ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ

ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ
ಪಾಪಭೂಮಿಯ ನಡುವೆ ನಿಂತ ಬಡ ಆತ್ಮವೇ,
ಬಳಿದು ಹೊರಗೋಡೆಗೆ ಅಂಥ ಚಂದದ ಬಣ್ಣ
ಒಳಗೊಳಗೆ ಕೊರತೆ ಅನುಭವಿಸಿ ನವೆಯುವೆ ಏಕೆ ?
ಈ ಮಹಲೊ ನಾಲ್ಕು ದಿನದಲ್ಲೆ ಕುಸಿಯುವ ಮಾಟ,
ಇಂಥ ಬಲು ತುಟ್ಟಿ ಸಿಂಗಾರ ಯಾತಕೆ ಇದಕೆ ?
ಹೆಚ್ಚಾದುದೆಲ್ಲ ವಾರಸುದಾರ ಕ್ರಿಮಿಕೀಟ
ಭಕ್ಷಿಸಲೆ ? ಹೀಗೆಯೇ ಕೊನೆ ನಿನ್ನ ದೇಹಕ್ಕೆ ?
ಆಳು ದೇಹವ ಕರಗಿಸುತ್ತ ಬಾಳುವೆ ನಡೆಸು,
ನಿನ್ನ ಭಂಡಾರ ವರ್‍ಧಿಸಲು ಅದು ಕ್ಷೀಣಿಸಲಿ.
ಕಿಲುಬು ಗಳಿಗೆಗಳ ವಿಕ್ರಯಿಸಿ ದಿವ್ಯವ ಗಳಿಸು,
ಒಳಗೆ ಬೆಳೆ, ಸಾಕು ಬಾಹ್ಯಾಡಂಬರವು ನಿಲಲಿ.
ಜೀವಗಳ ಕಬಳಿಸುವ ಸಾವನ್ನೆ ನೀ ಉಣ್ಣು.
ಸಾವೆ ಸತ್ತರೆ ಒಮ್ಮೆ, ಸಾವೆಲ್ಲಿಯದು ಇನ್ನು?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 146
Poor soul, the centre of my sinful earth

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಣ್ಣನ ಕನಸಿನ ದಿನಗಳು – ೨೮
Next post ಸ್ಥಿತಪ್ರಜ್ಞ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…