ನಮ್ಮ ದ್ಯಾವರುಗಳ ಪವರ್‌ಮ್ಯಾಗೆ ಅಗ್ದಿ ಡವುಟಪ್ಪಾ!

ಕಳೆದ ವಾರವೆಲ್ಲಾ ಎಲ್ಲಾ ಟಿವಿ ಚಾನಲ್ಲು ಪತ್ರಿಕೆಗಳ ಕಾಲಂ ತುಂಬಾ ಕಾಶಿನಾಗ್ಳ ಸಂಕಟಮೋಚನ ಹನುಮಾನ್ ಮಂದಿರದಾಗೆ ಬಾಂಬ್ ಸ್ಫೋಟವಾಗಿ ಡೆತ್ತುಗಳಾದ ನ್ಯೂಸೋ ನ್ಯೂಸು. ಮುಸ್ಲಿಮರಿಗೆ ಮೆಕ್ಕಾ ಹೆಂಗೋ ಹಿಂದೂಗಳಿಗೆ ಕಾಶಿ ಹೋಲಿ ಪ್ಲೇಸ್ ಅಂತಾರೆ. ಆದರೆ ಹಿಂದುಗಳು ಯಾರು ಆಂಬೋದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ ಆಗೇತಿ. ವೈದಿಕ ಧರ್ಮ ಅಲಿಯಾಸ್ ಹಿಂದೂ ಧರ್ಮ ಅನ್ನೋ ಮಾತು ಸನಾತನ ಧರ್ಮದಾಟೇ ಓಲ್ಡ್ ಆತು. ನಮ್ಮಲ್ಲಿರೋ ಸಾವಿರಾರು ಜಾತಿಗಳಿಂದಾಗಿ ಕಾಶಿನಾಗಿರೋ ವಿಶ್ವನಾಥ ಬ್ರಾಂಬ್ರ ದೇವರೋ, ಲಿಂಗಾಯತರವನೋ ಅಂಬೋದೇ ಡವುಟುಫುಲ್ಲು. ಯಾಕಂತಿರಾ. ವಿಶ್ವನಾಥ ಅಂಬೋದು ಲಿಂಗದ ಸಿಂಬಾಲಿಕ್. ಹಂಗಾಗಿ ಅದು ಲಿಂಗಾಯತರ ಗಾಡು ಅಂದ್ರೆ ಬ್ರಾಂಬ್ರು ಜಾತಿನಾಗೆ ಸ್ಮಾರ್ತರು ಸಿವನ ಭಕ್ತರೆ. ಉಳಿದ ಜಾತಿಯೋರ್ಗೆ ಬ್ಯಾರೆ ಬ್ಯಾರೆ ಗಾಡ್ ಗಳಿವೆ ಎಸ್ ಸಿ – ಎಸ್ ಟಿ ಗಳಿಗೆ ಬ್ಯಾರೆ ನಮೂನೆ ಗಾಡ್ ಗಳಿವೆ. ಹೋಳಿಗೆ ಪಾಯಸದ ಅಡಿಗೆನಾ ಮೇಲ್ವರ್ಗದ ದೇವರು ಉಂಡ್ರೆ ಕೆಳವರ್ಗದ ದ್ಯಾವರಿಗೆ ನಾನ್ವೆಜ್ಜೆ ಬೇಕು. ದೇವರು ಗುಡಿ ಮುಂದಾಗಡೆ ಕುರಿ-ಕೋಣ ಬೀಳ್ಳೇಬೇಕು. ಕೋಳಿ ಕತ್ತರಿಸ್ಲೇಬೇಕು. ನಡಿತಲ್ಲ ದಾವಣಗೆರಿ ದುಗ್ಗಮ್ಮನ ಜಾತ್ರೆನಾಗೆ ೫೦,೦೦೦ಕ್ಕೂ ಹೆಚ್ಚು ಕುರಿ ಹತ್ತಾರು ಕೋಣ ಲಕ್ಷದ ಇಪ್ಪತ್ತಾರು ಸಾವಿರ ಕೋಳಿಗಳು ಕೋಳಿ ಜ್ವರದ ಬೀತಿನಾಗೂ ಮಂದಿ ಹೊಟ್ಟೆ ಸೇರಿದವು. ಅಧಿಕಾರಿಗಳ ಬಿಗಿ ಬಂದೋಬಸ್ತು ದಯಾ ಸಂಘದೋರ ಆಕ್ರಂದನದ ನಡುವೆ ಕುರಿ, ಕೋಳಿ, ಕೋಣಗಳ ಮರ್ಡರ್ ನಡ್ದೇ ಹೋತ್ರಪಾ. ಜನರ ಸನಾತನ ನಂಬಿಕೆ. ಜನಪರ ಸಾಂಸ್ಕೃತಿಕ ಆಚರಣೆ ತಡ್ರಿಕ್ ಹೊಂಟ್ರೆ ಗದ್ದಲವಾಯ್ತದೆ ಪ್ರಾಣಿಗಳ ಬದ್ಲು ನರಪ್ರಾಣಿಗಳೇ ಸತ್ತಾವು ಅಂತ ಆಧಿಕಾರಿಗಳು ಕಣ್ಣು ಮುಚ್ಚಿ ಕುಂತರು. ಅಯ್ಯಾಲೆ ಹೋಗಿ ನಾನ್ ವೆಜ್ ಪಾರ್ಟಿ ಮಾಡಿದೋರ ಮನೆಯಾಗಿ ಬಾಟ್ಲಿ ಸಮೇತ ಟೆಂಟ್ ಹೊಡದ್ರಂತೆ. ಇದೆಲ್ಲಾ ಯಾಕೆ ಹೇಳ್ದೆ ಅಂದ್ರೆ ಸಾಬ್ರಗೆ, ಕಿರಿಸ್ತಾನ್ರಿಗೆ ಇದ್ದಂಗೆ ನಮ್ಗೆ ಒಬ್ಬನೇ ದೇವರಿಲ್ಲವೆ. ನಾನಾ ನಮೂನಿ ಫೇಸ್ ಕಟ್ನ ಗಂಡು ಹೆಣ್ಣು ದೇವರುಗಳು ಕೈನಾಗೆ ಕೆತ್ತಿ ಗುರಾಣಿ ಬಾಣಬಿಲ್ಲು ತ್ರಿಶೂಲ ಹಿಡ್ಕೊಂಡು ವಾರ್ಗೆ ಹೊಂಟಗೆ ನಿಂತ್ಕಂಬಿಟ್ಟವೆ! ಒಂದೊಂದು ದ್ಯಾವರು ಡಿಫರೆಂಟ್ ಟೇಸ್ಟು. ದ್ಯಾವರ್ನಾಗೆ ಫೋರ್ತ್ ಕ್ಲಾಸ್ ನಾಗೆ ಬರೋ ಮಾರಮ್ಮ ದುಗ್ಗಮ್ಮ ಭೈರೆದ್ಯಾವರು ಇತ್ಯಾದಿಗಳಿಗೆ ಕುರಿ ಕೋಳಿ ಕೋಣಾನೆ ನೇವೇದ್ಯ ಮಾಡ್ಬೇಕು. ಕ್ಲಾಸ್ ಒನ್ ದೇವರುಗಳಾದ ಸತ್ಯನಾರಾಯಣ ಸ್ವಾಮಿಗೆ ತುಪ್ಪಾದಾಗೆ ಮಾಡಿದ ರವೆಗಂಜಿ ತರಾ ಸೀಪ್ರ ವಿಥ್ ಗೋಡಂಬಿ ದಾಕ್ಷಿ ಸಮೇತ ಮಜವಾಗಿರ್ತದೆ ಪರಸಾದ. ರಾಫವೇಂದ್ರ ಸ್ವಾಮಿಗೆ ಪರಿಮಳ ಪರಸಾದ. ಶ್ರೀರಾಮಚಂದ್ರ ಅವನ ಸರ್ವೆಂಟು ಹನುಮಂಗೆ ಪಾನಕ ಕೋಸಂಬ್ರಿ ಐಟಮ್ಮು, ಗಣಪನಿಗೆ ಕಡಬು, ಕಾಲರದಮ್ಮಂಗೆ ಹೋಳಿಗೆ, ಗೌರಮ್ಮಂಗೆ ಬಾಗಿನ, ಸಣ್ಣಪುಟ್ಟ ದೇವ್ರಿಗೆ ಚರುಪು ಯಾನೆ ಕಡ್ಲೆ ಹಿಟ್ಟು, ಮಾಧ್ವನಿಗೆ ಹಯಗ್ರೀವ, ಶ್ರೀ ಕೃಷ್ಣನಿಗೆ ಬೆಣ್ಣೆ, ಧರ್ಮಸ್ಥಳದ ಮಂಜುನಾಥಂಗೆ ರೆವೆಮಾಲ್ದಿ, ತಿರುಪತಿ ಗಾಡ್ ಗೆ ಲಡ್ಡು, ಅಣ್ಣಮ್ಮ ಚಾಮುಂಡೇಶ್ವರಿ ಅಂಬಾ ಭವಾನಿ ಇವರೆಲ್ಲಾ ನಾನ್ ವೆಜ್ ಗಿರಾಕಿಗಳೆ, ಉಕ್ಕಡಗಾತ್ತಿ ಆಜ್ಜಯ್ಯಂಗೆ ಭಾಳಸಸ್ತಾ ಮಂಡಕ್ಕಿ ಇಟ್ಟರಾತು. ಚಿಲ್ಲರೆ ದೇವರುಗಳಿಗೆ ಎಲ್ಡು ಬಾಳೆ ಹಣ್ಣು ಕಾಯಿಯಷ್ಟೇ ಗತಿ. ಕೆಲವು ಗಾಡ್‍ಗಳಾದವೆ ಅದಕ್ಕೆ ಮಾಂಸದ ಜೊತೆ ಡ್ರಿಂಕ್ಸೂ ಬೇಕ್ರಪಾ.

ಮೊನ್ನೆ ಸಂಕಟ ಮೋಚನ ಹನುಮನ್ನ ನಂಬಿ ಬಂದ ನೂರಾರು ಭಕ್ತರ ಮೇಲೆ ಬಾಂಬ್ ಬಿದ್ದರೂ ಸಂಕಟ ಪಟ್ಟರೂ ಹನುಮಂತ ಗದೆ ಎತ್ತಲಿಲ್ಲ. ಒದೆ ಕೊಡಲಿಲ್ಲ. ಈಗಂತೂ ಭಕ್ತಾಧಿಗಳಿಗೆ ದೇವರುಗಳ ರಕ್ಷಣೆಗಂತ್ಲೆ ಸೆಕ್ಯುರಿಟಿ ಗಾರ್ಡ್ಸ್ ಪೋಲೀಸು ಮಿಲಿಟರಿ ಪಡೆಗಳೇ ಗನ್ ಹೊತ್ಕೊಂಡು ನಿಂತರೂ ಯಾವ ಮಾಯದಾಗೋ ಬಂದ ಉಗ್ರಗಾಮಿಗಳು ದೇವರ ನೆತ್ತಿ ಮ್ಯಾಲೆ ಬಾಂಬ್ ಬಿಸಾಕ್ತಾರೆ ಅಂದಮ್ಯಾಲೆ ನಮ್ಮಗಳನ್ನ ಅದೇನು ಕಾಪಾಡ್ಯಾವು ಅಂಬೋ ಫಿಯರ್ರು. ಕಾಶಿ ಮಥುರ ರಾಮೇಶ್ವರದ ಮ್ಯಾಲೆ ಬಾಂಬ್ ಬಿದ್ದರೆ ಪೋಲೀಸಿನೋರ ಬೇಜವಾಬ್ದಾರಿ ಅಂತ ಉಗಿತಾರೆ. ಮುಸ್ಲಿಮರೆಲ್ಲಾ ಉಗ್ರಗಾಮಿಗಳಲ್ಲಿ ದೇವರ ನೆತ್ತಿ ಮ್ಯಾಲೆ ಬಾಂಬ್ ಬಿಸಾಕ್ತಾರೆ ಅಂದಮ್ಯಾಲೆ ನಮ್ಮಗಳನ್ನ ಅದೇನು ಕಾಪಾಡ್ಯಾವು ಅಂಬೋ ಫಿಯರ್ರು . ಬುದ್ಧಿ ಜೀವಿಗಳಂತೂ ದೇವ್ರ ಕಂಡ್ರೇನೇ ಅಲರ್ಜಿ. ಮುಸ್ಲಿಮರೆಲ್ಲಾ ಉಗ್ರಗಾಮಿಗಳಲ್ಲ ಅಂತ ಸೆಮಿನಾರ್ ಮಾಡ್ತಾರೆ. ಆಸ್ತಿಕರದು ಮೆಜಾರಿಟಿ ಐತೆ. ಆದ್ರೆ ನಾಸತಿಕರದು ಬಾಯಿ ಜೋರು. ಆಸ್ತಿಕರಲ್ಲಿ ಪಾರ್ಟ್ ಟೈಂ ನಾಸ್ತಿಕರವರೆ. ಮನೆಯಾಗೆ ಕಳ್ಳತನದಾಗೆ ಮಾಡ್ತವೆ. ಗುಡಿ ಗೋಪುರದ ಕಡೆ ತಲೆ ಹಾಕಲ್ಲ. ಮಂತ್ರಾಲಯ ಉಡುಪಿನಾಗೆ ಬರೋ ಭಕ್ತರ ತಾವೆಲ್ಲ ಭರ್ಜರಿ ದಕ್ಷಿಣೆ ಕಾಸು ಎತ್ತುತಾರೆ. ಆವಾಗ ಮಾತ್ರ ಜಾತಿ ಭೇಧ ಮಾಡಕ್ಕಿಲ್ಲ. ಉಣ್ಣೋ ವಿಷಯ ಬಂತೂ ಅಂದ್ರೆ ಅಂಗಿ ಬಿಚ್ಚು ಅಂತಾರೆ. ಜನಿವಾರದೋರ್ಗೆ ಬೇರೆ ಕಡೆ ಎಂಟ್ರಿ ನಾನ್ ಜನಿವಾರಿಗಳಿಗೆ ಸಪರೇಟ್ ಡಿನ್ನರ್ ಅರೇಂಜ್‍ಮೆಂಟ್ ಮಾಡಿರ್ತಾರೆ. ಈ ಕಾಲದಲ್ಲೂ ಪುಣ್ಯಕ್ಷೇತ್ರ ಅಂದುಕೊಳ್ಳೋ ಮಂತ್ರಾಲಯ ಉಡುಪಿನಾಗೆ ಊಟದಲ್ಲಿ ತಾರತಮ್ಯ ತೋರೋದು ನೋಡಿದ್ರ ಅಲ್ಲಿನ ಯತಿವರ್ಯರ ದರಬೇಸಿತನಕ್ಕೆ ಎಲ್ಲಿಂದ ನಗಬೇಕೋ ತಿಳೀವಲ್ದು. ಧರ್ಮಸ್ಥಳನಾ ಅಡ್ಡೆ ಮಾಡಿಕೊಂಡಿರೋ ಹೆಗಡೆ ಗೆಸ್ಟ್‍ಗಳಿಗೆ ಸಪರೇಟ್ ಡಿನ್ನರ್ ಅರೇಂಜ್ ಮಾಡಿ ಅವರ ಸಂಗಡ ಉಂಡು ಕೈ ತೊಳೆವ ಹೆಗ್ಗಡೆದು ಪಕ್ಕಾ ಬಿಸಿನೆಸ್ ಮೈಂಡು. ಉಳ್ಳವರನ್ನು ಮಠಾಧೀಶರು ಓಲೈಸೋಂಗೆ ರಾಜಕಾರಣಿಗಳ ಜೊತೆ ಡಿನ್ನರ್ ಮಾಡೋ ಖಯಾಲಿಗೆ ಬಿದ್ದಾರೆ ಕಾವಿ ಕುಬೇರರು.

ಹಿಂಗೆ ನಮ್ಮಿ ದೇವರುಗಳ್ನ ನಾವೇ ಅಲಕ್ಷ ಮಾಡ್ತೀವಿ ಅಂದ್ರೆ ನಂಬೋಕೂ ತಯಾರಿಲ್ಲ. ಇನ್ನು ಮಠದಯ್ಯಗಳ ಕಾವಿ ಪವರನ್ನಂತೂ ಮಂದಿ ಲೆಕ್ಕದಾಗೆ ಇಟ್ಟಿಲ್ಲ. ಭಕ್ತರ ಕಾಣಿಕೆ ಮೇಲೆ ಬದುಕೋ ಸ್ವಾಮಿಗಳ್ಗೆ ಶಾಪ ಕೊಡೋ ಪವರ್ ಎಲ್ಲಿದ್ದೀತು? ನಮ್ಮ ಮಂದಿ ಮೊದ್ಲೆ ವಿಚಾರವಾದಿಗಳು ಪ್ಲಸ್ ಅಹಿಂಸಾವಾದಿಗಳು. ಬೇರೆಯೋರ್ಗೆ ಮನೆನಾಗೆ ಜಾಗ ಕೊಟ್ಟು ಜಗಲಿ ಮ್ಯಾಗ್ ಮಲಗೋವಷ್ಟು ಉದಾರಿಗುಳ್ರಿ. ಅದ್ರಾಗೂ ಕನ್ನಡಿಗರಂತೂ ಮನೆಗೆ ಮಾರಿ ಪರರಿಗೆ ಉಪಕಾರಿಗಳು. ಕನ್ನಡ ರಾಜ್ಯದಾಗ ಕನ್ನಡವ ಮಾತಾಡೋಕು ಹೆದರಕಂತವೆ. ನಮ್ಮ ದೇಶದ ಬಾವುಟನ ಹಾರಿಸೋಕೆ ನಾಗಪುರದಾಗಿನ್ನ ಹಿಂದುಮುಂದು ನೋಡೋ ಕೋಮುವಾದಿ ಪೊಲಿಟಿಶಿಯನ್ಸು ಅವೆ! ಹಿಂಗೆ ಒಗ್ಗಟ್ಟು ಇಲ್ಲದ್ಕೆ ಉಗ್ರಗಾಮಿಗಳು ಆರಾಮಾಗಿ ದೇಶದಾಗೆ ಎಂಟ್ರಿಕೊಟ್ಟು ಬಾಂಬ್ ಇಕ್ಕತಾರೆ. ಕಾಶಿಗೆ ಬಾಂಬ್ ಇಟ್ಟರೂ ಕಾಶಿ ಶಾಂತವಾಗೇ ಐತೆ. ಬಿಜೆಪಿ, ವಿಹಿಂಪ, ಭಜರಂಗ ದಳದ ಮಂದಿ ಒಂದಿಷ್ಟು ಬಾಯಿ ಬಡ್ಕೊಂಡಿದ್ದು ಬಿಟ್ಟರೆ ಇಡೀ ಭಾರತ ದೇಶವೇ ಶಾಂತವಾಗೈತಿ. ಅಷ್ಟರ ಮಟ್ಟಿಗೆ ಹಿಂದು ಮುಸ್ಲಿಮರು ಬುದ್ಧಿವಂತರಾಗವರೆ. ರಾಜಕಾರಣಿಗಳ ಬೇಳೆ ಬೇಯೋಕೆ ಬಿಡ್ತಿಲ್ಲ ಅಂಬೋದೇ ಸಮಾಧಾನ. ಬುಷ್ ಬಂದು ಹೋಗಿದ್ದೇ ರಾಂಗ್ ಆದ ಮುಸ್ಸಿಂ ಉಗ್ರರು ಬಾಂಬ್ ಇಟ್ಟರು.

ಬಾಂಬ್ ಇಡೋರು ಉಗ್ರರು ಮುಸ್ಲಿಮರಾದರೂ ಮುಸ್ಸಿಮರೆಲ್ಲಾ ಉಗ್ರರಲ್ಲ ಅಂಬೋ ಇಚಾರ ಪ್ರಜ್ಞೆ ಉಂಟಾಗಿರೋದು ಶ್ಯಾನೆ ಹಾಪ್ಪಿ ನ್ಯಾಸು. ಉಗ್ರವಾದಿಗಳಿಗೆ ಮಾತ್ರ ಶಾಕಿಂಗ್ ನೂಸ್ ನೋಡ್ರಲಾ.
*****
( ದಿ. ೨೭-೦೩-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿ.ಜೆ.ಪಿ. ರಾಮಾಯಣೀಗ ಹೈರಾಣವಾಗೇತ್ರಿ!
Next post ವೃಂದಗಾನ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys