Home / ಕವನ / ಕವಿತೆ / ತಪ್ಪು – ಸರಿಗಳ ಮಧ್ಯೆ

ತಪ್ಪು – ಸರಿಗಳ ಮಧ್ಯೆ

ಬಿಳಿರಂಗೇ
ನಿನ್ನ ಸುಮ್ಮನೆ ಕಾಡುವ
ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ
ಹುಚ್ಚುಚ್ಚು ಗಾಢ
ಬಣ್ಣಗಳದೇನು ತಪ್ಪು?
ಕನಸುಗಳೂ ಇರಲಿ
ವಾಸ್ತವವ ಒಪ್ಪು!

ತಪ್ಪಿರುವುದೆಲ್ಲಿ?
ಬಣ್ಣಗಳ ಅರ್ಥೈಸಲಾಗದ
ನಿನ್ನ ಹುಂಬತನದಲ್ಲೇ?
ತುಂಟ ಬಣ್ಣಗಳೇ
ಬೇಡೆನುವ ನಿರ್ಲಿಪ್ತತೆಯಲ್ಲೇ?
ಬಣ್ಣಗಳೊಳಗು ಅರ್ಥವಾದರೂ
ಅರ್ಥವಾಗದಂತೆ
ನಟಿಸುವ ನಿನ್ನ ಜಾಣತನದಲ್ಲೇ?

ಬಿಳಿರಂಗೇ
ಮಾತು – ನೋಟ
ಸ್ಪರ್ಶದೊತ್ತಡಗಳ ಗಾಢಬಣ್ಣಗಳ
ಕಾಟಕ್ಕೆ ಸೋತು
ಒಡ್ಡುಗಳನೊದ್ದು ಹರಿದುಬಿಡದೇ
ಒಳಗೇ ಬತ್ತುವ
ನಿನ್ನೆದೆಯ ಜೀವನದಿ

ದನಿ ಎತ್ತಿ ಕರೆಯೆದೆಯೂ
ಮೋಡಿಗೊಳಿಸುವ
ಆಪ್ತಗಾನಕ್ಕೆ ಸೋತು
ಗುಪ್ತಗಾಮಿನಿಯಾಗಿ
ನಿಂತಲ್ಲೇ ಏಕೆ ಧುಮ್ಮಿಕ್ಕುತ್ತದೆ?

ಬಿಳಿರಂಗೇ
ಗಾಢಬಣ್ಣಗಳ ಮೇಲೆ
ಸುಮ್ಮನೇತಕೆ ಮುನಿಸು?
ಏಕೆ ಬಣ್ಣಗಳಿಗೆ
ಬುದ್ಧಿ ಕಲಿಸುವ
ಹುಚ್ಚು ಮನಸು?
ಗೆದ್ದರೂ ಸರಿ ಸೋತರೂ ಸರಿ
ಬಣ್ಣಗಳ ಸುಮ್ಮನೆ ಕ್ಷಮಿಸು
ತಪ್ಪು ನಿನ್ನದೂ ಅಲ್ಲ
ಗಾಢ ಬಣ್ಣಗಳದೂ ಅಲ್ಲ
ತಪ್ಪು – ಸರಿಗಳ ಲೆಕ್ಕ ಇಲ್ಲಾರಿಗೂ ಸಿಕ್ಕಿಲ್ಲ
ತಕ್ಕಡಿ ತೂಗಿಯೇ ಇಲ್ಲ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...