Home / ಕವನ / ಕವಿತೆ / ಬಾಲ್ಯ ಸ್ಮರಣೆ

ಬಾಲ್ಯ ಸ್ಮರಣೆ

ಧ್ವನಿಸಿ ಬಯಲಾಗುತಿಹ ಸುರಗಾನದಂತೆ,
ಕನಸಿನಲಿ ಗೈದಿರುವಮೃತ ಪಾನದಂತೆ,
ವನಧಿಯಡಿಯಿಂದೆದ್ದಳಿವ ಫೇನದಂತೆ,
ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ.

ಮುದಿತಂದೆ ಎಲುಬುಗೂಡಿನ ಬೆನ್ನನೇರಿ,
ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ,
ಕುದುರೆಯಾಟವಗೈದ ನೆನಪೊಂದು ಬಾರಿ,
ಉದಿಸಲಿಂದೀವುದೀ ಎದೆಗೆ ಚಂದನವಾ.

ಮದುವೆಯಾಗುವ ಮುನ್ನ ನನ್ನಕ್ಕ ತನ್ನ
ಬದಿಯ ಗೆಳತಿಯರೊಡನೆ ಕೂಳಾಟವನ್ನ
ಒದವಿಸೆನಗಿತ್ತ ಹಪ್ಪಳ ಹುರಿಯ ಅನ್ನ
ಅದೆ ಕೊಡುವುದೀಗೆನಗೆ ಮಧುರ ಭೋಜನವಾ.

“ತಂಗಿ, ನೀ ಅಳಬೇಡ, ತರುವೆ ನಾನೊಂದು
ಉಂಗುರವ ಮುದ್ದಿಡುವ ವಜ್ರವನು” ಎಂದು,
ಮುಂಗಾರಿನಿರುಳಲ್ಲಿ ಮಿಂಚುಹುಳ ತಂದು
ಸಿಂಗರಿಸಿದುದೆ ಕೊಡುವುದಮೃತ ಸೇಚನವಾ.

ವೀರಕಚ್ಚೆಯ, ಕೂದಲಿನ ಮೀಸೆ ಧರಿಸಿ,
ಶ್ರೀರಾಮನೆಂದಾಡಿ “ಹಾ! ಪ್ರಾಣದರಿಸಿ!
ಬಾ! ರಮಣೆ!” ಎಂದು ನಾ ಕುಣಿದುದನು ಸ್ಮರಿಸಿ,
ಹಾರುವುದು ಬಗೆಯ ಗೈದಂಗ ನರ್‍ತನವಾ

ಬಣ್ಣ ಕಾಗದದ ಚೆಲು ಮಂಟಪವ ಮಾಡಿ,
ಮಣ್ಣಗೊಂಬೆಯ ದೇವರೆಂದು ಕೊಂಡಾಡಿ,
“ಅಣ್ಣನನ್ನು ಬದುಕಿಸಿಕೊಡೆ”ಂದು ವರಬೇಡಿ,
ಕಣ್ಣೀರ್ ಮಿಡಿದ ನೆನಹು ಮೀಪುದು ನಯನವಾ.

ಸಂದ ಬಾಲ್ಯವೆ ಬಾರೆ, ನಿನ್ನ ಬಿಡಲಾರೆ;
ಅಂದು ನಿನ್ನೊಡನಿದ್ದು, ಕಂಡು ಕಣ್ಣಾರೆ,
ಕಂದ ನಾನಾದಂತೆ, ಓ ಸುಖ ವಿಹಾರೆ!
ಇಂದಾದೆ ಹಾಡಿ ಬಾಲ್ಯದ ಚೌಪದನವಾ
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...