Home / ಲೇಖನ / ಇತರೆ / ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ
ಅರಿದರಿದು
ಬಿಲುಗಾರನಹೆಯೋ
ಎಸೆದಿಬ್ಬರು ಒಂದನೀ ಹರು ಗಡ
ಇದು ಹೊಸತು
ಚೋದ್ಯವೀ ಸರಳ ಪರಿ ನೋಡಾ
ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು
ನಾವಿಬ್ಬರೊಂದಾಗೆ ಬಿಲ್ಲಾಳಹೆ
ಎಸೆಯಲೋ ಕಾಮ

[ಚೋದ್ಯ-ಆಶ್ಚರ್ಯ, ಹರು – ತೆಗೆದುಕೊ, ಸೆರೆಹಿಡಿ, ಸರಳ ಪರಿ-ಬಾಣದ ಪರಿ]

ಉರಿಲಿಂಗದೇವನ ವಚನ. ಮನ್ಮಥ ಬಲು ದೊಡ್ಡ ಬಿಲ್ಲಾಳು. ನನಗೂ ನನ್ನ ನಲ್ಲನಾದ ದೇವರಿಗೂ ಇಬ್ಬರಿಗೂ ಒಂದೇ ಬಾಣದಲ್ಲಿ ಹೊಡೆಯುವುದಕ್ಕೆ ಸಾಧ್ಯವಾದರೆ ಮಾತ್ರ ನೀನು ನಿಜವಾದ ಬಿಲ್ಲಾಳು. ನಮ್ಮಿಬ್ಬರಿಗೂ ನಾಟುವಂತೆ ಒಂದೇ ಬಾಣವನ್ನು ತೊಟ್ಟು ಎಸೆದರೆ ಆಗ ನಾನೂ ಅವನೂ ಒಂದೇ ಆಗಿಬಿಡುತ್ತೇವೆ. ಆಗ ಮಾತ್ರ ನೀನು ಬಿಲ್ಲಾಳು ಆಗುವೆ ಎಂದು ಉರಿಲಿಂಗದೇವ ಕಾಮನಿಗೆ ಸವಾಲೆಸೆದಿದ್ದಾನೆ.

ಉತ್ಕಟವಾದ ದೈವಭಕ್ತಿಯು ಕಾಮದಷ್ಟೇ ತೀವ್ರವಾದ ಭಾವ, ಇರಬಹುದು. ಆದರೆ ಅದು ಭಕ್ತ / ಭಕ್ತೆಗೆ ಮಾತ್ರ, ಕಣ್ಣಿಗೆ ಕಾಣದ ನಲ್ಲ ದೇವರಿಗೂ ಆ ಭಾವ ಬರಬೇಡವೇ! ಅಂತೆಯೇ ತಪಸ್ಸಿನಲ್ಲಿ ತೊಡಗಿದ್ದ ಶಿವನ ಮೇಲೆ ಬಾಣ ಎಸೆದ ಕಾಮ ನನ್ನನ್ನೂ ನನ್ನ ದೈವವನ್ನೂ ಒಂದಾಗಿಸುವಂತೆ ಬಾಣತೊಡಲಿ ಎಂಬ ಕೋರಿಕೆ. ಹಾಗೆ ಒಂದುವೇಳೆ ಬಾಣ ತೊಟ್ಟರೆ ಕೊನೆಗೆ ಕಾಮನೇ ಸುಟ್ಟುಹೋಗ ಬೇಕಲ್ಲವೇ! ಕಾಮದ ಮೂಲಕವೇ ಕಾಮದ ನಿರಾಕರಣೆಯನ್ನೂ ಮಾಡುವ ಪರಿ ಹೊಸತಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...