ಕರ್‍ಣ

ದ್ರೋಣಾಚಾರ್ಯರು ಕೌರವ ಪಾಂಡವರಿಗೆ ಬಿಲ್ಲಿನ ವಿದ್ಯೆಯನ್ನು ಕಲಿಸುತ್ತಿದ್ದರು. ಕರ್ಣನು ಬಂದು ತನಗೂ ಕಲಿಸಬೇಕೆಂದು ಕೇಳಿಕೊಂಡನು. ಅವರು “ನೀನು ಕ್ಷತ್ರಿಯನಲ್ಲ. ನಾನು ನಿನಗೆ ವಿದ್ಯೆಯನ್ನು ಹೇಳಿ ಕೊಡುವುದಿಲ್ಲ” ಎಂದರು. ಕರ್‍ಣನು “ಬೇರೆ ಕಡೆಯಲ್ಲಿ ಕಲಿತು ಬರುವೆನು” ಎಂದು ಆಣೆಯಿಟ್ಟುಕೊಂಡನು.

ಆಗಿನ ಕಾಲದಲ್ಲಿ ಪರಶುರಾಮರನ್ನು ಬಿಟ್ಟರೆ, ದ್ರೋಣಾಚಾರ್ಯರನ್ನು ಮೀರಿಸಿದವರು ಯಾರೂ ಇರಲಿಲ್ಲ. ಅದರಿಂದ ಕರ್‍ಣನು ಅವರ ಬಳಿಗೇ ಹೋದನು. ಅವರು ಬ್ರಾಹ್ಮಣರಲ್ಲದವರಿಗೆ ವಿದ್ಯೆಯನ್ನು ಹೇಳುತ್ತಿರಲಿಲ್ಲ. ಕರ್ಣನು “ತಾನೂ ಬ್ರಾಹ್ಮಣನು” ಎಂದು ಸಟೆಯಾಡಿದನು. ಅವರು ಅದು ದಿಟಿನೆಂದು ನಂಬಿ ಅವನನ್ನು ಶಿಷ್ಯನನ್ನಾಗಿ ಸೇರಿಸಿಕೊಂಡರು.

ಆದರೆ ಈ ಕಪಟವು ಬಹಳ ಕಾಲದವರೆಗೆ ಹೊರಬೀಳಲಿಲ್ಲ. ಕರ್‍ಣನು ಬ್ರಾಹ್ಮಣನೆಂದೇ ಪರಶುರಾಮರು ವಿದ್ಯೆಯನ್ನೆಲ್ಲಾ ಹೇಳಿಕೊಟ್ಟರು. ಇನ್ನು ಕೆಲವು ದಿನವಾದರೆ ಎಲ್ಲವೂ ಮುಗಿದು ಕರ್‍ಣನು ಹಿಂತಿರುಗಬಹುದು. ಆಗ ಒಂದು ದಿನ ಅವನ ಗುಟ್ಟು ಹೊರಬಿತ್ತು. “ಕರ್‍ಣನು ಬ್ರಾಹ್ಮಣನಲ್ಲ” ಎಂಬುದು ಅವರಿಗೆ ತಿಳಿದುಹೋಯಿತು. ಸಟೆಯಾಡಿ ಮೋಸ ಮಾಡಿದನೆಂದು ಅವರಿಗೆ ಬಹಳ ಸಿಟ್ಟು ಬಂತು. “ಸುಳ್ಳು ಹೇಳಿ ಮೋಸದಿಂದ ಈ ವಿದ್ಯೆಯನ್ನು ಸಂಪಾದಿಸಿದೆ. ಇದು ನಿನಗೆ ಸಮಯದಲ್ಲಿ ಫಲಿಸದೆ ಹೋಗಲಿ” ಎಂದು ಹೇಳಿಬಿಟ್ಟರು.

ಅದರಂತೆಯೇ ಕರ್‍ಣನು ಯುದ್ಧಕ್ಕೆ ಹೋದಾಗಲೆಲ್ಲಾ ಅವನಿಗೆ ಬಾಣ ವಿದ್ಯೆಯು ಮರೆತು ಹೋಗುತ್ತಿತ್ತು. ಅದರಿಂದಲೇ ಅವನಿಗೆ ಸಾವೂ ಬಂದಿತು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...