ಅನಿವಾರ್ಯತೆ

ಮದುವೆಯಿಂದ
ತುಂಬಬೇಕಿತ್ತು ಬದುಕು
ಆದರೆ ಆಯಿತು ಬರಿದು.
ಪ್ರೀತಿ ಬಯಸಿದಾಗ ಸಿಕ್ಕಿದ್ದು ಒದೆತ
ಮಾತು ಬಯಸಿದಾಗ ಸಿಕ್ಕಿದ್ದು ಜರೆತ
ನಂಬುಗೆಯೇ ಅಡಿಪಾಯವಾಗಬೇಕಿದ್ದಲ್ಲಿ
ಸಂಶಯದ ಕೂಪ ನಿರ್ಮಾಣವಾಯ್ತು.
ಕೈಗೆ ಮೂರು ಕೂಸುಗಳು ಬಂದು ಬಿದ್ದಾಗ
ಕೊರಳಿಗೆ ಕಷ್ಟಗಳ ಸರಮಾಲೆಯೇ ಬಿತ್ತು.
ವರುಷಕ್ಕೊಂದರಂತೆ ಸಾಲಾಗಿ
ಮೂರು ಮಕ್ಕಳು ಮಡಿಲು ತುಂಬಿದರು.
ಬಂಧನಗಳ ಕಳಚಿ ಹೋಗಲೆಲ್ಲಿಗೆ?
ಹೆತ್ತವರು ಮದುವೆ ಮಾಡಿ
ಕೈ ತೊಳೆದುಕೊಂಡರು.
ಕೊಂಡಿ ಕಳಚಿಕೊಂಡು ಅಮರರಾದರು.
ಒಡಹುಟ್ಟಿದವರು ಅವರವರ
ಜೀವನದಲಿ ಮುಳುಗಿ ಹೋದರು.
ಗಂಡ ಅಪರಿಚಿತನಾಗುತ್ತಾ ಸಾಗಿದ
ನಾನುಳಿದೆ ಒಂಟಿಯಾಗಿ-
ಜೀವನವೊಂದು ನುಂಗಲಾಗದ ತುತ್ತಾಗಿ.
ನಾನೂ ಕೊಂಡಿ ಕಳಚಿಕೊಂಡರೆ
ಬದುಕ ಬಲ್ಲವೇ ನನ್ನ ಕೂಸುಗಳು
ಈ ಬರಡಾದ ಭೂಮಿಯಲ್ಲಿ?
ಅದಕ್ಕಾಗಿ ಹಿಡಿದಿರುವೆ ನನ್ನ ಉಸಿರು
ಹೃದಯ ತುಂಬಾ ತುಂಬಿಕೊಂಡು ಹಸಿರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ
Next post ಪಾಲು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys