ಮದುವೆಯಿಂದ
ತುಂಬಬೇಕಿತ್ತು ಬದುಕು
ಆದರೆ ಆಯಿತು ಬರಿದು.
ಪ್ರೀತಿ ಬಯಸಿದಾಗ ಸಿಕ್ಕಿದ್ದು ಒದೆತ
ಮಾತು ಬಯಸಿದಾಗ ಸಿಕ್ಕಿದ್ದು ಜರೆತ
ನಂಬುಗೆಯೇ ಅಡಿಪಾಯವಾಗಬೇಕಿದ್ದಲ್ಲಿ
ಸಂಶಯದ ಕೂಪ ನಿರ್ಮಾಣವಾಯ್ತು.
ಕೈಗೆ ಮೂರು ಕೂಸುಗಳು ಬಂದು ಬಿದ್ದಾಗ
ಕೊರಳಿಗೆ ಕಷ್ಟಗಳ ಸರಮಾಲೆಯೇ ಬಿತ್ತು.
ವರುಷಕ್ಕೊಂದರಂತೆ ಸಾಲಾಗಿ
ಮೂರು ಮಕ್ಕಳು ಮಡಿಲು ತುಂಬಿದರು.
ಬಂಧನಗಳ ಕಳಚಿ ಹೋಗಲೆಲ್ಲಿಗೆ?
ಹೆತ್ತವರು ಮದುವೆ ಮಾಡಿ
ಕೈ ತೊಳೆದುಕೊಂಡರು.
ಕೊಂಡಿ ಕಳಚಿಕೊಂಡು ಅಮರರಾದರು.
ಒಡಹುಟ್ಟಿದವರು ಅವರವರ
ಜೀವನದಲಿ ಮುಳುಗಿ ಹೋದರು.
ಗಂಡ ಅಪರಿಚಿತನಾಗುತ್ತಾ ಸಾಗಿದ
ನಾನುಳಿದೆ ಒಂಟಿಯಾಗಿ-
ಜೀವನವೊಂದು ನುಂಗಲಾಗದ ತುತ್ತಾಗಿ.
ನಾನೂ ಕೊಂಡಿ ಕಳಚಿಕೊಂಡರೆ
ಬದುಕ ಬಲ್ಲವೇ ನನ್ನ ಕೂಸುಗಳು
ಈ ಬರಡಾದ ಭೂಮಿಯಲ್ಲಿ?
ಅದಕ್ಕಾಗಿ ಹಿಡಿದಿರುವೆ ನನ್ನ ಉಸಿರು
ಹೃದಯ ತುಂಬಾ ತುಂಬಿಕೊಂಡು ಹಸಿರು!
*****
Related Post
ಸಣ್ಣ ಕತೆ
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ಪತ್ರ ಪ್ರೇಮ
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…
-
ಜುಡಾಸ್
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…