Home / ಕವನ / ಕವಿತೆ / ಪಾಪಿಗಳ ಲೋಕದಲಿ

ಪಾಪಿಗಳ ಲೋಕದಲಿ

ಜಾಹಿರಾತು ಕೊಡುತ್ತಾಳೆ ಅವಳು
ಇಪ್ಪತ್ತೆರಡು ವರ್ಷದ ಕನ್ಯೆ
ಶ್ರೀಮಂತ ಅಮೇರಿಕಾದ ಮಗಳು.
“ನನ್ನ ಹೆಸರು ಬ್ರುನೆಟ್
ನನಗೀಗ ಇಪ್ಪತ್ತೆರಡು ವಯಸ್ಸು
ಅಮೇರಿಕಾದ ಮಗಳು ನಾನು
ನನ್ನ ಕನ್ಯತ್ವ ಪರಿಶುದ್ಧ
ಅದಕ್ಕಿದೆ ವೈದ್ಯರ ಪ್ರಮಾಣಪತ್ರ
ಯಾರಾದರೂ ಕೊಳ್ಳುತ್ತೀರಾ?
ಬನ್ನಿ ಹೆಚ್ಚಿನ ಬಿಡ್ಡುದಾರರೇ
ಅತೀ ಹೆಚ್ಚು ಹಣನೀಡುವವರ
ಜೊತೆ ಮಲಗಲು ಸಿದ್ಧಳಿದ್ದೇನೆ.”
ಇದು ಯಾಕೆ ಎನ್ನುತ್ತೀರಾ?
“ನಾನು ಸ್ನಾತಕೋತ್ತರ ಪದವಿಗೆ
ಓದಲು ಅಪಾರ ಹಣ ಬೇಕಾಗಿದೆ.”
ಮಹಿಳೆಯರ ಮಾನವನ್ನೂ ಬಿಡದೇ
ಎಲ್ಲವನ್ನೂ ಸರಕಾಗಿಸುವ
ಬಂಡವಾಳಿಗರ ಮಾರುಕಟ್ಟೆಯಲ್ಲಿ
ಶಿಕ್ಷಣವೂ ಸರಕು. ಖಾಸಗೀಕರಣದ
ಪರಿಣಾಮ ಕನ್ಯತ್ವವೂ ಸರಕು.
ಶೀಲ ಉಳಿಸಲು ಸಹಗಮನ
ಮಾಡಿಸಿದ ಸನಾತನಿಗಳೇ
ದೇವಿಯೆಂದು ಪೂಜಿಸುವವರೇ
ಬನ್ನಿ ಅವಳ ಮಾನ ಕಾಪಿಡಬಲ್ಲಿರಾ?
ಡಾಲರ್ ದೊರೆಗಳ ನಿಜದ ದರ್ಶನ
ಈಗಲಾದರೂ ಆಗುವುದೇ ನಿಮಗೆ?
ಇಂದು ಅಮೇರಿಕಾ-ನಾಳೆ ಭಾರತ
ಖಾಸಗೀಕರಣದ ಪರಿಣಾಮ
ಎಂತಹ ಕರಾಳ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...