Home / ಲೇಖನ / ಅಣಕ / ಹೊಡಿಮಗ ಹೊಡಿಮಗ ಬಿಡಬೆಡ ಸಿದ್ದರಾಮನ್ನಾ

ಹೊಡಿಮಗ ಹೊಡಿಮಗ ಬಿಡಬೆಡ ಸಿದ್ದರಾಮನ್ನಾ

ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಸಿದ್ದರಾಮನ್ನಾ
ಚಾಮುಂಡೇಶ್ವರಿ ಸುತ್ತಮುತ್ತ
ಪ್ರಚಾರಕ್ಕೆ ಕಾಲಿಡ್ದಂಗೆ
ಎತ್ತಲೆ ಮಗ್ನೆ ಕಾಂಗ್ರೆಸ್ನೋನಾ

ಚುನಾವಣೆಗೆ ಬಂದ ಮೇಲೆ
ಗೆಲ್ಲು ಬೇಕು ಕಣೋ
ಸೋತು ಹೋದ್ರೆ ಕೋಜಾ ಸರ್ಕಾರ
ಕ್ಲೋಸೇ ಕಣೋ || ಹೊಡಿಮಗ||

ಮಗ್ನೆ ನಿದ್ದೆ ಹೊಡಿಬ್ಯಾಡ
ಮನೆಯಾಗೆ ಮುದ್ದೆ ಜಡಿಬ್ಯಾಡ
ಹಳ್ಳಿ ಹಳ್ಳ ಸುತ್ತ ಬೇಕ್ ಕಣಲೇ…..
ಶಿವಬಸಪ್ಪನ್ನ ಮುಂದಿಟ್ಕೊಂಡು
ಸ್ಕೆಚ್ ಹಾಕಬೇಕೋ
ಬಿಜೆಪಿಯೋನ ಹಿಂದಿಟ್ಕೊಂಡು
ಮೂರ್ತ ಇಡಬೇಕೋ
ಗೆದ್ದರೆ ಮಂತ್ರಿ ಕಣೋ ಸೋತ್ರೆ ಕಂತ್ರಿ ಕಣೋ
ಇದುವೆ ರಾಜಕೀಯದೋರ ಹಣೆಬರಹಾ
ಹೊಡಿಮಗ ಹೊಡಿಮಗ ಬಿಡಬೇಡ ಸಿದ್ದರಾಮನ್ನ||

ಹಿಂಗಂತ ಚಾಮುಂಡೇಶ್ವರಿ ಕ್ಷೇತ್ರದಾಗೆ ದ್ಯಾವೇಗೋಡ್ರು ಹಾಡು ಹೇಳ್ತಾ ಲಾಂಗ್ ಹಿಡ್ಕೊಂಡು ಪ್ರಚಾರ ಶುರುಹಚ್ಕಂಡವರೆ ಕಣ್ರಿ. ಕಾಂಗ್ರೆಸ್‌ನಾಗೇನು ಕವಿಗಳಿಲ್ವೆ? ಸಿಂಗರ್‌ಸಿಲ್ವೇ?  ಗೋಡ ‘ಜೋಗಿ’ ಫೀಲಂ ಸಾಂಗ್ ಸೆಲಕ್ಟ್ ಮಾಡ್ಕಂಡ್ರೆ ಕಾಂಗ್ರೆಸ್ನೋರು ‘ಈರ ಬಬ್ರುವಾಹನ’ ಫೀಲಂ ಸಾಂಗ್ ಮಾಡ್ಕಂಡವರೆ.

ಯಾರು ತಿಳಿಯರು ಗೋಡ ನಿನ್ನ ಭುಜಬಲದ ಪರಾಕ್ರಮ
ಚುನಾವಣೆಯೊಳ್ ಸಾಧಿಸಿದ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣವು ಕುಟುಂಬ ರಾಜಕೀಯ || ಯಾರು||

ಕನಕಪುರದಲಿ ನಿಂತು ತೇಜಮ್ಮ ವಿರುದ್ದ ಪಲ್ಟಿ
ಹೊಡೆದಾಗ ಎಲ್ಲಿ ಅಡಗಿತ್ತೋ ನಿನ್ನ ಶೌರ್ಯ
ಅಹಿಂದವನ್ನು ಕಟ್ಟಿ ಮೆರೆವ ಸಿದ್ದು ಸೈರಿಸದೆ
ಮಗನನ್ನೇ ಸಿ‌ಎಂ ಮಾಡಿದ ಭ್ರಷ್ಟಾ ನೀನು
ಕಾಂಗ್ರೆಸ್ನೋನ ಗೆಲ್ಲುವ ಗುಂಡಿಗೆಯು ನಿನಗೆಲ್ಲೋ
ಹೋಗು ಹೋಗಲೋ ಶಿಖಂಡಿ||

ಯಾವ ಲಾರಿ ಬಸ್ಸು ಟ್ರಾಕ್ಟರು ಆಟೋ ಎತ್ತಿನ ಬಂಡಿ ಮ್ಯಾಗೆಲ್ಲಾ ಮೈಕ್ ಹಾಕ್ಕಂಡು ಎಲ್ಡು ಪಕ್ಷದೋರೂ ಹೊಯ್ಕಳ್ಳಿಕತ್ತಾರ್ರಿ. ಈ ಮದ್ಯೆ ಜೆಡಿಯು ಗುರುಸಾಮಿ ಯಾವ ಫಿಲಂ ಸಾಂಗ್ ಹಾಡ್ಲಿಕತ್ತಾನೆ ಗೊತ್ತದೇನ್ರಿ? ಕೇಳ್ರಲಾ ……

ಇದೇನು ಸಭ್ಯತೆ ಇದೇನು ಸಂಸ್ಕೃತಿ
ಇದೇನು ಗೋಡ್ರ ದರ್ಬಾರು ಅವನ ಮಗನ
ಕಾರುಬಾರು – ನೋಡಲಾರೆ ಎನ್ನುತಿಹಳು
ನಮ್ಮ ತಾಯಿ ಚಾಮುಂಡಿ ||ಇದೇನು||
ದಾಸನಕೊಪ್ಪ ಬೋಗಾದೀಲಿ ಪ್ರಚಾರ ಮಾಡಿದ್ಹಾಗೆ/ಜೆಡಿ‌ಎಸ್ಸು ಬಿಜೆಪಿನೋರು
ನಡಿಸಿಹರು ಪೈಪೋಟಿ
ಇದರ ನಡುವೆ ಸಿಕ್ಕು ನಾನು ಆಗಿಹೆ ಪಡಪೋಸಿ
ಅಕ್ರಮ ಚುನಾವಣೆಯ ತಡೆಯಲೊಂದೆದಾರಿ
ಚುನಾವಣೆಯ ನಿಲ್ಲಿಸಿಬಿಟ್ರೆ ನಾನು ನಿಮ್ಗಭಾರಿ ||ಇದೇನು||

ಈ ಸಾಂಗ್ಗೆ ಸಿ‌ಎಂ ಕೊಮಾಸಾಮಿ ನೂ ಸಾಂಗ್ನಾಗೆ ಉತ್ತರ ಕೊಡ್ತಾರ್ರಿ. ಮೊದ್ಲೆ ಆವಯ್ಯ ಫೀಲಂ ಮೇಕರ್ರು. ಡೈರಕ್ಟರ್ ಎಸ್. ನಾರಾಯಣನೇ ಇನ್ ಡೈರಕ್ಟಾಗಿ ಸಾಂಗ್ ಬರ್ಕೊಟ್ಟವನಂತೆ ಅದು ಹಿಂಗಂದೇರಿ. ನಂಬಿದ್ರೆ ನಂಬ್ರಿ ಬಿಟ್ಟರೆ ಬಿಡ್ರಲಾ

ಕಲ್ಲಾದರೆ ನಾನು ಬಡವರ ಮನೆ
ತಳಪಾಯದಲಿ ಇರುವೆ
ಮರವಾದರೆ ನಾನು ರೈತರ ಮನೆ
ಒಲೆಯಲಿ ಧಗಧಗ ಉರಿವೆ
ಬೊಂಬಾದರೆ ನಾನು ನಿರ್ಗತಿಕರ
ಚಟ್ಟದಲಿ ಮಲಗಿರುವೆ|
ಗಳವಾದರೆ ನಾನು ದರಿದ್ರರ ಮನೆ
ಜಂತಿಯಲಿರುವೆ
ಏನಾದರೂ ಸೈ
ಶಿವಬಸಪ್ಪನ ಗೆಲುವಿಗೆ
ದುಡಿವೆ||  ಗೋಡ್ರ ಕಂದ| ಮಾತು ತಪ್ಪನೆಂದ|
ಶಿವಬಸಪ್ಪ ಕ್ಯಾಂಡಿಡೇಟ್| ಹೆಸರಿಗಷ್ಟೆ ಅಂದ|
ನಿಜಕ್ಕೂ ನಿಂತೋರು| ಅಪ್ಪ ನಾನೆ ಎಂದ || ಕಲ್ಲಾದರೆ||

ದಾಸನಕೊಪ್ಪಲು ಬೋಗಾದಿನಾಗೆ ಬೇರೋಯನ ಪ್ರಚಾರ ಮಾಡ್ಲಿಕ್ಕೆ ಬಿಡಂಗಿಲ್ಲರಿ ಅಂತ ಕೇಳಿದ್ರೆ. ಅದು ಜನತಾ ಜನಾರ್ಧನನ ನಿರ್ಧಾರ. ನಾನೇನು ಮಾಡ್ಲಿ ಅಂತಾನೆ ಕೊಮಾರ! ಸಂವಿಧಾನ ಏನ್ ಹೇಳ್ತದೆ ಗೊತ್ತದೇನ್ರಿ ಅಂದ್ರೆ. ಅದನ್ನ ಬರೋದನೆ ಕೇಳ್ರಿ, ಅಂತೋನೆ. ಇದರಿಂದ ಬೇಸತ್ತ ಅರ್ಧಸತ್ತೇ ಹೋದ ಸಮಾಜವಾದಿ ಪಕ್ಷದ ಕರುಣಾಕರನದು ಉಡಾಫೆ ಸಾಂಗು

ಯಾರೇ ಕೂಗಾಡಲಿ ಊರೇ ಹೋರಾಡಲಿ
ನನ್ನ ನೆಮದಿಗೆ ಭಂಗವಿಲ್ಲ ನಾನಂತೂ ಗೆಲ್ಲೋದಿಲ್ಲ
ಕಾಂಗ್ರೆಸ್ ಜೆಡಿ‌ಎಸ್ ಜೆಡಿಯು ಇಂಡಿಪೆಂಡೆಂಟು
ಯಾರು ನಿಂತರು ಗೆಲ್ಲೋನು ಒಬ್ಬನೆ ಎಂದರಿತು
ಸಾಗುವೆ ಅರೆ ಹೊಯ್ ಅರೆ ಹೊಯ್ ಟುರ್ರಾಽಽಽ

ನಮ್ಮ ಅಂಬರೀಸು ಇದನ್ನೆಲ್ಲಾ ನೋಡಿ ರಾಂಗ್ ಆಗಿ ಸಿನಿಮಾದಾಗೆ ಪಿಸ್ತೂಲು ತಕ್ಕಂಡು ವಿಲನ್‌ಗುಳ್ಗೆ ‘ಢಂ’ ಅನ್ನಿಸ್ದಂಗೆ ಸಿದ್ರಾಮು ಇರುದ್ದ ನಿಂತಿರೋ ಹೈವಾನನೆಲ್ಲಾ ಎತ್ತು ಬಿಡ್ತೀನ್ನಿ ಅನ್ಲಿಕತ್ತಾನೆ. ಈ ಡೈಲಾಗ್ ಕೇಳಿ ಗಾಣ್ ಗಾಬರಿಯಾದ ದಬರಿಧರ್ಮು ಖರ್ಗೆ, ಸಿದ್ದು, ಹಂಗ್ ಮಾಡ್ಬೇಡಲೆ ತಮಾ. ರೀಲ್ ಲೈಫ್ನಾಗೆ ಸತ್ತೋರು ಬದುಕಿ ಬರ್ತಾರೆ. ಆದ್ರೆ ರಿಯಲ್ ಲೈಫ್ನಾಗೆ ಹಂಗಾಗಕಿಲ್ಲ. ಮೈ ಸೆಂಟ್ರಲ್ ಬಾಯ್ ಅಂತ ಸಮಾಧಾನ ಮಾಡ್ಲಿಕತ್ತಾರಂತ್ರಿ. ನೆವರ್. ನಾನು ಬೋಗಾದಿ ದಾಸನಕೊಪ್ಪಲಿಗೆ ಕ್ಯಾನ್‌ವಾಸ್ಗೆ ಹೋಗೋನೆಯಾ. ಅದ್ಯಾರು ಈ ಮಂಡ್ಯ ಗಂಡನ್ನ ತಡಿತಾರೋ ಒಂದು ಕೈ ನೋಡೇಬಿಟ್ಟೇನು ಅಂತ ಗುರುಗುಟ್ಲಿಕತ್ತಾನೆ. ಸೆಂಟ್ರಲ್ ಲೀಡರ್ಸುಗುಳೆಲ್ಲಾ ಗೋಡನ್ನ ಪಕ್ಷದಿಂದ್ಲೇ ಉಚಾಟಿಸ್ತಿವಿ ಅಂತ ಧಂಕಿ ಕೊಟ್ಟರೂ ಗೋಡಂದು ಭಂಡನಗೆ. ಇದರ ಮಧ್ಯನಾಗೆ ಬಿಜೆಪಿ ವಾನರರು ಶೋಭಾಯಾತ್ರೆ ದತ್ತ ಜಯಂತಿ ಮಾಡಿ ಹೋಮ ಮಾಡೇ ಮಾಡ್ತೀವಿ ಅಂತ ಸರ್ಕಾರಾನಾ ಬ್ಲಾಕ್‌ಮೇಲ್ ಮಾಡ್ಲಿಕತ್ತಾರೆ. ನಾವು ಹೋಮ ಮಾಡಿ ಪೂರ್ಣಾಹುತಿ ಕೊಟ್ಟರೇ ಯಲಕ್ಷನ್ ಗೆಲ್ಲೋದು ಅಂತ ಸಿಟಿ ರವಿ ಅಂಬೋ ಬಚ್ಚೆ ಬೊಂಬ್ಡಿ ಹೊಡಿಲಿಕತ್ತಾನೆ. ಸೆಂಟ್ರಲ್‌ನಿಂದ ಅರೆ ಸೇನೆ ಪಡೆ ಬೇರೆ ಬಂದು ಅಟಕ್ಯಾಯಸಿಕೊಂಡದೆ. ಪೋಲಿಸ್ ಆಪೀಸಗಳ ಟ್ರಾನ್ಸ್‌ಫರ್‌ಗಳು ಬ್ಯಾರೆ ನೆಡಿಲಿಕತ್ತಾವೆ! ಸಿದ್ದು ಗೆದ್ನಪ್ಪಾ ಅಂದ್ರೆ ನೆಕ್ಸ್ಟ್ ಕೋಜಾ ಸರ್ಕಾರದ್ದೆ ಟ್ರಾನ್ಸ್‌ಫರ್. ಮಾಡೋರು ಯಾರು ಅಂತಿರಾ? ಇನ್ನು ಯಾರು ನೀವೇ. ಕರ್ನಾಟಕದ ಮತದಾರ ಪ್ರಭುಗಳು…ಅಲ್ಲವರಾ.
*****

(೧೪-೧೨-೨೦೦೬)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...