Home / ಬಾಲ ಚಿಲುಮೆ / ಕವಿತೆ / ಪುಟ್ಟನ ಹಳ್ಳಿ

ಪುಟ್ಟನ ಹಳ್ಳಿ

ನಮ್ಮಯ ಹಳ್ಳಿ ಚಿಕ್ಕದು
ದೇಶಕೆ ಅನ್ನ ಇಕ್ಕುವುದು

ಊರ ಸುತ್ತ ಬೆಟ್ಟ
ಹಾಕಿದಂತೆ ಅಟ್ಟ
ಕಾರಿ ಟೆಂಗು ಕವಳೆ
ಸೀತಾಫಲ ನೇರಳೆ

ಅಗಸಿ ಊರ ಮುಂದೆ
ಆಲದ ಕಟ್ಟೆ ಹಿಂದೆ
ಸುಂದರ ದೇವಸ್ಥಾನ
ನೋಡು ರಥದ ಚಂದಾನ

ಊರ ಹೊರಗೆ ಶಾಲೆ
ನಮ್ಮ ಓದು ಅಲ್ಲೆ
ಬೇವಿನ ಮರಗಳೆರಡು
ಆಗಿವೆ ಗಂಧದ ಕೊರಡು

ಊರ ಹಿಂದೆ ಹಳ್ಳ
ಆಗಿದೆ ಅದು ಕೊಳ್ಳ
ಮಳೆಗಾಲದಲ್ಲಿ ಉಕ್ಕಿ
ಅಲ್ಲಿ ಉಲಿವವು ಹಕ್ಕಿ

ಬಟ್ಟೆ ಒಗೆಯುವ ತಾಣ
ಬದಿಗೆ ಕಬ್ಬಿನ ಗಾಣ
ಬನ್ನಿ ಹಾಲು ಕುಡಿಯೋಣ
ಅದರ ರುಚಿಯ ಸವಿಯೋಣ

ಸಣ್ಣ ಪುಟ್ಟ ಓಣಿ
ಅಲ್ಲೇ ಒಂದು ಗಿರಣಿ
ಸಂಜೆಗೆ ಜೋಳ ತಂದು
ಹಿಟ್ಟು ಮಾಡಿಸಿಕೊಂಡು

ಜೋಳದ ಬಿಸಿ ರೊಟ್ಟಿ
ತಿಂದರೆ ಹ್ಯಾಂಗ ಗಟ್ಟಿ
ಮೇಲೆ ಹಾಲು ಮಜ್ಜಿಗೆ
ಎಂಥ ಔಷಧಿ ನಿದ್ದೆಗೆ

ಎಲ್ಲರ ಮನೆಗಳ ಎತ್ತು
ಹಳ್ಳಿ ಬಾಳಿನ ಮುತ್ತು
ನಿತ್ಯ ಉತ್ತು ಬಿತ್ತಿ
ರೈತರ ಬಾಳ ಸಾಥಿ

ರಾಗಿ ಜೋಳ ಸೆಜ್ಜೆ
ಹುರುಳಿ ಸೇಂಗಾ ಗೆಜ್ಜೆ
ಹಲಸು ಮಾವು ತೋಪು
ಶುದ್ಧಗಾಳಿ ತಂಪು

ಮೂರು ಹೊತ್ತು ರೈತ
ಇರುವ ಹೊಲದಿ ಗೇಯುತ
ಗಡಿಯಲ್ಲಿ ಜೈ ಜವಾನ್
ಹಳ್ಳಿಯಲಿ ಜೈಕಿಸಾನ್

ಸಂತೆ ವಾರಕ್ಕೊಮ್ಮೆ
ಜಾತ್ರೆ ವರ್ಷಕ್ಕೊಮ್ಮೆ
ನೆಂಟರಿಷ್ಟರು ಬಂದು
ನಲಿದಾಡುವರು ಅಂದು

ಊರಿಗೆ ಯಾರೇ ಬರಲಿ
ನಮ್ಮ ಅತಿಥಿಯಾಗಲಿ
ಇದು ನಮ್ಮಯ ಹಂಬಲ
ನಿಮಗಿದೋ ತಾಂಬೂಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...