Home / ಕವನ / ಕವಿತೆ / ಮನಸೇಽ

ಮನಸೇಽ

ಗೊಂದಲಗೂಡು ನರಕಸದೃಶ
ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು
ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ
ಬಸವಳಿಯುವ ಮನಸೇ
ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ

ಕಣ್ಣಾಡಿಸು ಸುತ್ತಮುತ್ತೆಲ್ಲ
ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು
ನೋಡು ದೂರದಿಗಂತದೆಡೆಗೆ
ಸೂರ್‍ಯ ನಕ್ಕು ಮುಕ್ಕಳಿಸಿದ ಬಂಗಾರ ನೀರಿನಲೆಗಳ
ನಡುವೆ ತೇಲುವ ಹಾಯಿ ದೋಣಿಗಳ;

ಕಾಣದಿರಲಿ ಮರಳ ಮೇಲಿನ ಕಸಕಡ್ಡಿ
ಬೆನ್ನಹಿಂದಿನ ಎತ್ತರೆತ್ತದ ಜಂಬದ
ಮನೆಗಳ ಪಗಡೆಯಾಟದ ನೋಟ.

ಸುತ್ತಾಡಿ ನಗರ ಪ್ರದಕ್ಷಿಣೆ ಮಾಡು ಮನಸೇ
ಸಂಪಿಗೆ ಗುಲಾಬಿ ಪಾರಿಜಾತ ಹೂಗಿಡಮರ
ಬಳ್ಳಿಗಳ ಪರಿಮಳ ಆಸ್ವಾದಿಸು
ಸ್ವಲ್ಪ ಉಸಿರು ಬಿಗಿಹಿಡಿ ಚರಂಡಿ ತಿಪ್ಪೆಗಳೂ ಇವೆ
ಕಣ್ಣಿಗೆ ಒಳಪರದೆ ಬೀಳಲಿ ಜನ ಕಾಣದಿರಲಿ.

ನಿರಮ್ಮಳವಾಗಿ ಹಣೆಗಂಟು ಇಳಿಸು ಮನಸೇ
ಜೋಲು ಮುಖ ಎತ್ತಿ ನಗೆಹೊತ್ತು
ಸುತ್ತೆಲ್ಲ ನೋಡು ಇದು ನಿನ್ನದೇ ನಾಡು ನುಡಿ
ನಿನ್ನವರೇ ಸಂಬಂಧಿಗಳ ಕಲರವ
ಮುದ್ದಿಡುತಿದೆ ನಾಯಿ ನಿನ್ನ ಕಾಲಿಗೆ
ನಗು ರಿಂಗಣಿಸಲಿ; ಕಿವಿಗೆ ಬಿಡು ಎಣ್ಣೆ.

ಸುಮ್ಮನೆ ಕೂಡು ದೀಪದ ಬೆಳಕಿನ ದೇವನೆದುರಲಿ
ನೋಡು ಅವನ ಕಣ್ಣಲಿ ಮಿಂಚುನಗು
ತುಟಿಯಲ್ಲಿಯ ತುಂಟನಗು ಮುಡಿಗೇರಿಸಿದ ಹೂವು
ಮುಗ್ಧ ಮೊಲ, ಪುಣ್ಯಕೋಟಿ ಗೋವು;
ಕಾಣಿಸಿದರೆ ಕಾಣಿಸಲಿ ಅವನ ಸುತ್ತ ತುಂಬಿರುವ
ಹುಲಿ ಹಾವು ಕೀಟಗಳ ಹರಿದಾಟ
ನಡುವೆ ಪ್ರಶಾಂತ ಚಿತ್ಕಳೆಯ ಸಾಕಾರ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...