Home / ಕವನ / ಕವಿತೆ / ಪಾಪಿಗಳ ಲೋಕದಲಿ

ಪಾಪಿಗಳ ಲೋಕದಲಿ

ಜಾಹಿರಾತು ಕೊಡುತ್ತಾಳೆ ಅವಳು
ಇಪ್ಪತ್ತೆರಡು ವರ್ಷದ ಕನ್ಯೆ
ಶ್ರೀಮಂತ ಅಮೇರಿಕಾದ ಮಗಳು.
“ನನ್ನ ಹೆಸರು ಬ್ರುನೆಟ್
ನನಗೀಗ ಇಪ್ಪತ್ತೆರಡು ವಯಸ್ಸು
ಅಮೇರಿಕಾದ ಮಗಳು ನಾನು
ನನ್ನ ಕನ್ಯತ್ವ ಪರಿಶುದ್ಧ
ಅದಕ್ಕಿದೆ ವೈದ್ಯರ ಪ್ರಮಾಣಪತ್ರ
ಯಾರಾದರೂ ಕೊಳ್ಳುತ್ತೀರಾ?
ಬನ್ನಿ ಹೆಚ್ಚಿನ ಬಿಡ್ಡುದಾರರೇ
ಅತೀ ಹೆಚ್ಚು ಹಣನೀಡುವವರ
ಜೊತೆ ಮಲಗಲು ಸಿದ್ಧಳಿದ್ದೇನೆ.”
ಇದು ಯಾಕೆ ಎನ್ನುತ್ತೀರಾ?
“ನಾನು ಸ್ನಾತಕೋತ್ತರ ಪದವಿಗೆ
ಓದಲು ಅಪಾರ ಹಣ ಬೇಕಾಗಿದೆ.”
ಮಹಿಳೆಯರ ಮಾನವನ್ನೂ ಬಿಡದೇ
ಎಲ್ಲವನ್ನೂ ಸರಕಾಗಿಸುವ
ಬಂಡವಾಳಿಗರ ಮಾರುಕಟ್ಟೆಯಲ್ಲಿ
ಶಿಕ್ಷಣವೂ ಸರಕು. ಖಾಸಗೀಕರಣದ
ಪರಿಣಾಮ ಕನ್ಯತ್ವವೂ ಸರಕು.
ಶೀಲ ಉಳಿಸಲು ಸಹಗಮನ
ಮಾಡಿಸಿದ ಸನಾತನಿಗಳೇ
ದೇವಿಯೆಂದು ಪೂಜಿಸುವವರೇ
ಬನ್ನಿ ಅವಳ ಮಾನ ಕಾಪಿಡಬಲ್ಲಿರಾ?
ಡಾಲರ್ ದೊರೆಗಳ ನಿಜದ ದರ್ಶನ
ಈಗಲಾದರೂ ಆಗುವುದೇ ನಿಮಗೆ?
ಇಂದು ಅಮೇರಿಕಾ-ನಾಳೆ ಭಾರತ
ಖಾಸಗೀಕರಣದ ಪರಿಣಾಮ
ಎಂತಹ ಕರಾಳ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...