ಸ್ಥಿತಪ್ರಜ್ಞ

ತ್ಯಾಗಮೂರ್ತಿ ಮೇರುವ್ಯಕ್ತಿ
ಶ್ರೀ ಬಾಹುಬಲಿಗೆ ವಂದನೆ.

ಜಗದ ಸುಖವ ತ್ಯಜಿಸಿ,
ವ್ಯಾಮೋಹವೆಲ್ಲ ಅಳಿಸಿ
ಮುಗಿಲೆತ್ತರಕೆ ಏರಿನಿಂತ
ಸ್ಥಿತಪ್ರಜ್ಞಗೆ ವಂದನೆ!

ದಯಾಮಯಿ ಮಹಾತಪಸ್ವಿ
ಸಾಕ್ಷಾತ್ಕರಿಸಿಕೊಂಡ ಜೀವನ ದರ್ಶನ
ನಿತ್ಯ ಸತ್‌ಚಿಂತನ;
`ಅಹಿಂಸಾ ಪರಮೋ ಧರ್ಮ; ತ್ಯಾಗವೇ ಜೀವನ’
ಶ್ರೀ ಬಾಹುಬಲಿಯ ಬೋಧನ
ಪರಮ ಸುಖದ ಮಹಾಸಾಧನ!

ನೀನು ಇಲ್ಲ, ನಾನು ಇಲ್ಲ
ಆಸೆಯಿಲ್ಲ, ನಿರಾಸೆಯಿಲ್ಲ,
ವಾಂಛೆ ಇಲ್ಲ, ಮೋಹವಿಲ್ಲ
ಹಿಂಸೆ ಇಲ್ಲ, ದ್ವೇಷವಿಲ್ಲ, ಅಸೂಯೆಯಿಲ್ಲ;
ಎಲ್ಲ ಇದ್ದೂ ಏನೂ ಇಲ್ಲ.
ಇದುವೆ ಶ್ರೀ ಬಾಹುಬಲಿಯ ಮಹಾ ಚಿಂತನ.
ಆಗಲಿ ಅಳಿಯುತ್ತಿರುವ ಸದ್ಭಾವಗಳ
ಪುನರುಜೀವನ!

ಶಕ್ತಿಯಲಿ ಮಹಾಶಕ್ತಿಯಾಗಿ
ಬೋಧನೆಯಲ್ಲಿ ಪರಮ ಜ್ಞಾನಿಯಾಗಿ
ಅಹಿಂಸೆಯಲಿ ಅದ್ವಿತೀಯನಾಗಿ
ಅನಂತದಲಿ ಲೀನನಾಗಿ
ದಿಗಂತದಲಿ ಗೋಚರನಾಗಿ
ಮನುಜ ಕುಲಕೆ ಮಾದರಿಯಾಗಿ
ಬೆಳೆದು ನಿಂತ ಶ್ರೀ ಬಾಹುಬಲಿಗೆ
ಶಿರಸಾ ವಂದನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ
Next post ಬೆಳಗು

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…