Home / ಕವನ / ಕವಿತೆ / ಎಷ್ಟೋ ಕವಿಗಳು ಆಗಿಹೋದರೂ

ಎಷ್ಟೋ ಕವಿಗಳು ಆಗಿಹೋದರೂ

ಎಷ್ಟೋ ಕವಿಗಳು ಆಗಿಹೋದರೂ
ಇನ್ನಷ್ಟು ಕವಿಗಳು ಬರಲಿರುವರು

ಈ ಇಷ್ಟರಲ್ಲಿ ನೀನೆಷ್ಟರವನೊ ನಾನೆಷ್ಟರವನೊ
ಜಾಗ ಹಿಡಿದಿಟ್ಟಿರುವ ಆ ಇನ್ನೊಬ್ಬ ಎಷ್ಟರವನೊ

ಕಾಲಾಂತರದಲ್ಲಿ ನುಡಿ ಹೀಗೇ ಉಳಿಯದಲ್ಲಾ
ಅದು ಯಾರಿಗೂ ತಿಳಿಯದೇ ಬದಲಾಗುವುದಲ್ಲಾ

ನುಡಿ ಬದಲಾಗುವುದು ನಡೆ ಬದಲಾಗುವುದು
ಈಗಿನದೆಲ್ಲವೂ ಪಳಿಯುಳಿಕೆಯಾಗುವುದು

ಮೇಲೇರಿದುದೆಲ್ಲ ಕೆಳ ಬೀಳಲೆ ಬೇಕು
ಕೆಳ ಬಿದ್ದುದೆಲ್ಲಾ ಮಣ್ಣಾಗಲೆ ಬೇಕು

ಮಣ್ಣು ಹಸನಾಗುವುದು ಮತ್ತೆ ಸಸಿ ಮೂಡುವುದು
ಮರವಾಗಿ ಕಾಯಾಗಿ ಮಾಗಿ ಹಣ್ಣಾಗುವುದು

ಆ ಹಣ್ಣನು ಹಕ್ಕಿಯೊಂದು ಕುಕ್ಕಿ ತಿನ್ನುವುದು
ಆ ಹಕ್ಕಿಯನಿನ್ನೊಂದು ನೋಡುತ್ತಲು ಇರುವುದು

ಮಲ್ಲಿಗೆಗೊಂದು ದಿನ ಗುಲಾಬಿಗೆ ಎರಡು ದಿನ
ಬನದಿಂದ ಬನಕೆ ಹಾರಾಡುವ ತುಂಬಿಗೆ ಎಷ್ಟು ದಿನ

ಕೆಲವಿಂದ್ರ ಚಾಪ ಮೂಡುವಾಗಲೆ ಮಾಯ
ಇನ್ನು ಕೆಲವಿರಬಹುದು ಇನ್ನಷ್ಟು ಸಮಯ

ನಿನ್ನೆಯೆಂಬುದು ನೆನಪು ನಾಳೆಯೆಂಬುದು ಕನಸು
ಬಣ್ಣ ಹಚ್ಚಿದ ಮೇಲೆ ನಿಷ್ಕ್ರಮಣ ತನಕ ನಟಿಸು

ಕರತಾಡನದರ್ಥ ಏನೆಂದು ಕೇಳದಿರು
ಪರದೆ ಬೀಳುವ ವೇಳೆ ಇದು ಸಹಜವೆಂದೇ ತಿಳಿದಿರು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ