ಸ್ಥಿತಪ್ರಜ್ಞ

ತ್ಯಾಗಮೂರ್ತಿ ಮೇರುವ್ಯಕ್ತಿ
ಶ್ರೀ ಬಾಹುಬಲಿಗೆ ವಂದನೆ.

ಜಗದ ಸುಖವ ತ್ಯಜಿಸಿ,
ವ್ಯಾಮೋಹವೆಲ್ಲ ಅಳಿಸಿ
ಮುಗಿಲೆತ್ತರಕೆ ಏರಿನಿಂತ
ಸ್ಥಿತಪ್ರಜ್ಞಗೆ ವಂದನೆ!

ದಯಾಮಯಿ ಮಹಾತಪಸ್ವಿ
ಸಾಕ್ಷಾತ್ಕರಿಸಿಕೊಂಡ ಜೀವನ ದರ್ಶನ
ನಿತ್ಯ ಸತ್‌ಚಿಂತನ;
`ಅಹಿಂಸಾ ಪರಮೋ ಧರ್ಮ; ತ್ಯಾಗವೇ ಜೀವನ’
ಶ್ರೀ ಬಾಹುಬಲಿಯ ಬೋಧನ
ಪರಮ ಸುಖದ ಮಹಾಸಾಧನ!

ನೀನು ಇಲ್ಲ, ನಾನು ಇಲ್ಲ
ಆಸೆಯಿಲ್ಲ, ನಿರಾಸೆಯಿಲ್ಲ,
ವಾಂಛೆ ಇಲ್ಲ, ಮೋಹವಿಲ್ಲ
ಹಿಂಸೆ ಇಲ್ಲ, ದ್ವೇಷವಿಲ್ಲ, ಅಸೂಯೆಯಿಲ್ಲ;
ಎಲ್ಲ ಇದ್ದೂ ಏನೂ ಇಲ್ಲ.
ಇದುವೆ ಶ್ರೀ ಬಾಹುಬಲಿಯ ಮಹಾ ಚಿಂತನ.
ಆಗಲಿ ಅಳಿಯುತ್ತಿರುವ ಸದ್ಭಾವಗಳ
ಪುನರುಜೀವನ!

ಶಕ್ತಿಯಲಿ ಮಹಾಶಕ್ತಿಯಾಗಿ
ಬೋಧನೆಯಲ್ಲಿ ಪರಮ ಜ್ಞಾನಿಯಾಗಿ
ಅಹಿಂಸೆಯಲಿ ಅದ್ವಿತೀಯನಾಗಿ
ಅನಂತದಲಿ ಲೀನನಾಗಿ
ದಿಗಂತದಲಿ ಗೋಚರನಾಗಿ
ಮನುಜ ಕುಲಕೆ ಮಾದರಿಯಾಗಿ
ಬೆಳೆದು ನಿಂತ ಶ್ರೀ ಬಾಹುಬಲಿಗೆ
ಶಿರಸಾ ವಂದನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ
Next post ಬೆಳಗು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys