ಬಾಲ್ಯ ಸ್ಮರಣೆ

ಧ್ವನಿಸಿ ಬಯಲಾಗುತಿಹ ಸುರಗಾನದಂತೆ,
ಕನಸಿನಲಿ ಗೈದಿರುವಮೃತ ಪಾನದಂತೆ,
ವನಧಿಯಡಿಯಿಂದೆದ್ದಳಿವ ಫೇನದಂತೆ,
ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ.

ಮುದಿತಂದೆ ಎಲುಬುಗೂಡಿನ ಬೆನ್ನನೇರಿ,
ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ,
ಕುದುರೆಯಾಟವಗೈದ ನೆನಪೊಂದು ಬಾರಿ,
ಉದಿಸಲಿಂದೀವುದೀ ಎದೆಗೆ ಚಂದನವಾ.

ಮದುವೆಯಾಗುವ ಮುನ್ನ ನನ್ನಕ್ಕ ತನ್ನ
ಬದಿಯ ಗೆಳತಿಯರೊಡನೆ ಕೂಳಾಟವನ್ನ
ಒದವಿಸೆನಗಿತ್ತ ಹಪ್ಪಳ ಹುರಿಯ ಅನ್ನ
ಅದೆ ಕೊಡುವುದೀಗೆನಗೆ ಮಧುರ ಭೋಜನವಾ.

“ತಂಗಿ, ನೀ ಅಳಬೇಡ, ತರುವೆ ನಾನೊಂದು
ಉಂಗುರವ ಮುದ್ದಿಡುವ ವಜ್ರವನು” ಎಂದು,
ಮುಂಗಾರಿನಿರುಳಲ್ಲಿ ಮಿಂಚುಹುಳ ತಂದು
ಸಿಂಗರಿಸಿದುದೆ ಕೊಡುವುದಮೃತ ಸೇಚನವಾ.

ವೀರಕಚ್ಚೆಯ, ಕೂದಲಿನ ಮೀಸೆ ಧರಿಸಿ,
ಶ್ರೀರಾಮನೆಂದಾಡಿ “ಹಾ! ಪ್ರಾಣದರಿಸಿ!
ಬಾ! ರಮಣೆ!” ಎಂದು ನಾ ಕುಣಿದುದನು ಸ್ಮರಿಸಿ,
ಹಾರುವುದು ಬಗೆಯ ಗೈದಂಗ ನರ್‍ತನವಾ

ಬಣ್ಣ ಕಾಗದದ ಚೆಲು ಮಂಟಪವ ಮಾಡಿ,
ಮಣ್ಣಗೊಂಬೆಯ ದೇವರೆಂದು ಕೊಂಡಾಡಿ,
“ಅಣ್ಣನನ್ನು ಬದುಕಿಸಿಕೊಡೆ”ಂದು ವರಬೇಡಿ,
ಕಣ್ಣೀರ್ ಮಿಡಿದ ನೆನಹು ಮೀಪುದು ನಯನವಾ.

ಸಂದ ಬಾಲ್ಯವೆ ಬಾರೆ, ನಿನ್ನ ಬಿಡಲಾರೆ;
ಅಂದು ನಿನ್ನೊಡನಿದ್ದು, ಕಂಡು ಕಣ್ಣಾರೆ,
ಕಂದ ನಾನಾದಂತೆ, ಓ ಸುಖ ವಿಹಾರೆ!
ಇಂದಾದೆ ಹಾಡಿ ಬಾಲ್ಯದ ಚೌಪದನವಾ
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂತೆಲ್ಲ ಕುಂತುಣ್ಣಲೆಂತೀ ಯಂತ್ರ ಹಸಿವಿಂಗುವುದೋ?
Next post ಗೊದೋವಿಗಾಗಿ ಕಾಯುತ್ತ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys