Home / ಕವನ / ಕವಿತೆ / ಪಾಪಿಗಳ ಲೋಕದಲಿ

ಪಾಪಿಗಳ ಲೋಕದಲಿ

ಜಾಹಿರಾತು ಕೊಡುತ್ತಾಳೆ ಅವಳು
ಇಪ್ಪತ್ತೆರಡು ವರ್ಷದ ಕನ್ಯೆ
ಶ್ರೀಮಂತ ಅಮೇರಿಕಾದ ಮಗಳು.
“ನನ್ನ ಹೆಸರು ಬ್ರುನೆಟ್
ನನಗೀಗ ಇಪ್ಪತ್ತೆರಡು ವಯಸ್ಸು
ಅಮೇರಿಕಾದ ಮಗಳು ನಾನು
ನನ್ನ ಕನ್ಯತ್ವ ಪರಿಶುದ್ಧ
ಅದಕ್ಕಿದೆ ವೈದ್ಯರ ಪ್ರಮಾಣಪತ್ರ
ಯಾರಾದರೂ ಕೊಳ್ಳುತ್ತೀರಾ?
ಬನ್ನಿ ಹೆಚ್ಚಿನ ಬಿಡ್ಡುದಾರರೇ
ಅತೀ ಹೆಚ್ಚು ಹಣನೀಡುವವರ
ಜೊತೆ ಮಲಗಲು ಸಿದ್ಧಳಿದ್ದೇನೆ.”
ಇದು ಯಾಕೆ ಎನ್ನುತ್ತೀರಾ?
“ನಾನು ಸ್ನಾತಕೋತ್ತರ ಪದವಿಗೆ
ಓದಲು ಅಪಾರ ಹಣ ಬೇಕಾಗಿದೆ.”
ಮಹಿಳೆಯರ ಮಾನವನ್ನೂ ಬಿಡದೇ
ಎಲ್ಲವನ್ನೂ ಸರಕಾಗಿಸುವ
ಬಂಡವಾಳಿಗರ ಮಾರುಕಟ್ಟೆಯಲ್ಲಿ
ಶಿಕ್ಷಣವೂ ಸರಕು. ಖಾಸಗೀಕರಣದ
ಪರಿಣಾಮ ಕನ್ಯತ್ವವೂ ಸರಕು.
ಶೀಲ ಉಳಿಸಲು ಸಹಗಮನ
ಮಾಡಿಸಿದ ಸನಾತನಿಗಳೇ
ದೇವಿಯೆಂದು ಪೂಜಿಸುವವರೇ
ಬನ್ನಿ ಅವಳ ಮಾನ ಕಾಪಿಡಬಲ್ಲಿರಾ?
ಡಾಲರ್ ದೊರೆಗಳ ನಿಜದ ದರ್ಶನ
ಈಗಲಾದರೂ ಆಗುವುದೇ ನಿಮಗೆ?
ಇಂದು ಅಮೇರಿಕಾ-ನಾಳೆ ಭಾರತ
ಖಾಸಗೀಕರಣದ ಪರಿಣಾಮ
ಎಂತಹ ಕರಾಳ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...