Home / ಲೇಖನ / ಇತರೆ / ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ

ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ
ಅರಿದರಿದು
ಬಿಲುಗಾರನಹೆಯೋ
ಎಸೆದಿಬ್ಬರು ಒಂದನೀ ಹರು ಗಡ
ಇದು ಹೊಸತು
ಚೋದ್ಯವೀ ಸರಳ ಪರಿ ನೋಡಾ
ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು
ನಾವಿಬ್ಬರೊಂದಾಗೆ ಬಿಲ್ಲಾಳಹೆ
ಎಸೆಯಲೋ ಕಾಮ

[ಚೋದ್ಯ-ಆಶ್ಚರ್ಯ, ಹರು – ತೆಗೆದುಕೊ, ಸೆರೆಹಿಡಿ, ಸರಳ ಪರಿ-ಬಾಣದ ಪರಿ]

ಉರಿಲಿಂಗದೇವನ ವಚನ. ಮನ್ಮಥ ಬಲು ದೊಡ್ಡ ಬಿಲ್ಲಾಳು. ನನಗೂ ನನ್ನ ನಲ್ಲನಾದ ದೇವರಿಗೂ ಇಬ್ಬರಿಗೂ ಒಂದೇ ಬಾಣದಲ್ಲಿ ಹೊಡೆಯುವುದಕ್ಕೆ ಸಾಧ್ಯವಾದರೆ ಮಾತ್ರ ನೀನು ನಿಜವಾದ ಬಿಲ್ಲಾಳು. ನಮ್ಮಿಬ್ಬರಿಗೂ ನಾಟುವಂತೆ ಒಂದೇ ಬಾಣವನ್ನು ತೊಟ್ಟು ಎಸೆದರೆ ಆಗ ನಾನೂ ಅವನೂ ಒಂದೇ ಆಗಿಬಿಡುತ್ತೇವೆ. ಆಗ ಮಾತ್ರ ನೀನು ಬಿಲ್ಲಾಳು ಆಗುವೆ ಎಂದು ಉರಿಲಿಂಗದೇವ ಕಾಮನಿಗೆ ಸವಾಲೆಸೆದಿದ್ದಾನೆ.

ಉತ್ಕಟವಾದ ದೈವಭಕ್ತಿಯು ಕಾಮದಷ್ಟೇ ತೀವ್ರವಾದ ಭಾವ, ಇರಬಹುದು. ಆದರೆ ಅದು ಭಕ್ತ / ಭಕ್ತೆಗೆ ಮಾತ್ರ, ಕಣ್ಣಿಗೆ ಕಾಣದ ನಲ್ಲ ದೇವರಿಗೂ ಆ ಭಾವ ಬರಬೇಡವೇ! ಅಂತೆಯೇ ತಪಸ್ಸಿನಲ್ಲಿ ತೊಡಗಿದ್ದ ಶಿವನ ಮೇಲೆ ಬಾಣ ಎಸೆದ ಕಾಮ ನನ್ನನ್ನೂ ನನ್ನ ದೈವವನ್ನೂ ಒಂದಾಗಿಸುವಂತೆ ಬಾಣತೊಡಲಿ ಎಂಬ ಕೋರಿಕೆ. ಹಾಗೆ ಒಂದುವೇಳೆ ಬಾಣ ತೊಟ್ಟರೆ ಕೊನೆಗೆ ಕಾಮನೇ ಸುಟ್ಟುಹೋಗ ಬೇಕಲ್ಲವೇ! ಕಾಮದ ಮೂಲಕವೇ ಕಾಮದ ನಿರಾಕರಣೆಯನ್ನೂ ಮಾಡುವ ಪರಿ ಹೊಸತಾಗಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...