೆ ಆಚರಿಸುವೆ
ಮಾಣಿಕ್ಯ ವಿಠಲನಾಗಿಸಿ ಉದ್ಧರಿಸು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...