Home / ಕವನ / ಕವಿತೆ / ಮನಸೇಽ

ಮನಸೇಽ

ಗೊಂದಲಗೂಡು ನರಕಸದೃಶ
ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು
ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ
ಬಸವಳಿಯುವ ಮನಸೇ
ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ

ಕಣ್ಣಾಡಿಸು ಸುತ್ತಮುತ್ತೆಲ್ಲ
ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು
ನೋಡು ದೂರದಿಗಂತದೆಡೆಗೆ
ಸೂರ್‍ಯ ನಕ್ಕು ಮುಕ್ಕಳಿಸಿದ ಬಂಗಾರ ನೀರಿನಲೆಗಳ
ನಡುವೆ ತೇಲುವ ಹಾಯಿ ದೋಣಿಗಳ;

ಕಾಣದಿರಲಿ ಮರಳ ಮೇಲಿನ ಕಸಕಡ್ಡಿ
ಬೆನ್ನಹಿಂದಿನ ಎತ್ತರೆತ್ತದ ಜಂಬದ
ಮನೆಗಳ ಪಗಡೆಯಾಟದ ನೋಟ.

ಸುತ್ತಾಡಿ ನಗರ ಪ್ರದಕ್ಷಿಣೆ ಮಾಡು ಮನಸೇ
ಸಂಪಿಗೆ ಗುಲಾಬಿ ಪಾರಿಜಾತ ಹೂಗಿಡಮರ
ಬಳ್ಳಿಗಳ ಪರಿಮಳ ಆಸ್ವಾದಿಸು
ಸ್ವಲ್ಪ ಉಸಿರು ಬಿಗಿಹಿಡಿ ಚರಂಡಿ ತಿಪ್ಪೆಗಳೂ ಇವೆ
ಕಣ್ಣಿಗೆ ಒಳಪರದೆ ಬೀಳಲಿ ಜನ ಕಾಣದಿರಲಿ.

ನಿರಮ್ಮಳವಾಗಿ ಹಣೆಗಂಟು ಇಳಿಸು ಮನಸೇ
ಜೋಲು ಮುಖ ಎತ್ತಿ ನಗೆಹೊತ್ತು
ಸುತ್ತೆಲ್ಲ ನೋಡು ಇದು ನಿನ್ನದೇ ನಾಡು ನುಡಿ
ನಿನ್ನವರೇ ಸಂಬಂಧಿಗಳ ಕಲರವ
ಮುದ್ದಿಡುತಿದೆ ನಾಯಿ ನಿನ್ನ ಕಾಲಿಗೆ
ನಗು ರಿಂಗಣಿಸಲಿ; ಕಿವಿಗೆ ಬಿಡು ಎಣ್ಣೆ.

ಸುಮ್ಮನೆ ಕೂಡು ದೀಪದ ಬೆಳಕಿನ ದೇವನೆದುರಲಿ
ನೋಡು ಅವನ ಕಣ್ಣಲಿ ಮಿಂಚುನಗು
ತುಟಿಯಲ್ಲಿಯ ತುಂಟನಗು ಮುಡಿಗೇರಿಸಿದ ಹೂವು
ಮುಗ್ಧ ಮೊಲ, ಪುಣ್ಯಕೋಟಿ ಗೋವು;
ಕಾಣಿಸಿದರೆ ಕಾಣಿಸಲಿ ಅವನ ಸುತ್ತ ತುಂಬಿರುವ
ಹುಲಿ ಹಾವು ಕೀಟಗಳ ಹರಿದಾಟ
ನಡುವೆ ಪ್ರಶಾಂತ ಚಿತ್ಕಳೆಯ ಸಾಕಾರ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...