Home / ಬಾಲ ಚಿಲುಮೆ / ಕವಿತೆ / ಹೋಳಿ ಹುಣ್ಣಿವೆ

ಹೋಳಿ ಹುಣ್ಣಿವೆ

ಹೋಳಿ ಹುಣ್ಣಿವೆ ದಿನದಂದು
ಸೋಮ್ ವ್ಯೋಮಾದಿ ಸೇರಿ
ಅಗೆದರು ಮನೆಯ ಮುಂದೊಂದು
ಕಾಮ ದಹನದ ಗುಂಡಿಯೊಂದು

ನೆಟ್ಟರು ನಾಲ್ಕು ಕೋಲು-ಗಳ
ಹಚ್ಚಲು ಬಣ್ಣದ ಹಾಳೆಗಳ
ಜಗಮಗ ಲೈಟನು ಹಾಕಿದರು
ಸೌದೆ ಹೊರೆಗಳ ಒಟ್ಟಿದರು

ಚಂದ್ರ ಜಗವನು ಬೆಳಗಿದನು
ಸೌದೆಗೆ ಘಾಸಲೇಟ್ ಚೆಲ್ಲಿದರು
ಬೆಂಕಿ ಕಡ್ಡಿಯನು ಗೀರಿದರು
ಧಗ ಧಗಿಸುತ್ತ ಉರಿಸಿದರು

ಕಾಮಣ್ಣ ಸತ್ತ ಎಂದೆನ್ನುತ್ತ
ಲಬೋ ಲಬೋ ಬಾಯಿ ಬಡಿಯುತ್ತ
ಕಾಮನ ಬೆಂಕಿಯ ಕೆಂಡಗಳಲ್ಲಿ
ಸುಟ್ಟು ತಿಂದರು ಕಡಲೆ ಗಿಡಗಳ

ಮರುದಿನ ಹೋಕುಳಿ ಆಡಿದರು
ಕೆಂಪು ಹಳದಿ ನೀಲಿ ಹಸಿರು
ಬಣ್ಣದ ಎರಕವ ಹೊಯ್ದರು
ಗುರುತು ಸಿಗದಂತೆ ಮಾಡಿದರು

ಹೆದರಿದವರ ಅಟ್ಟಿಸಿಕೊಂಡು
ಅರಚಿದವರ ಎತ್ತಿಕೊಂಡು
ಬಣ್ಣದ ಬೇಟೆಯ ಆಡಿದರು
ನಕ್ಕು ನಲಿದು ಕುಣಿದಾಡಿದರು

ಹೊಟ್ಟೆಯು ಚುರು ಚುರುಗುಟ್ಟಲು
ಮನೆಯ ಕಡೆಗೆ ಮುಖ ಮಾಡಿದರು
ಕನ್ನಡಿಯಲಿ ಮುಖ ನೋಡಿಕೊಂಡರು
ವಿಕೃತಿ ನೋಡಿ ಸುಸ್ತಾದರು

ಬಣ್ಣದ ಉಡುಪು ಕಳಚಿದರು
ಬಚ್ಚಲು ಮನೆಗೆ ಓಡಿದರು
ಸೋಪನು ಹಾಕಿ ಉಜ್ಜಿಕೊಳ್ಳುತ
ಸ್ನಾನವ ಮಾಡಿ ಮುಗಿಸಿದರು

ಕಾಮನ ದಹಿಸಿದ ಆ ಸಂಭ್ರಮದಲ್ಲಿ
ತಾಯಿ ಬಿಸಿ ಬಿಸಿ ಹೋಳಿಗೆ ಬಡಿಸಿದಳು
ಹೊಟ್ಟೆ ತುಂಬ ಉಂಡ ಸೋಮನು
ಗೊರ ಗೊರ ನಿದ್ದೆಯ ಮಾಡಿದನು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...