ನನ್ನ ನಲ್ಲ

ಈಗ ಎಲ್ಲಿರುವೆ? ಹೇಳು, ನಯ ನಾಜೂಕಿನ
ಬೆಡಗಿನ ಬೆರಗ ಕಣ್ಣುಗಳ ತೆರೆಯಿಸಿದವನೇ?

ನಡೆಯುವ ದಾರಿಯ ತುಂಬ ಗಾಲಿಗಳ ಉರಳುಸುತ
ನನ್ನಲಿ ಒಂದಾಗಿ ಬಾಳ ಬೆಳಕಾದವನೇ?

ನೆಮ್ಮದಿಯ ಅರಿವೆಯಲಿ ಗುರಿ ಇಟ್ಟು ಒಂದೇ
ಮನಸ್ಸಿನ ನೇಯ್ಗೆಯ ಎಳೆ ಪೋಣಿಸಿದವನೇ?

ಆಲದ ಭವನ ಅಂಬುದಿಗೆ ಹುಟ್ಟು ಹಾಕಲು
ಹೇಳಿಕೊಟ್ಟು ತಿಳಿಶಾಂತ ಒಲವಿನ ಸೂತ್ರ ಹೇಳಿದವನೇ?

ಹೊಂಬೆಳಕು ಹರಡಿ ಎಲ್ಲ ನಕ್ಷತ್ರಗಳ ನನ್ನ
ಉಡಿಯಲ್ಲಿ ಕಟ್ಟಿ, ಸೋಲನ್ನೊಪ್ಪದೇ ಗೆಲುವಿನ ಪಟ
ಹಿಡಿಸಿದವನೇ?

ನಿನ್ನ ಅರೆಗಳಿಗೆ ಬಿಟ್ಟಿರಲಾರೆ! ನಿನ್ನ ಪ್ರೇಮಕೆ
ಬೆಲೆ ಕಟ್ಟಲಾರೆ! ನಿನೊಬ್ಬನೇ ಸಾಕು ನನ್ನ ಬಾಳಿಗೆ
ಕರುಣಾಕರನೇ!

ನಿನ್ನ ಅರೆಗಳಿಗೆ ಬಿಟ್ಟಿರಲಾರೆ, ನಿನ್ನ ಪ್ರೇಮಕೆ
ಬೆಲೆ ಕಟ್ಟಲಾರೆ, ನಿನೊಬ್ಬನೇ ಸಾಕು ನನ್ನ ಬಾಳಿಗೆ
ಕರುಣಾಕರನೇ

ಕರಳು ಬಳ್ಳಿಯ ತೆನೆಗಳ ಹೊರಸಿ, ಒಲವ
ಹಸಿರು ಮೈದಳೆದು ನನ್ನ ತೋಟಕೆ ಕಾವಲುಗಾರನೇ,

ಈಗ ಎಲ್ಲರಿವೆ ಹೇಳು, ನಾನೀಗ ನಿನ್ನ
ಪಾದಗಳ ಸಂಭ್ರಮದಲ್ಲಿ ತೊಳೆಯಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಚೇತನ
Next post ಸುಖ-ದುಃಖ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys