ಶತಮಾನಗಳ ಹಿಂದೆ
ಲಜ್ಜೆಯ ಮುದ್ದೆಯಾಗಿ
ಸಹನೆಗೆ ಸಾಗರವಾಗಿ,
ಕ್ಷಮೆಗೆ ಭೂಮಿಯಾಗಿ,
ತಾಳ್ಮೆಯ ಕೊಳ ತೊಟ್ಟು
ದೇವಿಯ ಪಟ್ಟ ಪಡೆದು,
ದಿನದಿನವೂ ಕತ್ತಲೆಯಲಿ
ಅಸ್ತಿತ್ವ ಅಳಿಸಿಕೊಂಡು
ಕನಸುಗಳ ಶೂಲಕ್ಕೇರಿಸಿ
ಹೊಟ್ಟೆಯಲ್ಲಿ ಕೆಂಡದುಂಡೆಗಳ
ಗಟ್ಟಿಯಾಗಿ ಕಟ್ಟಿಕೊಂಡಿದ್ದೆ.
ನಿಶ್ಯಬ್ದ ಮನದಲ್ಲಿ
ನೋಟವಿಲ್ಲದೇ ಕಲ್ಲಾದ
ಗಾಜಿನಂತಹ ಕಣ್ಣುಗಳಲಿ
ಶೂಲಕ್ಕೇರುತ್ತಿರುವ ಕನಸುಗಳು,
ನೀಲಿ ಆಕಾಶದಡಿಯಲ್ಲಿ
ಒತ್ತೆಯಿಟ್ಟಿರುವ ಹೂನಗೆ,
ಕಾಂತಿಯುಕ್ತ ಕಣ್ಣುಗಳನ್ನು
ಎಲ್ಲಿ ಹುಡುಕಲಿ?
ಬನ್ನಿ ನನ್ನ ಕಳೆದ ಸ್ವಾತಂತ್ರ
ಹುಡುಕಿ ಕೊಡ ಬನ್ನಿ.
ನನ್ನ ಮಾತುಗಳನ್ನು
ಯಾರು ನುಂಗಿದರು?
ನೇಣು ಹಾಕಿದರು ಹೇಳಬನ್ನಿ.
*****
Related Post
ಸಣ್ಣ ಕತೆ
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ಆಪ್ತಮಿತ್ರ
ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…