ಅಲ್ಲಮ

ಈ ಹುಡಿಯ ಗೂಡಿನೊಳಗೆ ರಕ್ತ ಮಾಂಸ
ಹೂವ ಮಿಡಿಯು ಕಾಲ ಕಾಲಕೆ ನೆರದು,
ಅರಳಿ ಮಿಂದ ಘಮ ಮನದ ಘನ
ಎಲ್ಲಾ ಮುಖದಲಿ ಗುಹೇಶ್ವರನ ನೆರಳು.

ಮನಸಿನಲಿ ಮಹಾಲಿಂಗದ ಬೆಳಕು
ಅರಳಿತು ಆಳಕ್ಕಿದರೆ ಕ್ಯಾದಿಗೆಯ ಘಮ
ಸೊಂಪನ್ನು ಕಂಡವರಿಲ್ಲ ಅನುಭವಿಸಿದವರು
ಚಿಹ್ನೆಯಲಿ ನೇತ್ರದಲಿ ಸರ್ವಾಂಗದಲಿ ಪ್ರಭುಲಿಂಗ
ಲೀಲೆ.

ಮಾಹೇ ಮುಂದಣ ನೃತ್ಯ ನನ್ನ ಬೆತ್ತಲೆ ಮಾಡಿ
ನಾಚಿಕೆಯನು ತೊರೆದ ಬಂಢಮನ ತಲೆ
ಬೋಳಿಸಿ ವಿರಕ್ತವಾದ ಸ್ನಾನ ಮಾಡಿ, ಅವಳ
ಮುಂದೆ ನಿಂತಾಗ ನನಗೆ ಒಲಿದಳು ಮುಕ್ತಂಗನೆ.

ಕಬ್ಬಿಸಲಿ ಕರಡಿ ಬೆನ್ನತ್ತಿ ಹೋದವರು ಕರಿ
ಅರಮನೆ ತಲುಪಿದರು. ನೀರಡಿಸಿದರೆ ಕಲ್ಲುಕವಚು
ಕರಳು ತುಂಬ ಕರ್ಪೂರ ಉರಿದರೆ ಕಳಿ ದಾಟಿ
ಕಸ್ತೂರಿಯ ಘಮ ಅರಳಿದ ಬೆಳಗು ಬೆಳಕು.

ಜಗದ ತುಂಬೆಲ್ಲಾ ಬೀಜ ಕಣಗಳು ಲಿಂಗಗಳು
ಪಾರಮಾರ್ಥದ ಪರೀಕ್ಷೆಯಲಿ ಅಂಗಾಂಗಳ ಸೆಡವು
ಮುಂದಿನ ಪ್ರಳಯಗಳಲಿ ಲೋಕ ಲೋಕವಾಗಿ
ಜಗದಂತೆ ಲಿಂಗ, ಲಿಂಗದಂತೆ ಮನ ಒಳಹೊರಗೂ
ಒಂದಾದ ಗುಹೇಶ್ವರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶರಣೆಂಬೆವು
Next post ಖಾಂಡವವನ ದಹನ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys