Home / ಕವನ / ಕವಿತೆ / ಬಯೋಡಾಟಾ ಬದಲಿಸಬೇಕಂತೆ

ಬಯೋಡಾಟಾ ಬದಲಿಸಬೇಕಂತೆ

ಹೂವು ತೋರಣಗಳ ಛತ್ರಚಾಮರಗಳಿಂದಲಕೃತ ವೇದಿಕೆ
ಕಣ್ಮನ ಸೆಳೆವ ರೆಶ್ಮೆ ಪಂಚೆಯುಡುಗೆ ತೊಡುಗೆ
ವಜ್ರವೈಡೂರ್‍ಯಗಳ ಕಿರೀಟಧರಿಸಿದ ಶ್ರೀರಾಮಚಂದ್ರ
ಸುಶೋಭಿತ ಚಂದ್ರವದನೆ ಸೀತೆಯ ಪಟ್ಟಾಭಿಷೇಕ
ಮನಮೋಹಕ ಚಿತ್ತಾಕರ್‍ಷಕ
ಕ್ಯಾಲಂಡರದೊಳಗಿನ ದೃಶ್ಯಕಾವ್ಯ.

ದೇವದೇವೋತ್ತಮ ಪುರುಷೋತ್ತಮ ರಾಮನೆಂದರೆ
ರಾಜಾರಾಮ ರಘುಕುಲತಿಲಕನೆಂದರೆ
ಪಿಳಿಪಿಳಿ ಕಣ್ಣು ಹೊಸಪೀಳಿಗೆಯವುಗಳಿಗೆ
ರಾಮನವತಾರದ ಬಟ್ಟೆತೊಟ್ಟು
ಕುಸಂಬರಿ ಪಾನಕ ಸವಿದು
ದಿನದ ರಜೆ ಕಳೆದುಬಿಟ್ಟರೆ
ಹಿರಿಯರ ರಾಮನಾಮಸ್ಮರಣೆ ಏನೆಂದು
ಯಾಕೆಂದು ಗೊತ್ತಾಗದೆ ಗಲಿಬಿಲಿ.

ಭಕ್ತಿಭಾವ ನಂಬಿಕೆ ವಿಶ್ವಾಸಗಳ ಬಗೆಗೆ ಹೇಳಿದ್ದಾದರೆ
ಅದೆಂತಹ ನಾಮಬಲ, ಹೇಗಿದ್ದನಾತ
ಅವನ ಓದು ಕೆಲಸ ಹೆಂಡತಿ ಮಕ್ಕಳು ಏನೆಂದು
ನಿನ್ನ ಬಯೋಡಾಟಾ ಕೇಳುತ್ತಾರೆ ರಾಮಾ-

ಮೊದಲ ಸುತ್ತಿನ ನಿನ್ನ ಪರಿಚಯ ಕೇಳಿದ್ದೇ ಸಾಕು
ಈಗ ನೂರಾರು ಪ್ರಶ್ನೆಗಳ ಮೂಟೆಹೊತ್ತು ಬಂದಿದ್ದಾರೆ.
ದೇವನಾಗಿದ್ದರೆ…
ಗೊತ್ತಾಗಬೇಕಿತ್ತು ಮಾಯಾಜಿಂಕೆಯ ಬೆನ್ನುಹತ್ತಿ
ದಂಡಕಾರಣ್ಯದಲಿ ಸೀತೆಯನ್ನು ಬಿಟ್ಟು ಹೋದನೇಕೆ?-
ಹದಿನಾಲ್ಕು ವರ್ಷ ಮಕ್ಕಳಾಗದಂತೆ
ಅದಾವ ನಾರುಬೇರು ಕೊಟ್ಟು ಸೀತೆಗೆ ಸಮಾಧಾನಿಸಿದನಂತೆ?
ರಾವಣ, ಸೀತಾಪರಹಣ, ಮರುಪಟ್ಟಾಭಿಷೇಕ
ಅಬ್ಬಬ್ಬಾ! ಹೌದು, ಆದರೆ….
ದೇವನಾಗಿದ್ದರೆ, ರಾಜನಾಗಿದ್ದರೆ, ಹೋಗಲಿ ಪುರುಷೋತ್ತಮನಾಗಿದ್ದರೆ…
ಹಾದಿಹೋಕರ ಮಾತಿಗೆ ಬೆಲೆಕೊಟ್ಟು
ಹೆಂಡತಿಗೆ ಅಪಮಾನಸಿ ಅಗ್ನಿಪರೀಕ್ಷೆ ಮಾಡಿಸಿದನೇಕೆ?-
ತುಂಬು ಬಸುರಿಯನು ನದಿದಾಟಿಸಿ ಕಾಡಿಗೆ ಬಿಟ್ಟಿದ್ದೇಕೆ?

ಮಕ್ಕಳಾದರೂ ಮರಳಿನೋಡದ ಜನಪಾಲಕ
ಪ್ರಜೆಗಳ ಪರಾಕದಮಲಿಗೆ ಹೆಂಡತಿ ಮಕ್ಕಳಿಗೆ
ಅಪಾತ್ರನಾದ ರಾಮರಾಮ ಅದ್ಹೇಗೆ ದೇವಮಾನವನಂತೆ?-
ಅವನೊಬ್ಬ ಪುರುಷರಲಿ ಪುರುಷನಷ್ಟೇ
ಅವನ ಬಯೋಡಾಟಾ ಬದಲಿಸಬೇಕು.

ನಿರ್ಭಿಡೆಯ ಮಕ್ಕಳು ಕಥೆ ಹಿಂಜುತ್ತಿವೆ
ನೀನೇ ಉತ್ತರಹೇಳು ರಾಮಾ.
ವಿಜ್ಞಾನ ದೇವಕಣ ಸೃಷ್ಠಿಯ ಆದಿ ಅನಂತದ
ನಿಗೂಢದೊಳಹೊಕ್ಕು ಝಾಲಾಡಿಸಿ ಸತ್ಯ ಬಹಿರಂಗಿಸುವ
ಈ ಹೊಸ ದೇವರುಗಳಿಗೆ ಬೆರಗಾಗುವುದಬಿಟ್ಟು
ಬೇರೇನೂ ಉಳಿಯಲಿಲ್ಲ ರಾಮಾ
ರಾಮ ರಾಮಾ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...