Home / ಕವನ / ಕವಿತೆ / ಮನಸೇಽ

ಮನಸೇಽ

ಗೊಂದಲಗೂಡು ನರಕಸದೃಶ
ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು
ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ
ಬಸವಳಿಯುವ ಮನಸೇ
ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ

ಕಣ್ಣಾಡಿಸು ಸುತ್ತಮುತ್ತೆಲ್ಲ
ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು
ನೋಡು ದೂರದಿಗಂತದೆಡೆಗೆ
ಸೂರ್‍ಯ ನಕ್ಕು ಮುಕ್ಕಳಿಸಿದ ಬಂಗಾರ ನೀರಿನಲೆಗಳ
ನಡುವೆ ತೇಲುವ ಹಾಯಿ ದೋಣಿಗಳ;

ಕಾಣದಿರಲಿ ಮರಳ ಮೇಲಿನ ಕಸಕಡ್ಡಿ
ಬೆನ್ನಹಿಂದಿನ ಎತ್ತರೆತ್ತದ ಜಂಬದ
ಮನೆಗಳ ಪಗಡೆಯಾಟದ ನೋಟ.

ಸುತ್ತಾಡಿ ನಗರ ಪ್ರದಕ್ಷಿಣೆ ಮಾಡು ಮನಸೇ
ಸಂಪಿಗೆ ಗುಲಾಬಿ ಪಾರಿಜಾತ ಹೂಗಿಡಮರ
ಬಳ್ಳಿಗಳ ಪರಿಮಳ ಆಸ್ವಾದಿಸು
ಸ್ವಲ್ಪ ಉಸಿರು ಬಿಗಿಹಿಡಿ ಚರಂಡಿ ತಿಪ್ಪೆಗಳೂ ಇವೆ
ಕಣ್ಣಿಗೆ ಒಳಪರದೆ ಬೀಳಲಿ ಜನ ಕಾಣದಿರಲಿ.

ನಿರಮ್ಮಳವಾಗಿ ಹಣೆಗಂಟು ಇಳಿಸು ಮನಸೇ
ಜೋಲು ಮುಖ ಎತ್ತಿ ನಗೆಹೊತ್ತು
ಸುತ್ತೆಲ್ಲ ನೋಡು ಇದು ನಿನ್ನದೇ ನಾಡು ನುಡಿ
ನಿನ್ನವರೇ ಸಂಬಂಧಿಗಳ ಕಲರವ
ಮುದ್ದಿಡುತಿದೆ ನಾಯಿ ನಿನ್ನ ಕಾಲಿಗೆ
ನಗು ರಿಂಗಣಿಸಲಿ; ಕಿವಿಗೆ ಬಿಡು ಎಣ್ಣೆ.

ಸುಮ್ಮನೆ ಕೂಡು ದೀಪದ ಬೆಳಕಿನ ದೇವನೆದುರಲಿ
ನೋಡು ಅವನ ಕಣ್ಣಲಿ ಮಿಂಚುನಗು
ತುಟಿಯಲ್ಲಿಯ ತುಂಟನಗು ಮುಡಿಗೇರಿಸಿದ ಹೂವು
ಮುಗ್ಧ ಮೊಲ, ಪುಣ್ಯಕೋಟಿ ಗೋವು;
ಕಾಣಿಸಿದರೆ ಕಾಣಿಸಲಿ ಅವನ ಸುತ್ತ ತುಂಬಿರುವ
ಹುಲಿ ಹಾವು ಕೀಟಗಳ ಹರಿದಾಟ
ನಡುವೆ ಪ್ರಶಾಂತ ಚಿತ್ಕಳೆಯ ಸಾಕಾರ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...