Home / ಕವನ / ಕವಿತೆ / ಇದ್ದದ್ದನ್ನಿದ್ಹಾಂಗ

ಇದ್ದದ್ದನ್ನಿದ್ಹಾಂಗ

ಇದ್ದದ್ದನ್ನಿದ್ಹಾಂಗ ಬಾಯಿಬಿಟ್ಟು ಹೇಳಿದರ |
ಎದ್ದು ಬಂದು ಎದಿಗೀ ಒದೀತಾರಂತ || ಪ ||

ಛಲೋತ್ನಾಂಗ ಓದ್ರೀ ಅಂದ್ರ
ಕಾಪಿ ಮಾಡೋದು ತಪ್ಪೂ ಅಂದ್ರ |
ಹೊರಗ ಬಾ ನೋಡ್ಕೊತೀನಿ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೧ ||

ತೂಕಡಿಸ ಬಾಡ್ರೀ ಅಂದ್ರ
ಮೈ ಮುರಿದು ದುಡೀರಂದ್ರ |
ನಮ್ದಂಧೆ ನಮ್ಮಿಷ್ಟ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೨ ||

ಲಂಚಾ ಹೊಡಿಬ್ಯಾಡ್ರೀ ಅಂದ್ರ
ಎಂಜಲಾ ತಿನ್ನಬ್ಯಾಡ್ರೀ ಅಂದ್ರ |
ಸಿಕ್ದಾಗ ತಿನ್ನವ್ವಾ ಶಾಣ್ಯಾಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೩ ||

ಸತ್ಯಾನ ಹೇಳ್ರ್‍ಈ ಅಂದ್ರ
ಧರ್ಮಾನ ಮಾಡ್ರೀ ಅಂದ್ರ |
ತಲೀ ಕೆಟ್ಟಾದಂತ ಮಗನ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೪ ||

ಧೂಮಪಾನ ಬಿಡ್ರೀ ಅಂದ್ರ
ಮದ್ಯಪಾನ ಬಿಡ್ರೀ ಅಂದ್ರ |
ನೀ ಯಾಂವ ಕೇಳವ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೫ ||

ಇದ್ದದ್ದನ್ನಿದ್ಹಾಂಗ ಬಾಯಿಬಿಟ್ಟು ಹೇಳಿದರ |
ಎದ್ದು ಬಂದು ಎದಿಗಿ ಒದೀತಾರಂತ||
*****
೨೨-೧೨-೧೯೯೩

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...