ದಾರಿ ತಪ್ಪಿದ ಕುದುರೆ

ನಾಡ ಕುದುರೆ ದಾರಿ ತಪ್ಪಿ
ಕಾಡದಾರಿ ಹಿಡಿಯಿತು

ಊರದಾರಿ ಕಾಣದಾಗ
ಭಾರಿದಿಗಿಲು ಗೊಂಡಿತು

ದೂರದಲ್ಲಿ ಕಾಡು ಕುದುರೆ
ಇದನು ನೋಡಿ ನಕ್ಕಿತು

ನಕ್ಕ ಕುದುರೆ ಕಂಡು
ತಾನು ಧೈರ್ಯವನ್ನು ತಾಳಿತು

ನಾಡಕುದುರೆ ಬಂದ ಸುದ್ದಿ
ಪ್ರಾಣಿಗಳಿಗೂ ತಿಳಿಯಿತು

ಹೊಸಬನನ್ನು ನೋಡಲೆಂದು
ತವಕದಿಂದ ಬಂದವು

ಕುಂಟ ಕೋತಿ, ತುಂಟ ಜಿಂಕೆ
ಸೊಂಟ ಹಿಡಿದು ಕುಣಿದವು

ಆನೆ, ಒಂಟೆ, ಕರಡಿ, ಹುಲಿಯು
ಕೈ ಕೈ ಹಿಡಿದು ನಲಿದವು

ಕೋಗಿಲೆಯೊಂದು ಹಾರಿಬಂದು
ರಾಗದಿಂದ ಹಾಡಿತು

ಮೊಲವು ನರಿಯು ಕೂಡಿ ಬಂದು
ತಿಂಡಿ ಊಟ ತಂದವು

ನಾಡ ಕುದುರೆ ಎಲ್ಲರೊಡನೆ
ಪ್ರೀತಿಯಿಂದ ಬೆರೆಯಿತು

ಪ್ರೀತಿ, ಸ್ನೇಹ ಸಿಕ್ಕಲು
ತನ್ನ ಊರೆ ಮರೆಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೇಣುಹಾಕಿದ ಮಾತು
Next post ಪುಟ್ಟುನ ಉಪಾಯ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…