ಎಷ್ಟೋ ಕವಿಗಳು ಆಗಿಹೋದರೂ

ಎಷ್ಟೋ ಕವಿಗಳು ಆಗಿಹೋದರೂ
ಇನ್ನಷ್ಟು ಕವಿಗಳು ಬರಲಿರುವರು

ಈ ಇಷ್ಟರಲ್ಲಿ ನೀನೆಷ್ಟರವನೊ ನಾನೆಷ್ಟರವನೊ
ಜಾಗ ಹಿಡಿದಿಟ್ಟಿರುವ ಆ ಇನ್ನೊಬ್ಬ ಎಷ್ಟರವನೊ

ಕಾಲಾಂತರದಲ್ಲಿ ನುಡಿ ಹೀಗೇ ಉಳಿಯದಲ್ಲಾ
ಅದು ಯಾರಿಗೂ ತಿಳಿಯದೇ ಬದಲಾಗುವುದಲ್ಲಾ

ನುಡಿ ಬದಲಾಗುವುದು ನಡೆ ಬದಲಾಗುವುದು
ಈಗಿನದೆಲ್ಲವೂ ಪಳಿಯುಳಿಕೆಯಾಗುವುದು

ಮೇಲೇರಿದುದೆಲ್ಲ ಕೆಳ ಬೀಳಲೆ ಬೇಕು
ಕೆಳ ಬಿದ್ದುದೆಲ್ಲಾ ಮಣ್ಣಾಗಲೆ ಬೇಕು

ಮಣ್ಣು ಹಸನಾಗುವುದು ಮತ್ತೆ ಸಸಿ ಮೂಡುವುದು
ಮರವಾಗಿ ಕಾಯಾಗಿ ಮಾಗಿ ಹಣ್ಣಾಗುವುದು

ಆ ಹಣ್ಣನು ಹಕ್ಕಿಯೊಂದು ಕುಕ್ಕಿ ತಿನ್ನುವುದು
ಆ ಹಕ್ಕಿಯನಿನ್ನೊಂದು ನೋಡುತ್ತಲು ಇರುವುದು

ಮಲ್ಲಿಗೆಗೊಂದು ದಿನ ಗುಲಾಬಿಗೆ ಎರಡು ದಿನ
ಬನದಿಂದ ಬನಕೆ ಹಾರಾಡುವ ತುಂಬಿಗೆ ಎಷ್ಟು ದಿನ

ಕೆಲವಿಂದ್ರ ಚಾಪ ಮೂಡುವಾಗಲೆ ಮಾಯ
ಇನ್ನು ಕೆಲವಿರಬಹುದು ಇನ್ನಷ್ಟು ಸಮಯ

ನಿನ್ನೆಯೆಂಬುದು ನೆನಪು ನಾಳೆಯೆಂಬುದು ಕನಸು
ಬಣ್ಣ ಹಚ್ಚಿದ ಮೇಲೆ ನಿಷ್ಕ್ರಮಣ ತನಕ ನಟಿಸು

ಕರತಾಡನದರ್ಥ ಏನೆಂದು ಕೇಳದಿರು
ಪರದೆ ಬೀಳುವ ವೇಳೆ ಇದು ಸಹಜವೆಂದೇ ತಿಳಿದಿರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಾ. ವಿ. ನಾಗರಾಜುರವರು
Next post ಉದಾರೀಕರಣ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys