ಕರ್‍ಣ

ದ್ರೋಣಾಚಾರ್ಯರು ಕೌರವ ಪಾಂಡವರಿಗೆ ಬಿಲ್ಲಿನ ವಿದ್ಯೆಯನ್ನು ಕಲಿಸುತ್ತಿದ್ದರು. ಕರ್ಣನು ಬಂದು ತನಗೂ ಕಲಿಸಬೇಕೆಂದು ಕೇಳಿಕೊಂಡನು. ಅವರು “ನೀನು ಕ್ಷತ್ರಿಯನಲ್ಲ. ನಾನು ನಿನಗೆ ವಿದ್ಯೆಯನ್ನು ಹೇಳಿ ಕೊಡುವುದಿಲ್ಲ” ಎಂದರು. ಕರ್‍ಣನು “ಬೇರೆ ಕಡೆಯಲ್ಲಿ ಕಲಿತು ಬರುವೆನು” ಎಂದು ಆಣೆಯಿಟ್ಟುಕೊಂಡನು.

ಆಗಿನ ಕಾಲದಲ್ಲಿ ಪರಶುರಾಮರನ್ನು ಬಿಟ್ಟರೆ, ದ್ರೋಣಾಚಾರ್ಯರನ್ನು ಮೀರಿಸಿದವರು ಯಾರೂ ಇರಲಿಲ್ಲ. ಅದರಿಂದ ಕರ್‍ಣನು ಅವರ ಬಳಿಗೇ ಹೋದನು. ಅವರು ಬ್ರಾಹ್ಮಣರಲ್ಲದವರಿಗೆ ವಿದ್ಯೆಯನ್ನು ಹೇಳುತ್ತಿರಲಿಲ್ಲ. ಕರ್ಣನು “ತಾನೂ ಬ್ರಾಹ್ಮಣನು” ಎಂದು ಸಟೆಯಾಡಿದನು. ಅವರು ಅದು ದಿಟಿನೆಂದು ನಂಬಿ ಅವನನ್ನು ಶಿಷ್ಯನನ್ನಾಗಿ ಸೇರಿಸಿಕೊಂಡರು.

ಆದರೆ ಈ ಕಪಟವು ಬಹಳ ಕಾಲದವರೆಗೆ ಹೊರಬೀಳಲಿಲ್ಲ. ಕರ್‍ಣನು ಬ್ರಾಹ್ಮಣನೆಂದೇ ಪರಶುರಾಮರು ವಿದ್ಯೆಯನ್ನೆಲ್ಲಾ ಹೇಳಿಕೊಟ್ಟರು. ಇನ್ನು ಕೆಲವು ದಿನವಾದರೆ ಎಲ್ಲವೂ ಮುಗಿದು ಕರ್‍ಣನು ಹಿಂತಿರುಗಬಹುದು. ಆಗ ಒಂದು ದಿನ ಅವನ ಗುಟ್ಟು ಹೊರಬಿತ್ತು. “ಕರ್‍ಣನು ಬ್ರಾಹ್ಮಣನಲ್ಲ” ಎಂಬುದು ಅವರಿಗೆ ತಿಳಿದುಹೋಯಿತು. ಸಟೆಯಾಡಿ ಮೋಸ ಮಾಡಿದನೆಂದು ಅವರಿಗೆ ಬಹಳ ಸಿಟ್ಟು ಬಂತು. “ಸುಳ್ಳು ಹೇಳಿ ಮೋಸದಿಂದ ಈ ವಿದ್ಯೆಯನ್ನು ಸಂಪಾದಿಸಿದೆ. ಇದು ನಿನಗೆ ಸಮಯದಲ್ಲಿ ಫಲಿಸದೆ ಹೋಗಲಿ” ಎಂದು ಹೇಳಿಬಿಟ್ಟರು.

ಅದರಂತೆಯೇ ಕರ್‍ಣನು ಯುದ್ಧಕ್ಕೆ ಹೋದಾಗಲೆಲ್ಲಾ ಅವನಿಗೆ ಬಾಣ ವಿದ್ಯೆಯು ಮರೆತು ಹೋಗುತ್ತಿತ್ತು. ಅದರಿಂದಲೇ ಅವನಿಗೆ ಸಾವೂ ಬಂದಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯೋಡಾಟಾ ಬದಲಿಸಬೇಕಂತೆ
Next post ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys