ಮಳೆಯ ಮೋಜು

ಅಮ್ಮನು ಇಲ್ಲದ ಹೊತ್ತು
ಮೊದಲ ಮಳೆ ಹನಿ ಬಿತ್ತು
ಆಡಲು ಬಾ ಎಂದಿತ್ತು
ಅಂಗಳಕೆ ಕರೆದಿತ್ತು

ತಟಪಟ ತಟಪಟ ಹನಿ
ಚಟಪಟ ಚಟಪಟ ದನಿ
ಯಾರೂ ಇಲ್ಲದ ಹೊತ್ತು
ಮೊದಲ ಮಳೆ ಹನಿ ಮುತ್ತು

ದಪ್ಪನೆ ಆಲಿಕಲ್ಲು
ಕರಗ್ಹೋಯ್ತು ಬಾಯಿಯ ಹಲ್ಲು
ಕುಣಿ ಕುಣಿದು ನಲಿದು ಬಿಟ್ಟೆ
ನೆಂದ್ಹೋಯ್ತು ಪೂರಾಬಟ್ಟೆ

ಘಮ್ಮೆಂದಿತು ಈ ಮಣ್ಣು
ನಕ್ಕಿತು ಮರ, ಗಿಡ, ಹಣ್ಣು
ಸಿಕ್ಕಿತು ನನಗೆ ಸ್ವರ್ಗ
ಏನೀ ಸುಂದರ ನಿಸರ್ಗ

ಮುಗಿಲು ತೊಟ್ಟ ಮಾಲೆ
ಮುತ್ತುಗಳ ಮಣಿಸಾಲೆ
ಭುವಿಗಾಯ್ತು ವರ್ಷಧಾರೆ
ನನಗೆ ಹರ್ಷಸೂರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರಲ್ಲಿ ಬೇಡಲಿ?
Next post ಮರವಾಗಿದ್ರೆ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys