ಬಯೋಡಾಟಾ ಬದಲಿಸಬೇಕಂತೆ

ಹೂವು ತೋರಣಗಳ ಛತ್ರಚಾಮರಗಳಿಂದಲಕೃತ ವೇದಿಕೆ
ಕಣ್ಮನ ಸೆಳೆವ ರೆಶ್ಮೆ ಪಂಚೆಯುಡುಗೆ ತೊಡುಗೆ
ವಜ್ರವೈಡೂರ್‍ಯಗಳ ಕಿರೀಟಧರಿಸಿದ ಶ್ರೀರಾಮಚಂದ್ರ
ಸುಶೋಭಿತ ಚಂದ್ರವದನೆ ಸೀತೆಯ ಪಟ್ಟಾಭಿಷೇಕ
ಮನಮೋಹಕ ಚಿತ್ತಾಕರ್‍ಷಕ
ಕ್ಯಾಲಂಡರದೊಳಗಿನ ದೃಶ್ಯಕಾವ್ಯ.

ದೇವದೇವೋತ್ತಮ ಪುರುಷೋತ್ತಮ ರಾಮನೆಂದರೆ
ರಾಜಾರಾಮ ರಘುಕುಲತಿಲಕನೆಂದರೆ
ಪಿಳಿಪಿಳಿ ಕಣ್ಣು ಹೊಸಪೀಳಿಗೆಯವುಗಳಿಗೆ
ರಾಮನವತಾರದ ಬಟ್ಟೆತೊಟ್ಟು
ಕುಸಂಬರಿ ಪಾನಕ ಸವಿದು
ದಿನದ ರಜೆ ಕಳೆದುಬಿಟ್ಟರೆ
ಹಿರಿಯರ ರಾಮನಾಮಸ್ಮರಣೆ ಏನೆಂದು
ಯಾಕೆಂದು ಗೊತ್ತಾಗದೆ ಗಲಿಬಿಲಿ.

ಭಕ್ತಿಭಾವ ನಂಬಿಕೆ ವಿಶ್ವಾಸಗಳ ಬಗೆಗೆ ಹೇಳಿದ್ದಾದರೆ
ಅದೆಂತಹ ನಾಮಬಲ, ಹೇಗಿದ್ದನಾತ
ಅವನ ಓದು ಕೆಲಸ ಹೆಂಡತಿ ಮಕ್ಕಳು ಏನೆಂದು
ನಿನ್ನ ಬಯೋಡಾಟಾ ಕೇಳುತ್ತಾರೆ ರಾಮಾ-

ಮೊದಲ ಸುತ್ತಿನ ನಿನ್ನ ಪರಿಚಯ ಕೇಳಿದ್ದೇ ಸಾಕು
ಈಗ ನೂರಾರು ಪ್ರಶ್ನೆಗಳ ಮೂಟೆಹೊತ್ತು ಬಂದಿದ್ದಾರೆ.
ದೇವನಾಗಿದ್ದರೆ…
ಗೊತ್ತಾಗಬೇಕಿತ್ತು ಮಾಯಾಜಿಂಕೆಯ ಬೆನ್ನುಹತ್ತಿ
ದಂಡಕಾರಣ್ಯದಲಿ ಸೀತೆಯನ್ನು ಬಿಟ್ಟು ಹೋದನೇಕೆ?-
ಹದಿನಾಲ್ಕು ವರ್ಷ ಮಕ್ಕಳಾಗದಂತೆ
ಅದಾವ ನಾರುಬೇರು ಕೊಟ್ಟು ಸೀತೆಗೆ ಸಮಾಧಾನಿಸಿದನಂತೆ?
ರಾವಣ, ಸೀತಾಪರಹಣ, ಮರುಪಟ್ಟಾಭಿಷೇಕ
ಅಬ್ಬಬ್ಬಾ! ಹೌದು, ಆದರೆ….
ದೇವನಾಗಿದ್ದರೆ, ರಾಜನಾಗಿದ್ದರೆ, ಹೋಗಲಿ ಪುರುಷೋತ್ತಮನಾಗಿದ್ದರೆ…
ಹಾದಿಹೋಕರ ಮಾತಿಗೆ ಬೆಲೆಕೊಟ್ಟು
ಹೆಂಡತಿಗೆ ಅಪಮಾನಸಿ ಅಗ್ನಿಪರೀಕ್ಷೆ ಮಾಡಿಸಿದನೇಕೆ?-
ತುಂಬು ಬಸುರಿಯನು ನದಿದಾಟಿಸಿ ಕಾಡಿಗೆ ಬಿಟ್ಟಿದ್ದೇಕೆ?

ಮಕ್ಕಳಾದರೂ ಮರಳಿನೋಡದ ಜನಪಾಲಕ
ಪ್ರಜೆಗಳ ಪರಾಕದಮಲಿಗೆ ಹೆಂಡತಿ ಮಕ್ಕಳಿಗೆ
ಅಪಾತ್ರನಾದ ರಾಮರಾಮ ಅದ್ಹೇಗೆ ದೇವಮಾನವನಂತೆ?-
ಅವನೊಬ್ಬ ಪುರುಷರಲಿ ಪುರುಷನಷ್ಟೇ
ಅವನ ಬಯೋಡಾಟಾ ಬದಲಿಸಬೇಕು.

ನಿರ್ಭಿಡೆಯ ಮಕ್ಕಳು ಕಥೆ ಹಿಂಜುತ್ತಿವೆ
ನೀನೇ ಉತ್ತರಹೇಳು ರಾಮಾ.
ವಿಜ್ಞಾನ ದೇವಕಣ ಸೃಷ್ಠಿಯ ಆದಿ ಅನಂತದ
ನಿಗೂಢದೊಳಹೊಕ್ಕು ಝಾಲಾಡಿಸಿ ಸತ್ಯ ಬಹಿರಂಗಿಸುವ
ಈ ಹೊಸ ದೇವರುಗಳಿಗೆ ಬೆರಗಾಗುವುದಬಿಟ್ಟು
ಬೇರೇನೂ ಉಳಿಯಲಿಲ್ಲ ರಾಮಾ
ರಾಮ ರಾಮಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೦
Next post ಕರ್‍ಣ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…