ಕಿಟ್ಟು-ಪುಟ್ಟು

ಕಿಟ್ಟು-ಪುಟ್ಟು ಗೆಳೆಯರು
ಒಂದು ಬೆಳಗು ಹೊರಟರು
ಟಾಮಿ ಮೋತಿ, ಅವರನ್ನು
ನಡೆದವು ಬಿಡದೆ ಬೆನ್ನನ್ನು

ಇಬ್ಬರೂ ಬೆಟ್ಟವ ಏರಿದರು
ಕವಳಿ ಕಾರಿಯ ನೋಡಿದರು
ಹಿಂದಿನ ರಾತ್ರಿ ಮಳೆ ಬಂದಿತ್ತು
ಗಿಡಗಳ ತುಂಬ ಹಣ್ಣಾಗಿತ್ತು

ಗೆಳೆಯರು ಹಣ್ಣು ಬಿಡಿಸುತ್ತ
ಬಾಯಿಗೆ ಎಸೆದುಕೊಳ್ಳುತ್ತ
ಆಹಾ ಆಹಾ ಚಪ್ಪರಿಸುತ್ತ
ಮೈಮರೆತಿದ್ದರು ಮೆಲ್ಲುತ್ತ

ನಾಯಿ ಮಾಡಿದ ಗಲಾಟೆಗೆ
ಮೆಟ್ಟಿ ಬಿದ್ದರು ಹೆದರಿಕೆಗೆ
ಮೋತಿ ಟಾಮಿಯ ನೋಡಿದರು
ತೋಳವ ನೋಡಿ ಬೆದರಿದರು

ತೋಳವು ನಾಯಿಗೆ ಹೆದರಿತ್ತು
ಬಾಲವ ಮುದುರಿ ಓಡಿತ್ತು
ತಮ್ಮನು ತಿನ್ನಲು ಬಂದಿತ್ತು
ತಿಳಿದರು ದೂರಾಯಿತು ಆಪತ್ತು

ಓಡಿಸಿ ಬಂದ ನಾಯಿಗಳನ್ನು
ಅಪ್ಪುತ ಕೊಟ್ಟರು ಹಣ್ಣನ್ನು
ತಿನ್ನುತ ಬಾಲವನಾಡಿಸುತ
ನಡೆದವು ಗೌರವ ತೋರಿಸುತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷ್ಣಗಿರಿ ಕೃಷ್ಣರಾಯರಿಗೆ
Next post ಚೆನ್ನವೀರ ಕಣವಿಯವರ ‘ಮೃತ್ಯುಬಂಧ’ – ಒಂದು ಟಿಪ್ಪಣಿ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys