ಕಾವಲುಗಾರ

ಜಗದ ಕಾವಲುಗಾರ
ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಇಲ್ಲಿಗೆ ಯಾರೂ ಬರಬಹುದು
ಇಲ್ಲಿಂದ ಯಾರೂ ಹೋಗಬಹುದು
ಇಲ್ಲಿ ಏನೂ ನಡೆಯಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಕನ್ನ ಹಾಕಬಹುದು,
ಎಲ್ಲ ದೋಚಬಹುದು
ಕೊಚ್ಚಿ ಹಾಕಬಹುದು
ದಂಗೆ ಎಬ್ಬಿಸ ಬಹುದು
ಅತ್ಯಾಚಾರ ಮಾಡಬಹುದು
ಬಲಾತ್ಕಾರ ಮಾಡಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಅವನಿಗೆ
ಕಿವಿ ಕೇಳಿಸುವುದಿಲ್ಲ.
ಕಣ್ಣು ಕಾಣಿಸುವುದಿಲ್ಲ
ಹೃದಯ ಮಿಡಿಯುವುದಿಲ್ಲ
ಇಲ್ಲೇನಾದರೂ ಯೋಚನೆಯಿಲ್ಲ
ನಿಶ್ಚಿಂತನಾಗಿ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಜಗವ ಕಾಯುವವರಿಲ್ಲ
ಮಲಗಿರುವ ಕಾವಲುಗಾರನ
ಎಬ್ಬಿಸುವವರಿಲ್ಲ.
ಕಾವಲುಗಾರ ಎಚ್ಚರಿದ್ದರೆ ತಾನೆ
ಜೀವನದಲ್ಲಿ ಭದ್ರತೆ.
ಸುಖ, ಶಾಂತಿ, ನೆಮ್ಮದಿ?
ಕಾವಲುಗಾರ ನಿದ್ರಿಸಿದ್ದಾನೆ
ನಿಶ್ಚಿಂತೆಯಿಂದ
ಕುಂಭಕರ್ಣನಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಷ್ಟೊ ಸಲ ನುಡಿಸಿರುವೆ ನೀ ಪಿಯಾನೋವನ್ನ
Next post ಲೈಟ್ ಬಿಲ್

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…