ಆಚರಣೆ

ರಾಮ ರಾಮ ಎಂದು ಧ್ಯಾನಿಸಿದೆ
ನಿ ಎನ್ನ ಹೃದಯದಲಿ ಉದಯಿಸಿದೆ
ನಿನ್ನ ಕೃಪೆಗಾಗಿ ನಾ ಕಾತರಿಸಿದೆ
ನಾ ಬಡವನು ಕೃಪೆ ಇರಲಿ ತಂದೆ

ಎತ್ತೆತ್ತ ನೋಡಲು ನಿನ್ನ ರೂಪ
ಎದೆಯ ಮೂಲೆಯಲ್ಲೂ ನಿನ್ನ ನೆನಪ
ನಿನ್ನಾಶೀರ್‍ವಾದ ವಿರದೆ ತಬ್ಬಲಿ ನಾನು
ನೀನುಕರವಿಡಿದ ಮೇಲೆ ಬೀಳುವುದೇನು!

ನನ್ನ ಹೃದಯದಲ್ಲಿಲ್ಲ ಆಸೆ ಕಿಚ್ಚು
ಮತ್ತೆ ಮನದಲಿಲ್ಲ ಲೌಕಿಕ ಹುಚ್ಚು
ರಾಮ ಹಗಲಿರುಳೆಲ್ಲ ನಿನ್ನ ಧ್ಯಾನ
ನಿನ್ನ ಜಪದಲ್ಲಿದೆ ನನ್ನ ಮಾನ

ನಾ ಜನುಮಗಳ ಚಕ್ರಿಸಿ ಬಂದ ನರನಾಗಿ
ಈ ಜನ್ಮಚಿಕ್ಕು ಬಿಡಿಸಲು ನೀನದೆ ವರವಾಗಿ
ರಾಮ ಎಂಬ ಎರಡಕ್ಕರದಲ್ಲಿ
ಪಾಪಗಳ ಪರಿಹಾರ ಸಂಶಯವೆಲ್ಲಿ

ಕಾಯಾ ವಾಚಾ ಮನಸಾ ಪಾಲಿಸುವೆ
ಶುದ್ಧ ಭಕ್ತಿಯನ್ನು ನೀಡಿ ಓಲೈಸು
ಬಹ್ಮಚರ್‍ಯ ಅಹಿಂಸೆ ಆಚರಿಸುವೆ
ಮಾಣಿಕ್ಯ ವಿಠಲನಾಗಿಸಿ ಉದ್ಧರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾರಿಬಂತೊಂದು ಹಕ್ಕಿ
Next post ಪಾಪಿಯ ಪಾಡು – ೧

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…