Home / ಕವನ / ಕವಿತೆ / ಬಾಲ್ಯ ಸ್ಮರಣೆ

ಬಾಲ್ಯ ಸ್ಮರಣೆ

ಧ್ವನಿಸಿ ಬಯಲಾಗುತಿಹ ಸುರಗಾನದಂತೆ,
ಕನಸಿನಲಿ ಗೈದಿರುವಮೃತ ಪಾನದಂತೆ,
ವನಧಿಯಡಿಯಿಂದೆದ್ದಳಿವ ಫೇನದಂತೆ,
ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ.

ಮುದಿತಂದೆ ಎಲುಬುಗೂಡಿನ ಬೆನ್ನನೇರಿ,
ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ,
ಕುದುರೆಯಾಟವಗೈದ ನೆನಪೊಂದು ಬಾರಿ,
ಉದಿಸಲಿಂದೀವುದೀ ಎದೆಗೆ ಚಂದನವಾ.

ಮದುವೆಯಾಗುವ ಮುನ್ನ ನನ್ನಕ್ಕ ತನ್ನ
ಬದಿಯ ಗೆಳತಿಯರೊಡನೆ ಕೂಳಾಟವನ್ನ
ಒದವಿಸೆನಗಿತ್ತ ಹಪ್ಪಳ ಹುರಿಯ ಅನ್ನ
ಅದೆ ಕೊಡುವುದೀಗೆನಗೆ ಮಧುರ ಭೋಜನವಾ.

“ತಂಗಿ, ನೀ ಅಳಬೇಡ, ತರುವೆ ನಾನೊಂದು
ಉಂಗುರವ ಮುದ್ದಿಡುವ ವಜ್ರವನು” ಎಂದು,
ಮುಂಗಾರಿನಿರುಳಲ್ಲಿ ಮಿಂಚುಹುಳ ತಂದು
ಸಿಂಗರಿಸಿದುದೆ ಕೊಡುವುದಮೃತ ಸೇಚನವಾ.

ವೀರಕಚ್ಚೆಯ, ಕೂದಲಿನ ಮೀಸೆ ಧರಿಸಿ,
ಶ್ರೀರಾಮನೆಂದಾಡಿ “ಹಾ! ಪ್ರಾಣದರಿಸಿ!
ಬಾ! ರಮಣೆ!” ಎಂದು ನಾ ಕುಣಿದುದನು ಸ್ಮರಿಸಿ,
ಹಾರುವುದು ಬಗೆಯ ಗೈದಂಗ ನರ್‍ತನವಾ

ಬಣ್ಣ ಕಾಗದದ ಚೆಲು ಮಂಟಪವ ಮಾಡಿ,
ಮಣ್ಣಗೊಂಬೆಯ ದೇವರೆಂದು ಕೊಂಡಾಡಿ,
“ಅಣ್ಣನನ್ನು ಬದುಕಿಸಿಕೊಡೆ”ಂದು ವರಬೇಡಿ,
ಕಣ್ಣೀರ್ ಮಿಡಿದ ನೆನಹು ಮೀಪುದು ನಯನವಾ.

ಸಂದ ಬಾಲ್ಯವೆ ಬಾರೆ, ನಿನ್ನ ಬಿಡಲಾರೆ;
ಅಂದು ನಿನ್ನೊಡನಿದ್ದು, ಕಂಡು ಕಣ್ಣಾರೆ,
ಕಂದ ನಾನಾದಂತೆ, ಓ ಸುಖ ವಿಹಾರೆ!
ಇಂದಾದೆ ಹಾಡಿ ಬಾಲ್ಯದ ಚೌಪದನವಾ
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ