ಜಲಮಯ

ಜಲಮಯ

ಮೊತ್ತಮೊದಲು ವಿಶ್ವ ಜಲಮಯವಾಗಿತ್ತೆಂದು ಪುರಾಣ ಪುಣ್ಯ ಜನಪದ ಕತೆಗಳು ಸಾರುತ್ತಿವೆ.

ಈಗಲೂ ಭೂಮಿ ಇರುವುದು ಮೂರನೆಯ ಒಂದು ಭಾಗ ಮಾತ್ರ. ಉಳಿದಿದ್ದೆಲ್ಲ ನೀರು, ಬೆಟ್ಟಗುಡ್ಡ, ಕಾಡುಮೇಡು, ಮಾತ್ರ.

ಇತ್ತೀಚೆಗೆ ಕೇಂದ್ರೀಯ ಜಲ ಆಯೋಗದ ವರದಿಯ ಪ್ರಕಾರ ಭವ್ಯ ಭಾರತದಲ್ಲಿ ನೀರಿನ ಲಭ್ಯತೆ ೧೮೬೯ ಶತಕೋಟಿ ಕ್ಯೂಬಿಕ್ (ಟಿಸಿ‌ಎಂ) ಮೀಟರ್‌ನಷ್ಟಿದೆ.

ಆದರೆ ಇದರಲ್ಲಿ ಬಳಕೆಗೆ ಯೋಗ್ಯವಾದ ನೀರು ೧೧೨೩ ಟಿಸಿ‌ಎಂ ಮಾತ್ರವೆಂಬ ಆತಂಕಕಾರಿ ವಿಷಯವನ್ನು ಬಯಲು ಮಾಡಿದೆ.

ದಿನೇದಿನೇ ನೀರಿನ ಬೇಡಿಕೆಗೆ ಹೋಲಿಸಿದರೆ ಈ ನೀರು ಎಲ್ಲಿಗೂ ಸಾಕಾಗದೆಂದು ಸಚಿವರು ಸದನದಲ್ಲಿ ಹೇಳಿರುವರು.

ಹೌದು! ಈಗೀಗ ಕೆರೆ, ಬಾವಿ, ಆಣೆಕಟ್ಟು, ಹಳ್ಳಕೊಳ್ಳ ಜಲಾಶಯಗಳೆಲ್ಲ ಬತ್ತಿ ಹೋಗಿ ಬೋರುಗಳು ೧,೦೦೦ ಅಡಿ ಆಳಕ್ಕೊದರೂ ನೀರಿನ ಒರತೆಯಿಲ್ಲ! ಇನ್ನು ಹತ್ತು ವರ್ಷ ಕಳೆದರೆ, ಭವ್ಯ ಭಾರತದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲಿದೆ..!

೨೦೨೫ರ ವೇಳೆಗೆ ದೇಶದ ಎಲ್ಲಾ ಜಲಮೂಲಗಳನ್ನು ಒಟ್ಟು ಗೂಡಿಸಿದರೂ ಭವ್ಯ ಭಾರತದ ನೀರಿನ ದಾಹ ತೀರಿಸಲು ಸಾಧ್ಯವಿಲ್ಲ. ಇತ್ತೀಚಿಗೆ ಸರ್ಕಾರವೇ ಈ ಆಘಾತಕಾರಿ ವಿಷಯವನ್ನು ಖಚಿತ ಪಡಿಸಿದೆ. ಸಂಶೋಧನಾ ವರದಿಯೊಂದನ್ನು ಆಧರಿಸಿ ಜಲಕೇಂದ್ರ ಸಂಪನ್ಮೂಲ ಸಹಾಯಕ ಸಚಿವ ಸನ್ವರ್‌ಲಾಲ್‌ ಲೋಕಸಭೆಗೆ ಈ ಕುರಿತು ವಿವರ ನೀಡಿ ದೇಶವನ್ನು ತಲ್ಲಣಗೊಳಿಸಿರುವರು.

ಆದ್ದರಿಂದ ರಾಜ್ಯ ಸರ್ಕಾರಗಳು ಜಲ ಸಂರಕ್ಷಣೆ, ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿವೆ ಕೇಂದ್ರ ಸರ್ಕಾರ ತಾಂತ್ರಿಕ ಮತ್ತು ಹಣಕಾಸು ನೆರವು ಒದಗಿಸುವ ಮೂಲಕ ಇಂತಹ ಕ್ರಮಗಳಿಗೆ ಮತ್ತಷ್ಟು ಬೆಂಬಲ ನೀಡುವುದೆಂದು ಸಚಿವರು ಈಗಾಗಲೇ ಖಚಿತಪಡಿಸಿರುವರು.

ಆದ್ದರಿಂದ ಪ್ರತಿ ಹಳ್ಳಿ, ತಾಲ್ಲೂಕು, ಜಿಲ್ಲಾ, ರಾಜ್ಯ ಕೇಂದ್ರಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲೇ ಬೇಕು. ಇರುವ ನೀರನ್ನು ಹಾಲಿನಂತೆ ಜೇನ ಹನಿಯಂತೆ… ತುಪ್ಪದಂತೆ ಖರ್ಚು ಮಾಡುವುದನ್ನು ಎಲ್ಲರೂ ಇನ್ನಾದರೂ ರೂಢಿಸಿಕೊಂಡರೆ ಒಳಿತು ಅಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಡಿಯುವ ನೀರು
Next post ಅತಿಯಾಗಿ ಬಿಗಿಯದಿರೋ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys