Home / ಲೇಖನ / ಇತರೆ / ಜಲಮಯ

ಜಲಮಯ

ಮೊತ್ತಮೊದಲು ವಿಶ್ವ ಜಲಮಯವಾಗಿತ್ತೆಂದು ಪುರಾಣ ಪುಣ್ಯ ಜನಪದ ಕತೆಗಳು ಸಾರುತ್ತಿವೆ.

ಈಗಲೂ ಭೂಮಿ ಇರುವುದು ಮೂರನೆಯ ಒಂದು ಭಾಗ ಮಾತ್ರ. ಉಳಿದಿದ್ದೆಲ್ಲ ನೀರು, ಬೆಟ್ಟಗುಡ್ಡ, ಕಾಡುಮೇಡು, ಮಾತ್ರ.

ಇತ್ತೀಚೆಗೆ ಕೇಂದ್ರೀಯ ಜಲ ಆಯೋಗದ ವರದಿಯ ಪ್ರಕಾರ ಭವ್ಯ ಭಾರತದಲ್ಲಿ ನೀರಿನ ಲಭ್ಯತೆ ೧೮೬೯ ಶತಕೋಟಿ ಕ್ಯೂಬಿಕ್ (ಟಿಸಿ‌ಎಂ) ಮೀಟರ್‌ನಷ್ಟಿದೆ.

ಆದರೆ ಇದರಲ್ಲಿ ಬಳಕೆಗೆ ಯೋಗ್ಯವಾದ ನೀರು ೧೧೨೩ ಟಿಸಿ‌ಎಂ ಮಾತ್ರವೆಂಬ ಆತಂಕಕಾರಿ ವಿಷಯವನ್ನು ಬಯಲು ಮಾಡಿದೆ.

ದಿನೇದಿನೇ ನೀರಿನ ಬೇಡಿಕೆಗೆ ಹೋಲಿಸಿದರೆ ಈ ನೀರು ಎಲ್ಲಿಗೂ ಸಾಕಾಗದೆಂದು ಸಚಿವರು ಸದನದಲ್ಲಿ ಹೇಳಿರುವರು.

ಹೌದು! ಈಗೀಗ ಕೆರೆ, ಬಾವಿ, ಆಣೆಕಟ್ಟು, ಹಳ್ಳಕೊಳ್ಳ ಜಲಾಶಯಗಳೆಲ್ಲ ಬತ್ತಿ ಹೋಗಿ ಬೋರುಗಳು ೧,೦೦೦ ಅಡಿ ಆಳಕ್ಕೊದರೂ ನೀರಿನ ಒರತೆಯಿಲ್ಲ! ಇನ್ನು ಹತ್ತು ವರ್ಷ ಕಳೆದರೆ, ಭವ್ಯ ಭಾರತದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲಿದೆ..!

೨೦೨೫ರ ವೇಳೆಗೆ ದೇಶದ ಎಲ್ಲಾ ಜಲಮೂಲಗಳನ್ನು ಒಟ್ಟು ಗೂಡಿಸಿದರೂ ಭವ್ಯ ಭಾರತದ ನೀರಿನ ದಾಹ ತೀರಿಸಲು ಸಾಧ್ಯವಿಲ್ಲ. ಇತ್ತೀಚಿಗೆ ಸರ್ಕಾರವೇ ಈ ಆಘಾತಕಾರಿ ವಿಷಯವನ್ನು ಖಚಿತ ಪಡಿಸಿದೆ. ಸಂಶೋಧನಾ ವರದಿಯೊಂದನ್ನು ಆಧರಿಸಿ ಜಲಕೇಂದ್ರ ಸಂಪನ್ಮೂಲ ಸಹಾಯಕ ಸಚಿವ ಸನ್ವರ್‌ಲಾಲ್‌ ಲೋಕಸಭೆಗೆ ಈ ಕುರಿತು ವಿವರ ನೀಡಿ ದೇಶವನ್ನು ತಲ್ಲಣಗೊಳಿಸಿರುವರು.

ಆದ್ದರಿಂದ ರಾಜ್ಯ ಸರ್ಕಾರಗಳು ಜಲ ಸಂರಕ್ಷಣೆ, ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿವೆ ಕೇಂದ್ರ ಸರ್ಕಾರ ತಾಂತ್ರಿಕ ಮತ್ತು ಹಣಕಾಸು ನೆರವು ಒದಗಿಸುವ ಮೂಲಕ ಇಂತಹ ಕ್ರಮಗಳಿಗೆ ಮತ್ತಷ್ಟು ಬೆಂಬಲ ನೀಡುವುದೆಂದು ಸಚಿವರು ಈಗಾಗಲೇ ಖಚಿತಪಡಿಸಿರುವರು.

ಆದ್ದರಿಂದ ಪ್ರತಿ ಹಳ್ಳಿ, ತಾಲ್ಲೂಕು, ಜಿಲ್ಲಾ, ರಾಜ್ಯ ಕೇಂದ್ರಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲೇ ಬೇಕು. ಇರುವ ನೀರನ್ನು ಹಾಲಿನಂತೆ ಜೇನ ಹನಿಯಂತೆ… ತುಪ್ಪದಂತೆ ಖರ್ಚು ಮಾಡುವುದನ್ನು ಎಲ್ಲರೂ ಇನ್ನಾದರೂ ರೂಢಿಸಿಕೊಂಡರೆ ಒಳಿತು ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...