ಪ್ರಾರ್ಥನೆ

ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು
ಸೌಖ್ಯಸಾಗರದಲ್ಲಿ ಮೀಯಿಸೆಂದು
ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು
ನೀಡೆಂದು ಬೇಡುವೆನು ಕರುಣಸಿಂಧು

ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು
ತೆಗೆಯೆಂದು ಬೇಡುವೆನೆ ಓ ಅನಂತ
ತಡೆದುಕೊಳ್ಳುವ ಕಸುವ ನನ್ನ ಹೃದಯಕೆ ನೀಡು
ಮತ್ತೇನು ಬೇಕೆನಗೆ ಮೈಮೆವಂತ?

ಬಾಳ ಕೋಲಾಹಲದಿ ಹೆರರ ತೋಳಾಸರಕೆ
ಬಾಯಿತೆರೆಯುವಹಾಗೆ ಮಾಡಬೇಡ
ನನ್ನ ಸಾಮರ್ಥ್ಯವನ್ನು ನಂಬಿ ಮುಂದರಿಯುವಾ
ಆತ್ಮವಿಶ್ವಾಸವನ್ನು ನನಗೆ ನೀಡ

“ಉಳಿಸು ಉಳಿಸೈ” ನನ್ನ ಎಂಬ ಕನವರಿಕೆಯಲಿ
ಮುಳುಗದಿರಲೈ ದೀನವಾಗಿ ಬಾಸೆ
ಗೆಲ್ಲುವೆನು ನನ್ನಾತ್ಮ ಸ್ವಾತಂತ್ರವನು ಎಂದು
ತಾಳ್ಮೆಯಿಂದಲಿ ದುಡಿಯುತಿರಲಿ ಆಸೆ

ದಿವ್ಯವಾಗಿಹ ನಿನ್ನ ಕಾರುಣ್ಯದನುಭೂತಿ
ಓ ತಂದೆ ಗೆಲುವಿನಲ್ಲಿ ಮಾತ್ರ ಸಾಕೆ?
ಮಾಡದಿರು ಹೇಡಿಯನು! ನಿನ್ನ ಕರುಣೆಯ ಸುಖವು
ಸೋಲಿನಲ್ಲಿಯು ಕೂಡ ಬೇಡ ಯಾಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೨
Next post ರಂಗಣ್ಣನ ಕನಸಿನ ದಿನಗಳು – ೧೮

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…