ಜಗದ ಕಾವಲುಗಾರ
ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಇಲ್ಲಿಗೆ ಯಾರೂ ಬರಬಹುದು
ಇಲ್ಲಿಂದ ಯಾರೂ ಹೋಗಬಹುದು
ಇಲ್ಲಿ ಏನೂ ನಡೆಯಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಕನ್ನ ಹಾಕಬಹುದು,
ಎಲ್ಲ ದೋಚಬಹುದು
ಕೊಚ್ಚಿ ಹಾಕಬಹುದು
ದಂಗೆ ಎಬ್ಬಿಸ ಬಹುದು
ಅತ್ಯಾಚಾರ ಮಾಡಬಹುದು
ಬಲಾತ್ಕಾರ ಮಾಡಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಅವನಿಗೆ
ಕಿವಿ ಕೇಳಿಸುವುದಿಲ್ಲ.
ಕಣ್ಣು ಕಾಣಿಸುವುದಿಲ್ಲ
ಹೃದಯ ಮಿಡಿಯುವುದಿಲ್ಲ
ಇಲ್ಲೇನಾದರೂ ಯೋಚನೆಯಿಲ್ಲ
ನಿಶ್ಚಿಂತನಾಗಿ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಜಗವ ಕಾಯುವವರಿಲ್ಲ
ಮಲಗಿರುವ ಕಾವಲುಗಾರನ
ಎಬ್ಬಿಸುವವರಿಲ್ಲ.
ಕಾವಲುಗಾರ ಎಚ್ಚರಿದ್ದರೆ ತಾನೆ
ಜೀವನದಲ್ಲಿ ಭದ್ರತೆ.
ಸುಖ, ಶಾಂತಿ, ನೆಮ್ಮದಿ?
ಕಾವಲುಗಾರ ನಿದ್ರಿಸಿದ್ದಾನೆ
ನಿಶ್ಚಿಂತೆಯಿಂದ
ಕುಂಭಕರ್ಣನಂತೆ!
*****
Related Post
ಸಣ್ಣ ಕತೆ
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…