ಅಲ್ಲಮ

ಈ ಹುಡಿಯ ಗೂಡಿನೊಳಗೆ ರಕ್ತ ಮಾಂಸ
ಹೂವ ಮಿಡಿಯು ಕಾಲ ಕಾಲಕೆ ನೆರದು,
ಅರಳಿ ಮಿಂದ ಘಮ ಮನದ ಘನ
ಎಲ್ಲಾ ಮುಖದಲಿ ಗುಹೇಶ್ವರನ ನೆರಳು.

ಮನಸಿನಲಿ ಮಹಾಲಿಂಗದ ಬೆಳಕು
ಅರಳಿತು ಆಳಕ್ಕಿದರೆ ಕ್ಯಾದಿಗೆಯ ಘಮ
ಸೊಂಪನ್ನು ಕಂಡವರಿಲ್ಲ ಅನುಭವಿಸಿದವರು
ಚಿಹ್ನೆಯಲಿ ನೇತ್ರದಲಿ ಸರ್ವಾಂಗದಲಿ ಪ್ರಭುಲಿಂಗ
ಲೀಲೆ.

ಮಾಹೇ ಮುಂದಣ ನೃತ್ಯ ನನ್ನ ಬೆತ್ತಲೆ ಮಾಡಿ
ನಾಚಿಕೆಯನು ತೊರೆದ ಬಂಢಮನ ತಲೆ
ಬೋಳಿಸಿ ವಿರಕ್ತವಾದ ಸ್ನಾನ ಮಾಡಿ, ಅವಳ
ಮುಂದೆ ನಿಂತಾಗ ನನಗೆ ಒಲಿದಳು ಮುಕ್ತಂಗನೆ.

ಕಬ್ಬಿಸಲಿ ಕರಡಿ ಬೆನ್ನತ್ತಿ ಹೋದವರು ಕರಿ
ಅರಮನೆ ತಲುಪಿದರು. ನೀರಡಿಸಿದರೆ ಕಲ್ಲುಕವಚು
ಕರಳು ತುಂಬ ಕರ್ಪೂರ ಉರಿದರೆ ಕಳಿ ದಾಟಿ
ಕಸ್ತೂರಿಯ ಘಮ ಅರಳಿದ ಬೆಳಗು ಬೆಳಕು.

ಜಗದ ತುಂಬೆಲ್ಲಾ ಬೀಜ ಕಣಗಳು ಲಿಂಗಗಳು
ಪಾರಮಾರ್ಥದ ಪರೀಕ್ಷೆಯಲಿ ಅಂಗಾಂಗಳ ಸೆಡವು
ಮುಂದಿನ ಪ್ರಳಯಗಳಲಿ ಲೋಕ ಲೋಕವಾಗಿ
ಜಗದಂತೆ ಲಿಂಗ, ಲಿಂಗದಂತೆ ಮನ ಒಳಹೊರಗೂ
ಒಂದಾದ ಗುಹೇಶ್ವರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶರಣೆಂಬೆವು
Next post ಖಾಂಡವವನ ದಹನ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…