Home / ಕವನ / ಕವಿತೆ / ಪಕ್ಷಿಸಂದೇಶ

ಪಕ್ಷಿಸಂದೇಶ

ಸೂರ್ಯ ಬರುವುದ ಕಂಡು ಚಿಂತೆಯ ತೊರೆದು ಪಕ್ಷಿಗಣಂಗಳು
ಮರದ ಕೊಂಬೆಯ ಮೇಲೆ ಬರುತಲಿ ಜಗವನೆಬ್ಬಿಸ ಬಯಸುತ
ಮಲಗಿ ನಿದ್ರಿಪ ಜನರ ಕಿವಿಯಲಿ ಮಧುರಗಾನವ ಹಾಡುತ
ಸವಿಯ ದನಿಯಿಂದುಲಿದು ತೊಟ್ಟಿಲ ಮಗುವ ಕಿಲಿಪಿಲಿ ನಗಿಸುತ.

ಒಂದು ದನಿಯೇ ಒಂದು ರಸವೇ ರಾಗಭಾವದ ಮೇಳವೇ
ಯಾರಿಗೋ ಆನಂದವೀಯುತ ಸ್ವಾರ್ಥ ಬುದ್ದಿಯ ಮರೆತಿವೆ.
ಗೂಡತೊರೆಯುತ ಜಗವ ಕರೆಯುತ ಬದುಕಿನಿರವನು ಹೇಳವೇ
ಅದನು ಹೊಗಳುವ ಜನರನರಿಯದು ತಮ್ಮ ಹೆಮ್ಮೆಯ ನೆನೆವುವೇ.

ಕಾಡ ಮರದಲಿ ಮನೆಯ ಮಾಡುತ ಬೆಳೆಸಿ ಮಕ್ಕಳ ಮೋಹದಿ
ನೋಡದೀ ಜಗದಾಗು-ಹೋಗನು ಮನಕೆ ತಾರದೆ ಸೋಕದೆ
ತನ್ನ ವಂಶಕೆ ಬಂದ ಶಾಂತಿಯ ತಾಳ್ದು ಹಿಂಸೆಯ ಬಗೆಯದೆ
ಆಗ ದೊರೆತುದೆ ದೇವನಿತ್ತುದೆ ಮಹತು ಎನ್ನುತ ಕೊಳ್ವುದು.

ನಿಮ್ಮ ಕರೆಯಂ ಕಾಯದೀ ಖಗ ಬಂದು ಅಂಗಳಕೆರಗುತ
ನಿಮ್ಮ ಕರುಣಾಹೃದಯವರಿಯುತ ನಿಂದು ಹೊಸ್ತಿಲಕೆರೆಯುತ
ಬಂದು ಸಂತಸದಿಂದ ಬಾಲವನಲುಗಿಸುತ್ತಲಿ ಹಾಡುತ
ಶುಭವ ನೀಡುತ ಹೋಗಿಬರುವೆನು ಎಂದು ನುಡಿವುದು ಹಾರುತ.

ಕಣ್ಣ ತೆರೆಸುತ ಎದೆಯನರಳಿಸಿ ಅಂತರಂಗವ ಕೆರಳಿಸಿ
ಹಾರಿಹೋಯಿತು ದನಿಯು ಮರುದನಿಗೂಡಲು ಆತ್ಮವು ಚಿಮ್ಮಿತು
ಆವ ಬಣ್ಣವು ಬೆಡಗು ಬಿನ್ನಣ ಚಲುವು ನಿಲ್ಲುವ ಭಂಗಿಯು
ಆರಿಗಿಹುದೀ ಭಾವ ವೈರಾಗ್ಯಗಳು ಸುಮ್ಮನೆ ದೊರೆವುದೆ?

ಒಂದು ದನಿಯಲಿ ಹಲವು ದುಃಖದ ಮಬ್ಬು ಮರೆಸುವ ಶಕ್ತಿಯೆ
ಚಪಲ ನೋಟದಿ ಜಗದ ಬಗೆಗಳನಳಿಸಿ ತೋರುವ ಮಾಟವೆ!
ಒಳಗಿನೊಳಗಿನ ಚೇತನವನೆಳ್ಚರಿಸಿ ಸಲಹದೆ ಒಮ್ಮೆಲೆ
ಪಕ್ತಿಯಿಂಚರದಿಂದ ದೇವರು ತೊಟ್ಟರೇ ಮೌನವ್ರತ.

ಲೋಕದೆಲ್ಲೆಡೆಯಲ್ಲಿ ತನ್ನ ಗಂಭೀರಮೂರ್ತಿಯ ಹರಿಸುತ
ನಲಿವ ಪೆರ್ಮೆಯದೊಂದು ಆರನು ಲೆಕ್ಕಿಸದ ಬಿಸವಂದವು
ಸಾವು ನೋವಿನ ಬಾಧೆಗಳುಕದೆ ತನ್ನಯದಿ ಹರಿದಾಡುತ
ಇಂತು ಜೀವನಮೋಕ್ಷವೆಂಬುದ ಸಾರಿ ಲೋಕದಿ ನಡೆವುದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...