ಪ್ರಾರ್ಥನೆ

ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು
ಸೌಖ್ಯಸಾಗರದಲ್ಲಿ ಮೀಯಿಸೆಂದು
ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು
ನೀಡೆಂದು ಬೇಡುವೆನು ಕರುಣಸಿಂಧು

ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು
ತೆಗೆಯೆಂದು ಬೇಡುವೆನೆ ಓ ಅನಂತ
ತಡೆದುಕೊಳ್ಳುವ ಕಸುವ ನನ್ನ ಹೃದಯಕೆ ನೀಡು
ಮತ್ತೇನು ಬೇಕೆನಗೆ ಮೈಮೆವಂತ?

ಬಾಳ ಕೋಲಾಹಲದಿ ಹೆರರ ತೋಳಾಸರಕೆ
ಬಾಯಿತೆರೆಯುವಹಾಗೆ ಮಾಡಬೇಡ
ನನ್ನ ಸಾಮರ್ಥ್ಯವನ್ನು ನಂಬಿ ಮುಂದರಿಯುವಾ
ಆತ್ಮವಿಶ್ವಾಸವನ್ನು ನನಗೆ ನೀಡ

“ಉಳಿಸು ಉಳಿಸೈ” ನನ್ನ ಎಂಬ ಕನವರಿಕೆಯಲಿ
ಮುಳುಗದಿರಲೈ ದೀನವಾಗಿ ಬಾಸೆ
ಗೆಲ್ಲುವೆನು ನನ್ನಾತ್ಮ ಸ್ವಾತಂತ್ರವನು ಎಂದು
ತಾಳ್ಮೆಯಿಂದಲಿ ದುಡಿಯುತಿರಲಿ ಆಸೆ

ದಿವ್ಯವಾಗಿಹ ನಿನ್ನ ಕಾರುಣ್ಯದನುಭೂತಿ
ಓ ತಂದೆ ಗೆಲುವಿನಲ್ಲಿ ಮಾತ್ರ ಸಾಕೆ?
ಮಾಡದಿರು ಹೇಡಿಯನು! ನಿನ್ನ ಕರುಣೆಯ ಸುಖವು
ಸೋಲಿನಲ್ಲಿಯು ಕೂಡ ಬೇಡ ಯಾಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೨
Next post ರಂಗಣ್ಣನ ಕನಸಿನ ದಿನಗಳು – ೧೮

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys