ಬೋಳು ಮರ

ಅಚ್ಚರಿಯ ನೋಟವದೇಕೆ
ನಿಟ್ಟುಸಿರ ಬಿಡುವಿರೇಕೆ
ಅರೆಗಳಿಗೆ ದಿಟ್ಟಿಸಿ ನೋಡಿರಿ
ಕಲಾವಿದನ ಕರಚಳಕದೆ
ಅವಿರ್ಭವಿಸಿದ ಕಲ್ಪನೆಯ ಚಿತ್ರವೇ
ದೇವನ ಸೃಷ್ಠಿಯ ವೈಚಿತ್ರವೇ
ಅಲ್ಲ ನಿಮ್ಮೆದುರು ನಿಂತಿರುವ
ನಾನೊಂದು ಬೋಳು ಮರ
ಗತ ಕಾಲದೆ ನಾನಾಗಿದ್ದೆ
ಫಲಭರಿತ ಸಂಪತ್ತಿನ ಆಗರ
ನನ್ನಡಿಯಲ್ಲಿ ನನ್ನೊಡಲಲ್ಲಿ
ಆಸರೆ ಪಡೆದ ಜೀವಿಗಳೆದೆಷ್ಟೋ
ಮುಗ್ಧ ಕಂದಮ್ಮಗಳು ನಕ್ಕು ನಲಿದು
ಕುಪ್ಪಳಿಸಿದ ದಿನಗಳೆಷ್ಟು,
ಅಶಾಂತಿಯಲಿ ಬೆಂದು ನೊಂದ
ಹೃದಯಗಳಿಗೆ ನೀಡಿದೆ ಸಾಂತ್ವನ
ನನ್ನುಸಿರ ಧಾರೆಯೆರೆದು
ನೀಡಿದೆ ಕ್ಷಣಕಾಲ ಚೇತನ
ಇಂದು ಸುಡು ಬಿಸಿಲು ಬಿರುಮಳೆಯಲಿ
ಕಾಲನಾಟದ ಆಟಿಕೆಯಾಗಿ
ಸ್ವಾರ್ಥ ಮಾನವನ ಕ್ರೌರ್ಯಕ್ಕೆ
ಸಾಕ್ಷಿಯಾಗಿ ಮೂಕವಾಗಿ
ಶೋಧಿಸುತಿಹೆನು ಏಕಾಂಗಿಯಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಇಬ್ಬರಿಗೂ ಒಂದೇ ಬಾಣ
Next post ಶಿಕ್ಷೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

cheap jordans|wholesale air max|wholesale jordans|wholesale jewelry|wholesale jerseys