ಜಗದ ಕಾವಲುಗಾರ
ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಇಲ್ಲಿಗೆ ಯಾರೂ ಬರಬಹುದು
ಇಲ್ಲಿಂದ ಯಾರೂ ಹೋಗಬಹುದು
ಇಲ್ಲಿ ಏನೂ ನಡೆಯಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಕನ್ನ ಹಾಕಬಹುದು,
ಎಲ್ಲ ದೋಚಬಹುದು
ಕೊಚ್ಚಿ ಹಾಕಬಹುದು
ದಂಗೆ ಎಬ್ಬಿಸ ಬಹುದು
ಅತ್ಯಾಚಾರ ಮಾಡಬಹುದು
ಬಲಾತ್ಕಾರ ಮಾಡಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಅವನಿಗೆ
ಕಿವಿ ಕೇಳಿಸುವುದಿಲ್ಲ.
ಕಣ್ಣು ಕಾಣಿಸುವುದಿಲ್ಲ
ಹೃದಯ ಮಿಡಿಯುವುದಿಲ್ಲ
ಇಲ್ಲೇನಾದರೂ ಯೋಚನೆಯಿಲ್ಲ
ನಿಶ್ಚಿಂತನಾಗಿ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಜಗವ ಕಾಯುವವರಿಲ್ಲ
ಮಲಗಿರುವ ಕಾವಲುಗಾರನ
ಎಬ್ಬಿಸುವವರಿಲ್ಲ.
ಕಾವಲುಗಾರ ಎಚ್ಚರಿದ್ದರೆ ತಾನೆ
ಜೀವನದಲ್ಲಿ ಭದ್ರತೆ.
ಸುಖ, ಶಾಂತಿ, ನೆಮ್ಮದಿ?
ಕಾವಲುಗಾರ ನಿದ್ರಿಸಿದ್ದಾನೆ
ನಿಶ್ಚಿಂತೆಯಿಂದ
ಕುಂಭಕರ್ಣನಂತೆ!
*****
Related Post
ಸಣ್ಣ ಕತೆ
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಅಪರೂಪದ ಬಾಂಧವ್ಯ
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…