ಸುಖ-ದುಃಖ

ಸತಿ:-
ತೇಲು ಮೋಡಗಳ
ತೀಡಿ ಮುಡಿಗಟ್ಟಿ
ಮಲ್ಲಿಗೆ ಮುಡಿದು
ಮುಗುಳುನಗೆ ಚೆಲ್ವ
ಮುಗಿಲುಚೆನ್ನೆಯ
ನೋಡಿ ನಗದಿರ್ಪ
ಕವಿಯು ಕವಿಯೇನೆಂಬೆ!

ಚೆನ್ನ ಚಿನ್ಮಯನೆ,
ಚೆಲುನಗೆಯನೊಮ್ಮೆ
ಬೀರು, ಸುಪ್ರಭಾತದ
ಸುಮನ ಸಂಚಯದಂತೆ!
ಕಿರುನೃತ್ಯಗೈಯೊಮ್ಮೆ
ಮಧುವನೀಂಟಿ ಮೈ-
ಮರೆತ ಮರಿದುಂಬಿಯಂತೆ!

ಪತಿ:-
ಕಡಲಿನೊಡಲಿನೊಳು
ನೆಲೆಯ ನಡುವನೆಯಲ್ಲಿ
ಸಿಂಪೆ ಸೆರೆಮನೆಯಲ್ಲಿ
ಸಿಲುಕಿ ಮೌಕ್ತಿಕವು
ಮೊರೆಯಿಡುತಲಿರೆ
ಮನ ಕರಗದಿಹ
ಕವಿಗಾರ್ತಿ ಕಲ್ಬೆಂಬೆ!
ರನ್ನ ಹೃನ್ಮಯಳೆ,
ನೀ ನಗುತಲಿರಬೇಕು
ನಾನಳುತಲಿರಬೇಕು
ಸುಖದುಃಖ ಸಮವಂತೆ!
ಇದನೆ ಜಗಜನಕೆ
ತೋರಿ ಸಾರಲಿಬೇಕು
ಕಡಲು-ಬಾನುಗಳಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ನಲ್ಲ
Next post ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys