Home / ಕವನ / ಕವಿತೆ / ಎಷ್ಟೋ ಕವಿಗಳು ಆಗಿಹೋದರೂ

ಎಷ್ಟೋ ಕವಿಗಳು ಆಗಿಹೋದರೂ

ಎಷ್ಟೋ ಕವಿಗಳು ಆಗಿಹೋದರೂ
ಇನ್ನಷ್ಟು ಕವಿಗಳು ಬರಲಿರುವರು

ಈ ಇಷ್ಟರಲ್ಲಿ ನೀನೆಷ್ಟರವನೊ ನಾನೆಷ್ಟರವನೊ
ಜಾಗ ಹಿಡಿದಿಟ್ಟಿರುವ ಆ ಇನ್ನೊಬ್ಬ ಎಷ್ಟರವನೊ

ಕಾಲಾಂತರದಲ್ಲಿ ನುಡಿ ಹೀಗೇ ಉಳಿಯದಲ್ಲಾ
ಅದು ಯಾರಿಗೂ ತಿಳಿಯದೇ ಬದಲಾಗುವುದಲ್ಲಾ

ನುಡಿ ಬದಲಾಗುವುದು ನಡೆ ಬದಲಾಗುವುದು
ಈಗಿನದೆಲ್ಲವೂ ಪಳಿಯುಳಿಕೆಯಾಗುವುದು

ಮೇಲೇರಿದುದೆಲ್ಲ ಕೆಳ ಬೀಳಲೆ ಬೇಕು
ಕೆಳ ಬಿದ್ದುದೆಲ್ಲಾ ಮಣ್ಣಾಗಲೆ ಬೇಕು

ಮಣ್ಣು ಹಸನಾಗುವುದು ಮತ್ತೆ ಸಸಿ ಮೂಡುವುದು
ಮರವಾಗಿ ಕಾಯಾಗಿ ಮಾಗಿ ಹಣ್ಣಾಗುವುದು

ಆ ಹಣ್ಣನು ಹಕ್ಕಿಯೊಂದು ಕುಕ್ಕಿ ತಿನ್ನುವುದು
ಆ ಹಕ್ಕಿಯನಿನ್ನೊಂದು ನೋಡುತ್ತಲು ಇರುವುದು

ಮಲ್ಲಿಗೆಗೊಂದು ದಿನ ಗುಲಾಬಿಗೆ ಎರಡು ದಿನ
ಬನದಿಂದ ಬನಕೆ ಹಾರಾಡುವ ತುಂಬಿಗೆ ಎಷ್ಟು ದಿನ

ಕೆಲವಿಂದ್ರ ಚಾಪ ಮೂಡುವಾಗಲೆ ಮಾಯ
ಇನ್ನು ಕೆಲವಿರಬಹುದು ಇನ್ನಷ್ಟು ಸಮಯ

ನಿನ್ನೆಯೆಂಬುದು ನೆನಪು ನಾಳೆಯೆಂಬುದು ಕನಸು
ಬಣ್ಣ ಹಚ್ಚಿದ ಮೇಲೆ ನಿಷ್ಕ್ರಮಣ ತನಕ ನಟಿಸು

ಕರತಾಡನದರ್ಥ ಏನೆಂದು ಕೇಳದಿರು
ಪರದೆ ಬೀಳುವ ವೇಳೆ ಇದು ಸಹಜವೆಂದೇ ತಿಳಿದಿರು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...