ಡಾ. ವಿ. ನಾಗರಾಜುರವರು

ಡಾ. ವಿ. ನಾಗರಾಜುರವರು

ಅಂದು- ಶಾಲೆಗೆ ಡಾ. ವಿ.ನಾಗರಾಜುರವರು ಆಗಮಿಸಿದ್ದರು. ಮಕ್ಕಳಿಗೆ ಆರೋಗ್ಯ ಭಾಗ್ಯದ ಬಗೆಗೆ ವಿವರಿಸಿದರು.

ಅವರು ಹೇಳುವುದ ಕೇಳುತ್ತಾ ಕುಳಿತ ನಮಗೆಲ್ಲ ಐದಾರು ದಶಕಗಳ ಕೆಳಗೆ ನಾವೆಲ್ಲ ಕಡ್ಡಾಯವಾಗಿ ನಿತ್ಯ ಹಾಲು-ಮೊಸರು-ಮಜ್ಜಿಗೆ-ಬೆಣ್ಣೆ-ಗಿಣ್ಣು-ತುಪ್ಪ ಉಂಡು ಬೆಳದ ಆ ಸವಿಸವಿ… ದಿನಗಳು ಕಣ್ಣ ಮುಂದೆ ಮೆರವಣಿಗೆ ಹೊರಟವು. ಪ್ರತಿಯೊಬ್ಬರ ಮನೆಮನೆಗಳಲ್ಲಿ ಹತ್ತಾರು ದನಕರು ಕುರಿಮೇಕೆಗಳ ಹಿಂಡು ಹಿಂಡು…

ಡಾ. ವಿ.ನಾಗರಾಜು ಅವರ ಅನುಭವಾಮೃತವನ್ನು ಅಂದು ಅಲ್ಲಿದ್ದವರಿಗೆಲ್ಲ ಉಣಬಡಿಸತೊಡಗಿದರು. ನೀವು ಏನೆಲ್ಲ ಎಷ್ಟೆಲ್ಲ ಸೇವಿಸಿದರೂ ಕೊನೆಗೆ ಮಜ್ಜಿಗೆಯನ್ನು ಕಡ್ಡಾಯವಾಗಿ ಮೂರು ಹೊತ್ತು ಸೇವಿಸುವುದನ್ನು ಮರೆಯಬಾರದೆಂದು ಒತ್ತಿ ಹೇಳಿದರು. ಕಾರಣ- ಮಜ್ಜಿಗೆಯಲ್ಲಿ ಏನೆಲ್ಲ ಪ್ರೋಟೀನ್, ಪೊಟ್ಯಾಶಿಯಂ, ‘ಬಿ’ ಕಾಂಪ್ಲೆಕ್ಸ್ ಇತ್ಯಾದಿ ವಿಟಮಿನ್‌ಗಳ ಗಣಿಯಾಗಿದೆ. ತೂಕ ಇಳಿಸಲು ಮಜ್ಜಿಗೆ ಔಷಧಿಯ ಹಾಗೆ ಕೆಲಸ ಮಾಡುವುದು. ಬಾಯಿ ವಾಸನೆಯನ್ನು, ತೂಕವನ್ನು, ತಡೆಗಟ್ಟುವುದು, ಅಜೀರ್ಣವನ್ನು ನಿವಾರಿಸುವುದು. ಅಲರ್ಜಿಗೆ ರಾಮಬಾಣ, ಕರುಳು ಬೇನೆ, ಭೇದಿ, ಆಮಶಂಕೆ, ಗ್ಯಾಸ್, ಉರಿ, ಉಬ್ಬರ ವಿಳಿತ ಇತ್ಯಾದಿಗೆ ಮಜ್ಜಿಗೆ ಸೇವನೆ ಹೇಳಿಮಾಡಿಸಿದ ಪಾನೀಯ. ಜೀರ್ಣಕ್ರಿಯೆಗೆ ಸಹಕಾರಿ.

ಮಜ್ಜಿಗೆಯನ್ನು ಯಥೇಚ್ಛವಾಗಿ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಆರೋಗ್ಯ ಪರಿಣಿತರು ಈಗಾಗಲೇ ರುಜುವಾತು ಪಡಿಸಿರುವುದನ್ನು ಅವರು ಒತ್ತಿ‌ಒತ್ತಿ ಹೇಳಿದರು. ಅವರ ಮಾತೇ ಹಾಗೇ ಹಾಲು ಜೇನಿನಾ ಹಾಗೇ ಕಲ್ಲು ಸಕ್ಕರೆಯಾ ಹಾಗೇ.. ಹೌದೌದು ಎನ್ನುವ ಹಾಗೇ ತುಂಬ ಸೊಗಸಾಗಿ ಹೇಳುತ್ತಾ ಹೋದರು…

ಮಜ್ಜಿಗೆಗೆ ಮಸಾಲೆ ಹಾಕುವುದು ಒಗ್ಗರಣೆ ಕೊಡುವುದು ಹಸಿಮೆಣಸಿನಕಾಯಿ ಸೇರಿಸುವುದು ಸಕ್ಕರೆ ಬೆಲ್ಲ ಇತ್ಯಾದಿ ಏನೆಲ್ಲ ಸೇರಿಸಿ ಕುದಿಸಿ ಕುಡಿಯುವುದೂ… ಇದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಡ್ಡ ಪರಿಣಾಮಕ್ಕೆ ರಹದಾರಿಗಳು…….. ಮಜ್ಜಿಗೆಯಲ್ಲಿ ಕಣ್ಣಿಗೆ ಕಾಣದಂಥ ಬ್ಯಾಕ್ಟಿರಿಯಾಗಳಿರುತ್ತವೆ! ಇವು ಆರೋಗ್ಯಕ್ಕೆ ಬೇಕೇ ಬೇಕು…! ಬೇಕಾದ ಬ್ಯಾಕ್ಟಿರಿಯಾಗಳು…. ಇವು ವಿನಾಶವಾಗದಂತೆ ಎಚ್ಚರಿಕೆ ವಹಿಸುವುದು ಎಲ್ಲರಿಗೆ ತಿಳಿದಿರಲೇಬೇಕು! ಇವನ್ನು ನಾಶ ಮಾಡಿಕೊಂಡು ಅಂದಚೆಂದಕ್ಕೆ ಮಂಜುಗಡ್ಡೆ ಹಾಕಿ ಕುಡಿಯುವುದರಿಂದ ಆರೋಗ್ಯದ ಮೇಲೆ ಅನಗತ್ಯವಾದ ಕೆಟ್ಟ ಪರಿಣಾಮ ಬೀರುವುದೆಂದು ಡಾಕ್ಟರ್ ವಿ. ನಾಗರಾಜು ಅವರು ವಿವರಿಸುತ್ತಾ ನಿಂತರು.

ಕಾಲ ಸರಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿದ್ದ ಮಕ್ಕಳೇನು… ಶಿಕ್ಷಕರೆಲ್ಲ… ನಾವೆಲ್ಲ ಕೇಳಿ ಬಲು ಸಂಭ್ರಮಿಸಿದೆವು…. ಅವರಿಗೆ ಶಾಲಾವತಿಯಿಂದ ಸನ್ಮಾನಿಸಿದರು.

ಅಲ್ಲಿಗೆ ಅಂದಿಗೆ ‘ಜ್ಞಾನ ವಿಜ್ಞಾನ’ ಮಾಲಿಕೆಯ ಉಪನ್ಯಾಸ ಮುಕ್ತಾಯಗೊಂಡಿತು.

ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಡಾ. ವಿ.ನಾಗರಾಜು ಅವರು ಮಕ್ಕಳತ್ತ ಕೈಬೀಸಿ ಖುಷಿಲಿ ಶಾಲೆಯಿಂದ ನಿರ್ಗಮಿಸಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಲೆ ಇಲ್ಲ
Next post ಎಷ್ಟೋ ಕವಿಗಳು ಆಗಿಹೋದರೂ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys