ಎಷ್ಟು ಯತ್ನಿಸಿದರು

ಎಷ್ಟು ಯತ್ನಿಸಿದರು ಏನು ಮಾಡಿದರು
ಮನುಷ್ಯ ಮೂಲದಲ್ಲಿ ದಿಗಂಬರ

ಬೆಳಕಿಗೆ ಬಂದರು ಕತ್ತಲಲುಳಿದರು
ಅವ ಅಂತ್ಯದಲ್ಲಿ ದಿಗಂಬರ

ಮೂಲದಲ್ಲು ದಿಗಂಬರ ಅಂತ್ಯದಲ್ಲು ದಿಗಂಬರ
ಮಧ್ಯದಲ್ಲಂತು ಯಾವತ್ತು ದಿಗಂಬರ

ಮುಚ್ಚಿದರು ದಿಗಂಬರ ಬಿಚ್ಚಿದರು ದಿಗಂಬರ
ಮುಚ್ಚಿದರೆ ಆತ ಮುಚ್ಚಿರುವುದೇ ದಿಗಂಬರ

ಉಟ್ಟರು ದಿಗಂಬರ ಉಡದಿದ್ದರು ದಿಗಂಬರ
ಉಟ್ಟರೆ ಆತ ಉಟ್ಟಿರುವುದೇ ದಿಗಂಬರ

ನಟಿಸಿದರು ದಿಗಂಬರ ನಟಿಸದಿದ್ದರು ದಿಗಂಬರ
ನಟಿಸಿದರೆ ಆತ ನಟಿಸುವುದೆ ದಿಗಂಬರ

ದಿಗಂಬರನಾಗುವ ಇಚ್ಛೆಯೆ ದಿಗಂಬರ
ಆಗದಿದ್ದರಾಗಬಾರದೆಂಬ ಹಟವೆ ದಿಗಂಬರ

ಆದರು ದಿಗಂಬರ ಆಗದಿದ್ದರು ದಿಗಂಬರ
ಮೇಲೆ ಎಂತೊ ಅಂತೆ ಅವನ ಕೆಳಗು ಕೂಡ ದಿಗಂಬರ

ಹಿಂದೆ ಹೇಗೆ ಮುಂದೆ ಹಾಗೆ
ಎಂದೆಂದೂ ದಿಗಂಬರ
ಎಲ್ಲೆಲ್ಲೂ ದಿಗಂಬರ

ಆಗುವಂತೆಯೇ ಆಗದಿರುವುದೂ ದಿಗಂಬರ
ಶ್ವೇತಾಂಬರ ಪೀತಾಂಬರ ಎಲ್ಲ ಅಂಬರ ದಿಗಂಬರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ದೇಹದ ಬಗೆಗೆ ಒಂದಿಷ್ಟು ಮಾಹಿತಿ ಸಂಶೋಧನೆಗಳು
Next post ಪಾಪಿಗಳ ಲೋಕದಲಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…