ಯಾವ ಜನ್ಮದ ವೈರಿ ನೀನು?

ಹೊತ್ತು ಏರುವ ಮುನ್ನ
ಮುತ್ತು ಸುರಿಯುವ ಮುನ್ನ
ಅಸ್ತಂಗತನಾದನು ರವಿಯು.
ಕತ್ತಲಾಯಿತು ಜೀವನ.

ಬರಿದಾಯಿತು ಒಡಲು
ಬತ್ತಿ ಹೋಯಿತು ಒಲವು
ನಿನ್ನ ನೆನಪಲ್ಲಿ ಕೊಚ್ಚಿ ಹೋಯಿತು
ಜೀವಿಸುವ ನಿಲುವು.

ಯಾವ ಜನ್ಮದ ವೈರಿ ನೀನು
ಈ ಜನ್ಮದಲಿ ಬಂದು
ನನ್ನ ಮಡಿಲು ತುಂಬಿದೆ ಕಂದ
ಯಾಕೆ ಪ್ರಹ್ಲಾದನ ದಾರಿ ಹಿಡಿದೆ ನೀನು?

ನಿನ್ನ ತುಂಟತನ, ನಿನ್ನ ನಗೆಯ ಹೊನಲು
ಮರೆಯಲಾರೆನು ನಾನು
ನೀನೇಕೆ ನನ್ನ ಬಿಟ್ಟು ಹೋದೆ ಈ ಪಯಣದಲಿ
ಉಸಿರಾಡುವ ಶವವಾಗಿ?

ಹೇಗೆ ಬದುಕಲಿ ನಾನು ನಿನ್ನ ನೋಡದೆ
ಯಾವ ಜನ್ಮದ ಸೇಡು ತೀರಿಸಲು
ಹುಟ್ಟಿದೆ ನೀನು ನನ್ನ ಒಡಲಲ್ಲಿ.
ಯಾವ ಜನ್ಮದ ವೈರಿ ನೀನು?

(ನನ್ನ ಗೆಳತಿಯೊಬ್ಬಳು ಬೆಳೆದ ಮಗನನ್ನು ಬಸ್ಸು ಅಪಘಾತದಲ್ಲಿ ಕಳಕೊಂಡ ಸಂದರ್ಭದ ಬರೆದದ್ದು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು,
Next post ನನ್ನ ಹನಿಗವನ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…