ಪ್ರಾರ್ಥನೆ

ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು
ಸೌಖ್ಯಸಾಗರದಲ್ಲಿ ಮೀಯಿಸೆಂದು
ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು
ನೀಡೆಂದು ಬೇಡುವೆನು ಕರುಣಸಿಂಧು

ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು
ತೆಗೆಯೆಂದು ಬೇಡುವೆನೆ ಓ ಅನಂತ
ತಡೆದುಕೊಳ್ಳುವ ಕಸುವ ನನ್ನ ಹೃದಯಕೆ ನೀಡು
ಮತ್ತೇನು ಬೇಕೆನಗೆ ಮೈಮೆವಂತ?

ಬಾಳ ಕೋಲಾಹಲದಿ ಹೆರರ ತೋಳಾಸರಕೆ
ಬಾಯಿತೆರೆಯುವಹಾಗೆ ಮಾಡಬೇಡ
ನನ್ನ ಸಾಮರ್ಥ್ಯವನ್ನು ನಂಬಿ ಮುಂದರಿಯುವಾ
ಆತ್ಮವಿಶ್ವಾಸವನ್ನು ನನಗೆ ನೀಡ

“ಉಳಿಸು ಉಳಿಸೈ” ನನ್ನ ಎಂಬ ಕನವರಿಕೆಯಲಿ
ಮುಳುಗದಿರಲೈ ದೀನವಾಗಿ ಬಾಸೆ
ಗೆಲ್ಲುವೆನು ನನ್ನಾತ್ಮ ಸ್ವಾತಂತ್ರವನು ಎಂದು
ತಾಳ್ಮೆಯಿಂದಲಿ ದುಡಿಯುತಿರಲಿ ಆಸೆ

ದಿವ್ಯವಾಗಿಹ ನಿನ್ನ ಕಾರುಣ್ಯದನುಭೂತಿ
ಓ ತಂದೆ ಗೆಲುವಿನಲ್ಲಿ ಮಾತ್ರ ಸಾಕೆ?
ಮಾಡದಿರು ಹೇಡಿಯನು! ನಿನ್ನ ಕರುಣೆಯ ಸುಖವು
ಸೋಲಿನಲ್ಲಿಯು ಕೂಡ ಬೇಡ ಯಾಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೨
Next post ರಂಗಣ್ಣನ ಕನಸಿನ ದಿನಗಳು – ೧೮

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…