ಇದೋ ಬಂದ ಭಾನು!

– ಪಲ್ಲವಿ –

ಇದೋ ಬಂದ ಭಾನು ತಂದ
ಸ್ವಾತಂತ್ರ್ಯದ ಕಾಂತಿಯ,
ಅದೋ ಓಡಿ ಹೋಯ್ತು ನೋಡಿ
ಬಲಿದ ನಿಶಾಭ್ರಾಂತಿಯ !


ಓ!-ಮೂಡಣದೀ ನಭದಿ ಹೊನ್ನ
ಯುಗದ ಮೊಳಕೆ ಮೂಡಿತೋ ?
ಆ-ಮೊಳಕೆಯದೇ ಬಳೆದು ನಿಶೆಯ
ಜತೆಗೆ ಕದನ ಹೂಡಿತೋ !

ಮಂಗಲಮಯಿ ಉಷಾಸರಸಿ
ಭೃಂಗಕುಲದ ಸೆರೆಯ ಹರಿಸಿ
ಸಂಗೀತದಿ ಸುಧೆಯ ಬೆರಸಿ
ಗಾಳಿಗಳಲಿ ತೇಲಿಸೆ-
ಮುಂಗಡೆ ಜನವೆದ್ದು ಬಂತು
ಗೀತದ ಶ್ರುತಿಯಾಲಿಸೆ.

ಇದೋ ಬಂದ ಭಾನು ತಂದ
ಸ್ವಾತಂತ್ರ್ಯದ ಕಾಂತಿಯ,
ಅದೋ ಓಡಿ ಹೋಯ್ತು ನೋಡಿ
ಬಲಿದ ನಿಶಾಭ್ರಾಂತಿಯ!


ಇಗೊ!-ಬೀತು ಹೋದ ತರು ಮರವೂ
ಚಿಗುರಿ ತಳಿತು ನಿಂತಿವೆ,
ಅಗೊ!-ಸೋತು ಬಿಳ್ದ ಲತಲತೆಯೂ
ನಗೆಯಲರಾನ್ನಾಂತಿವೆ

ಪ್ರಾಣವಾಯು ಬೀಸುತಿದೆ.
ತ್ರಾಣಶರಧಿ ಸೂಸುತಿದೆ,
ಹಿಗ್ಗು ಹವಯೊಳೀಸುತಿದೆ-
ಎಂತಹದಿದು ಕ್ರಾಂತಿ!
ಜಾಗೃತ ಭಾರತದೊಳಿನ್ನು
ನೆಲೆಗೈವಳು ಶಾಂತಿ !

ಇದೋ ಬಂದ ಭಾನು ತಂದ
ಸ್ವಾತಂತ್ರ್ಯದ ಕಾಂತಿಯ,
ಅದೋ ಓಡಿ ಹೋಯ್ತು ನೋಡಿ
ಬಲಿದ ನಿಶಾಭ್ರಾಂತಿಯ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ-ಡಿಮಿಥಿಫೈಡ್
Next post ಕೃಪಣರ ಬಾಳು

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys