Home / ಕವನ / ಕವಿತೆ / ಶರಣೆಂಬೆವು

ಶರಣೆಂಬೆವು

ಶರಣೆಂಬೆವು ತಾಯಿ ಶರಣೆಂಬೆವು
ಶರಣಾಗತರಾಗಿಹೆವು ರಕ್ಷಿಸೆಮ್ಮನು
ಕರಮುಗಿದು ಬೇಡುವೆವು ವರವೊಂದನು ||

ಭುವನೇಶ್ವರಿಯೆ ತಾಯೆ ರಾಜ ರಾಜೇಶ್ವರಿಯೆ
ಕರುನಾಡ ತಾಯೆ ಕರುಣೆಯ ತೋರು
ಕರಮುಗಿದು ಬೇಡುವೆವು ವರವೊಂದನು ||

ನಿನ್ನ ಕರುಣೆಯೆ ನಮಗೆ ಶ್ರೀ ರಕ್ಷೆ
ನಿನ್ನೆದೆಯ ಭಾವವೆ ಅಭಯ ದೀಕ್ಷೆ
ನಿನ್ನ ಮಮತೆಯೆ ದಯಾದೀನವೂ
ಕರಮುಗಿದು ಬೇಡುವೆವು ವರವೊಂದನು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||

ತಂಬಿಟ್ಟು ಹೋದಾವರೆ ನಿನಗರ್‍ಪಿಸಿ
ಕರ್‍ಪೂರದಾರತಿ ಮಾಡಿ ಮನದಿಂದೆ
ಭಕುತರ ಹರಸಿ ನೀ ಮನದಿಂದೆ
ಕರಮುಗಿದು ಬೇಡುವೆವು ವರವೊಂದನು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||

ಬನಶಂಕರಿ ಮಹಾಮಾಯೆ ಮಾಹೇಶ್ವರಿ
ಜಗಧಾತ್ರೆ ರಕ್ಷಿಸಿ ಕರುಣೆ ತೋರು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||
ಕಬ್ಬಿನ ಜಲ್ಲೆ ರಸದೌತಣ ನೈವೇದ್ಯ ನಿನಗರ್‍ಪಿಸಿ
ಮಲ್ಲೆ ಹೂಮಾಲೆ ಮುಡಿಪಾಗಿರಿಸಿ
ಜಗದಂಭಾ ಸ್ವರೂಪಿಣಿ ನಿನ್ನ ಲೀಲೆಯಲಿ
ಹೊನ್ನ ಹೂವುಗಳಾಗಿ ನಲಿವೆವು ನಿನ್ನ ಚರಣದಲಿ
ಕರ ಮುಗಿದು ಬೇಡುವೆವು ವರವೊಂದನು
ಶರಣಾಗಿಹೆವು ರಕ್ಷಿಸೆಮ್ಮನು ||

ಏಳೇಳು ಜನ್ಮಕೂ ನಿನ್ನ ಸೇವೆಯಲಿ
ಮುಡುಪಾಗಿರಿಸು ಎಮ್ಮನು ನಿನ್ನ ಮಣ್ಣಲಿ
ಚೈತನ್ಯವಾಗಿರಿಸಿ ಹರಸು ತಾಯೆ ಮಡಿಲ ಮಕ್ಕಳ
ಕರ ಮುಗಿದು ಬೇಡುವೆವು ಕರುಣೆಯಿಂದಲಿ
ನೀಡು ವರವೊಂದನು ||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...