ಬಂದೆಯಾ, ಮೋಹವೆಲ್ಲವನುಳಿದು? ಇಲ್ಲದಿರೆ
ನಿಲ್ಲು ಈ ಗೆರೆದಾಂಟಿ, ಬಾರದಿರು ಬಾರದಿರು!
ಉತ್ತುಂಗ ಶಿಖರಕ್ಕೆ ಹುಲುಬಿಂಬಿ ನೆಗೆದಂತೆ
ನಿನ್ನ ಗತಿಯಾದೀತು ಎಚ್ಚರಿಕೆ ಎಚ್ಚರಿಕೆ
ಮದಮೋಹಗಳನೆಲ್ಲ ಹೆಣಮಾಡಿ ಸುಟ್ಟೊಗೆದು
ರಸವರ್ಜ್ಯ ನೀನಾಗಿ, ಎದೆಯತಾಣವನೊಂದು
ರುದ್ರಭೂಮಿಯಮಾಡಿ ಆತ್ಮಶಿವನಾಗಲ್ಕೆ
ಹೆದರದೆಯೆ ಬಂದೊಡನೆ ಸಾಧ್ಯವಾಗುವದಲ್ತೆ?
ಇಂತು ಶಿವದೀಕ್ಷೆಯನು ನೀಡಲ್ಕೆ ನಿಂತಿರುವ
ರುದ್ರಪ್ರಯಾಗವನು ಕಂಡು ಅಪರಾಪೃಕೃತಿ
ಕುರುಸೈನ್ಯ ಕಂಡಂಜಿ ನಿಂತ ಉತ್ತರನಂತೆ
ತತ್ತರಿಸಿ ತಳಮಳಿಸಿ ಕಳವಳಕೆ ತುತ್ತಾಯ್ತು
ಓ ಗುರುವೆ ಈ ಕ್ಲೈಬ್ಯವನ್ನು ನೀ ಕಳೆದೊಗೆದು
ನನ್ನ ಮೇಲೆತ್ತಯ್ಯ ಗತಿನೀಡು ಮಾರ್ಗದಲಿ
*****
Related Post
ಸಣ್ಣ ಕತೆ
-
ಹುಟ್ಟು
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
-
ಹೃದಯದ ತೀರ್ಪು
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಒಂದು ಹಿಡಿ ಪ್ರೀತಿ
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…