Home / ಕವನ / ಕವಿತೆ / ಬಯೋಡಾಟಾ ಬದಲಿಸಬೇಕಂತೆ

ಬಯೋಡಾಟಾ ಬದಲಿಸಬೇಕಂತೆ

ಹೂವು ತೋರಣಗಳ ಛತ್ರಚಾಮರಗಳಿಂದಲಕೃತ ವೇದಿಕೆ
ಕಣ್ಮನ ಸೆಳೆವ ರೆಶ್ಮೆ ಪಂಚೆಯುಡುಗೆ ತೊಡುಗೆ
ವಜ್ರವೈಡೂರ್‍ಯಗಳ ಕಿರೀಟಧರಿಸಿದ ಶ್ರೀರಾಮಚಂದ್ರ
ಸುಶೋಭಿತ ಚಂದ್ರವದನೆ ಸೀತೆಯ ಪಟ್ಟಾಭಿಷೇಕ
ಮನಮೋಹಕ ಚಿತ್ತಾಕರ್‍ಷಕ
ಕ್ಯಾಲಂಡರದೊಳಗಿನ ದೃಶ್ಯಕಾವ್ಯ.

ದೇವದೇವೋತ್ತಮ ಪುರುಷೋತ್ತಮ ರಾಮನೆಂದರೆ
ರಾಜಾರಾಮ ರಘುಕುಲತಿಲಕನೆಂದರೆ
ಪಿಳಿಪಿಳಿ ಕಣ್ಣು ಹೊಸಪೀಳಿಗೆಯವುಗಳಿಗೆ
ರಾಮನವತಾರದ ಬಟ್ಟೆತೊಟ್ಟು
ಕುಸಂಬರಿ ಪಾನಕ ಸವಿದು
ದಿನದ ರಜೆ ಕಳೆದುಬಿಟ್ಟರೆ
ಹಿರಿಯರ ರಾಮನಾಮಸ್ಮರಣೆ ಏನೆಂದು
ಯಾಕೆಂದು ಗೊತ್ತಾಗದೆ ಗಲಿಬಿಲಿ.

ಭಕ್ತಿಭಾವ ನಂಬಿಕೆ ವಿಶ್ವಾಸಗಳ ಬಗೆಗೆ ಹೇಳಿದ್ದಾದರೆ
ಅದೆಂತಹ ನಾಮಬಲ, ಹೇಗಿದ್ದನಾತ
ಅವನ ಓದು ಕೆಲಸ ಹೆಂಡತಿ ಮಕ್ಕಳು ಏನೆಂದು
ನಿನ್ನ ಬಯೋಡಾಟಾ ಕೇಳುತ್ತಾರೆ ರಾಮಾ-

ಮೊದಲ ಸುತ್ತಿನ ನಿನ್ನ ಪರಿಚಯ ಕೇಳಿದ್ದೇ ಸಾಕು
ಈಗ ನೂರಾರು ಪ್ರಶ್ನೆಗಳ ಮೂಟೆಹೊತ್ತು ಬಂದಿದ್ದಾರೆ.
ದೇವನಾಗಿದ್ದರೆ…
ಗೊತ್ತಾಗಬೇಕಿತ್ತು ಮಾಯಾಜಿಂಕೆಯ ಬೆನ್ನುಹತ್ತಿ
ದಂಡಕಾರಣ್ಯದಲಿ ಸೀತೆಯನ್ನು ಬಿಟ್ಟು ಹೋದನೇಕೆ?-
ಹದಿನಾಲ್ಕು ವರ್ಷ ಮಕ್ಕಳಾಗದಂತೆ
ಅದಾವ ನಾರುಬೇರು ಕೊಟ್ಟು ಸೀತೆಗೆ ಸಮಾಧಾನಿಸಿದನಂತೆ?
ರಾವಣ, ಸೀತಾಪರಹಣ, ಮರುಪಟ್ಟಾಭಿಷೇಕ
ಅಬ್ಬಬ್ಬಾ! ಹೌದು, ಆದರೆ….
ದೇವನಾಗಿದ್ದರೆ, ರಾಜನಾಗಿದ್ದರೆ, ಹೋಗಲಿ ಪುರುಷೋತ್ತಮನಾಗಿದ್ದರೆ…
ಹಾದಿಹೋಕರ ಮಾತಿಗೆ ಬೆಲೆಕೊಟ್ಟು
ಹೆಂಡತಿಗೆ ಅಪಮಾನಸಿ ಅಗ್ನಿಪರೀಕ್ಷೆ ಮಾಡಿಸಿದನೇಕೆ?-
ತುಂಬು ಬಸುರಿಯನು ನದಿದಾಟಿಸಿ ಕಾಡಿಗೆ ಬಿಟ್ಟಿದ್ದೇಕೆ?

ಮಕ್ಕಳಾದರೂ ಮರಳಿನೋಡದ ಜನಪಾಲಕ
ಪ್ರಜೆಗಳ ಪರಾಕದಮಲಿಗೆ ಹೆಂಡತಿ ಮಕ್ಕಳಿಗೆ
ಅಪಾತ್ರನಾದ ರಾಮರಾಮ ಅದ್ಹೇಗೆ ದೇವಮಾನವನಂತೆ?-
ಅವನೊಬ್ಬ ಪುರುಷರಲಿ ಪುರುಷನಷ್ಟೇ
ಅವನ ಬಯೋಡಾಟಾ ಬದಲಿಸಬೇಕು.

ನಿರ್ಭಿಡೆಯ ಮಕ್ಕಳು ಕಥೆ ಹಿಂಜುತ್ತಿವೆ
ನೀನೇ ಉತ್ತರಹೇಳು ರಾಮಾ.
ವಿಜ್ಞಾನ ದೇವಕಣ ಸೃಷ್ಠಿಯ ಆದಿ ಅನಂತದ
ನಿಗೂಢದೊಳಹೊಕ್ಕು ಝಾಲಾಡಿಸಿ ಸತ್ಯ ಬಹಿರಂಗಿಸುವ
ಈ ಹೊಸ ದೇವರುಗಳಿಗೆ ಬೆರಗಾಗುವುದಬಿಟ್ಟು
ಬೇರೇನೂ ಉಳಿಯಲಿಲ್ಲ ರಾಮಾ
ರಾಮ ರಾಮಾ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...