ಮಳೆಯ ಮೋಜು

ಅಮ್ಮನು ಇಲ್ಲದ ಹೊತ್ತು
ಮೊದಲ ಮಳೆ ಹನಿ ಬಿತ್ತು
ಆಡಲು ಬಾ ಎಂದಿತ್ತು
ಅಂಗಳಕೆ ಕರೆದಿತ್ತು

ತಟಪಟ ತಟಪಟ ಹನಿ
ಚಟಪಟ ಚಟಪಟ ದನಿ
ಯಾರೂ ಇಲ್ಲದ ಹೊತ್ತು
ಮೊದಲ ಮಳೆ ಹನಿ ಮುತ್ತು

ದಪ್ಪನೆ ಆಲಿಕಲ್ಲು
ಕರಗ್ಹೋಯ್ತು ಬಾಯಿಯ ಹಲ್ಲು
ಕುಣಿ ಕುಣಿದು ನಲಿದು ಬಿಟ್ಟೆ
ನೆಂದ್ಹೋಯ್ತು ಪೂರಾಬಟ್ಟೆ

ಘಮ್ಮೆಂದಿತು ಈ ಮಣ್ಣು
ನಕ್ಕಿತು ಮರ, ಗಿಡ, ಹಣ್ಣು
ಸಿಕ್ಕಿತು ನನಗೆ ಸ್ವರ್ಗ
ಏನೀ ಸುಂದರ ನಿಸರ್ಗ

ಮುಗಿಲು ತೊಟ್ಟ ಮಾಲೆ
ಮುತ್ತುಗಳ ಮಣಿಸಾಲೆ
ಭುವಿಗಾಯ್ತು ವರ್ಷಧಾರೆ
ನನಗೆ ಹರ್ಷಸೂರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರಲ್ಲಿ ಬೇಡಲಿ?
Next post ಮರವಾಗಿದ್ರೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…